logo
ಕನ್ನಡ ಸುದ್ದಿ  /  ಮನರಂಜನೆ  /  Weekend With Ramesh: ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಕನಕಪುರ ಬಂಡೆ!; ಸಾಧಕರ ಕುರ್ಚಿ ಏರಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

Weekend with Ramesh: ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಕನಕಪುರ ಬಂಡೆ!; ಸಾಧಕರ ಕುರ್ಚಿ ಏರಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

Jun 01, 2023 01:19 PM IST

ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಕನಕಪುರ ಬಂಡೆ!; ಸಾಧಕರ ಕುರ್ಚಿ ಏರಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

    • Weekend with Ramesh: ಕನಕಪುರ ಬಂಡೆ, ಟ್ರಬಲ್‌ ಶೂಟರ್ ಎಂದೇ‌ ಕರೆಸಿಕೊಳ್ಳುವ ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಜೀವನ ಮತ್ತು ರಾಜಕೀಯ ಏರಿಳಿತದ ಸಂಚಿಕೆಗಳು ಶೀಘ್ರದಲ್ಲಿಯೇ ವೀಕೆಂಡ್‌ ವಿತ್‌ ರಮೇಶ್‌ ಶೋದಲ್ಲಿ ಪ್ರಸಾರವಾಗಲಿವೆ.   
ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಕನಕಪುರ ಬಂಡೆ!; ಸಾಧಕರ ಕುರ್ಚಿ ಏರಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌
ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಕನಕಪುರ ಬಂಡೆ!; ಸಾಧಕರ ಕುರ್ಚಿ ಏರಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

Weekend with ramesh: ಜೀ ಕನ್ನಡದಲ್ಲಿ ಪ್ರತಿ ವಾರ ಪ್ರಸಾರ ವಾಗುವ ಜನಪ್ರಿಯ ಶೋ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಸಾಧಕರ ಜೀವನ ಅನಾವರಣವಾಗುತ್ತಿದೆ. ಕಿರುತೆರೆಯ ವೀಕ್ಷಕರನ್ನು ಸೆಳೆದಿರುವ ಈ ವೀಕೆಂಡ್‌ ಶೋದಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಆಗಮಿಸಿದ್ದಾರೆ. ಸೀಸನ್‌ 5ರಲ್ಲಿ ಮೋಹಕ ತಾರೆ ರಮ್ಯಾ (Ramya) ಅವರಿಂದ ಆರಂಭವಾದ ಈ ಶೋ ಇದೀಗ ಕಳೆದ ವಾರ ಜೈ ಜಗದೀಶ್‌ (Jai Jagadish) ಅವರ ಆಗಮನವಾಗಿತ್ತು. ಇದೀಗ ಇದೇ ಶೋದಲ್ಲಿ ಟ್ರಬಲ್‌ ಶೂಟರ್‌, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ (D K Shivakumar) ಸಾಧಕರ ಕುರ್ಚಿಯಲ್ಲಿ ಆಸಿನರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಇದನ್ನೂ ಓದಿ: ಶೈತಾನ್‌ನಲ್ಲಿ ಕಡು ಕ್ರೂರಿ ಈ ರಿಷಿ, ವೆಬ್ ಸಿರೀಸ್‌ ಲೋಕಕ್ಕೆ ಕವಲುದಾರಿ ನಟ ಎಂಟ್ರಿ; ಜೂನ್‌ 15ರಿಂದ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಪ್ರಭಾವಿ ನಾಯಕನ ಏರಿಳಿತದ ಜೀವನ

ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ಕಾಂಗ್ರೆಸ್‌ ನಾಯಕ ಎನಿಸಿಕೊಂಡಿರುವ ಡಿ ಕೆ ಶಿವಕುಮಾರ್‌ ಅವರದ್ದು ಏರಿಳಿತದ ಬದುಕು. ಕಲರ್‌ಪುಲ್‌ ರಾಜಕಾರಣದ ಜತೆಗೆ ಮುಳ್ಳು ಹಾಸಿನ ಮೇಲಿನ ನಡಿಗೆಯೂ ಹೌದು. ಹತ್ತಾರು ವಿವಾದಗಳು, ಕೋರ್ಟ್‌ ಪ್ರಕರಣಗಳು ಡಿಕೆಶಿಯವರನ್ನು ಸುತ್ತುವರಿದಿವೆ. ಜೈಲಿಗೂ ಹೋಗಿ ಬಂದಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಹಲವು ಕೇಸ್‌ಗಳಿವೆ. ಇಡಿ, ಸಿಬಿಐಗೆ ಸಂಬಂಧಿಸಿದಂತೆಯೂ ಸದಾ ಸುದ್ದಿಯಲ್ಲಿರುತ್ತಾರೆ. ಇದೆಲ್ಲದರ ಜತೆಗೆ ರಾಜಕಾರಣದಲ್ಲಿಯೂ ಇವರದ್ದು ದೊಡ್ಡ ಹೆಸರು. ಆ ಹೆಸರಿನಿಂದಲೇ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಆಡಳಿತಕ್ಕೆ ತಂದ ಶ್ರೇಯ ಇವರಿಗೆ ಸಲ್ಲುತ್ತದೆ.

ಜೂನ್‌ 10, 11ರಂದು ಪ್ರಸಾರ ಸಾಧ್ಯತೆ

ಇದೀಗ ಇದೇ ಘಟಾನುಘಟಿ ನಾಯಕನ ನೈಜ ಜೀವನ ವೀಕೆಂಡ್‌ ವಿಥ್‌ ರಮೇಶ್‌ ಶೋದಲ್ಲಿ ಅನಾವರಣಗೊಳ್ಳಲಿದೆ. ರಾಜಕೀಯ ಮಾತ್ರವಲ್ಲದೆ, ವೈಯಕ್ತಿಕ ಜೀವನ, ಉದ್ಯಮ, ಅನುಭವಿಸಿದ ಯಾತನೆ ಎಲ್ಲವನ್ನೂ ವೀಕೆಂಡ್‌ ಶೋದಲ್ಲಿ ಅನಾವರಣ ಮಾಡಲಿದ್ದಾರೆ ಕನಕಪುರ ಬಂಡೆ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್.‌ ಹಾಗಾದರೆ, ಇವರ ಏಪಿಸೋಡ್‌ ಯಾವಾಗ ಶುರು? ಸದ್ಯಕ್ಕೆ ವಾಹಿನಿ ಕಡೆಯಿಂದ ಇದಿನ್ನು ಖಾತರಿ ಆಗಿಲ್ಲ. ಪ್ರಾಥಮಿಕ ವರದಿಯ ಪ್ರಕಾರ ಈ ಶನಿವಾರ ಮತ್ತು ಭಾನುವಾರ ಡಿಕೆಶಿ ಅವರ ವೀಕೆಂಡ್‌ ಶೋನ ಚಿತ್ರೀಕರಣ ನಡೆಯಲಿದೆ. ಅದಾದ ಬಳಿಕ ಮುಂದಿನ ವಾರ ಜೂನ್‌ ಎರಡನೇ ವಾರದಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಬೂದು ಬಣ್ಣದ ಬಿಗಿ ಉಡುಪು ಧರಿಸಿ ನೀಳಕಾಯ ಪ್ರದರ್ಶಿಸಿದ ಜಾಕ್‌ಲೀನ್‌; ಓಹೋ ಎಂದು ಉದ್ಗರಿಸಿದ ನೆಟ್ಟಿಗರು

ವೀಕೆಂಡ್‌ ಶೋನ ಸೀಸನ್‌ 5ರಲ್ಲಿ ರಮ್ಯಾ, ಪ್ರಭುದೇವ, ದತ್ತಣ್ಣ, ಡಾ. ಮಂಜುನಾಥ್‌, ಧನಂಜಯ್‌, ಪ್ರೇಮ್‌, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್‌, ನಾಗೇಂದ್ರ ಪ್ರಸಾದ್‌, ಜೈ ಜಗದೀಶ್‌ ಸೇರಿ ಇನ್ನೂ ಹಲವರು ಸಾಧಕರ ಕುರ್ಚಿ ಏರಿದ್ದರು. ಕೇವಲ ಸಿನಿಮಾ ಮತ್ತು ಇತರೆ ಕ್ಷೇತ್ರದ ಜತೆಗೆ ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ರಾಜಕಾರಣಿಗಳೂ ಈ ಶೋನ ಭಾಗವಾಗಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ