logo
ಕನ್ನಡ ಸುದ್ದಿ  /  ಮನರಂಜನೆ  /  ‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

Apr 21, 2024 01:52 PM IST

‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

    • ಏ. 27ರಿಂದ ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಲಿದೆ. ಆ ನಿಮಿತ್ತ ಈಗ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಈ ಶೋನ ತೀರ್ಪುಗಾರರು ಯಾರಿರಲಿದ್ದಾರೆ ಎಂಬ ಕುತೂಹಲ ತಣಿದಿದೆ. ಆಡಿಷನ್‌ ಮೂಲಕ ಐವರನ್ನು ಆಯ್ದುಕೊಂಡಿದ್ದಾರೆ ಜಗ್ಗೇಶ್! 
‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?
‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

Comedy Khiladigalu Premier League: ಜೀ ಕನ್ನಡ ನೋಡುಗರಿಗೆ ಮನರಂಜನೆಯ ರಸದೂಟವನ್ನೇ ನೀಡುತ್ತ ಬರುತ್ತಿದೆ. ಒಂದಾದ ಮೇಲೊಂದರಂತೆ ಹೊಸ ಹೊಸ ಶೋಗಳನ್ನು ಫ್ರೆಶ್‌ ಆಗಿಯೇ ನೋಡುಗನ ತಟ್ಟೆಗೆ ಬಡಿಸುತ್ತಿದೆ. ಇತ್ತೀಚೆಗಷ್ಟೇ ಸರಿಗಮಪ ಶೋ ಮುಗಿದ ಬಳಿಕ, ಆ ಸ್ಥಾನಕ್ಕೆ ಮಹಾನಟಿ ಎಂಟ್ರಿಯಾಗಿದೆ. ಅದಕ್ಕೂ ವೀಕ್ಷಕ ಬಹುಪರಾಕ್‌ ಹೇಳುತ್ತಿದ್ದಾನೆ. ಈಗ ಇದೇ ಗ್ಯಾಪ್‌ನಲ್ಲಿಯೇ ಕಾಮಿಡಿ ರಸಗವಳ ನೀಡಲು ಕಾಮಿಡಿ ಕಿಲಾಡಿಗಳು ಶೋ ಆಗಮಿಸುತ್ತಿದೆ. ಈ ಬಾರಿ ಒಂದಷ್ಟು ವಿಶೇಷತೆಗಳ ಜತೆಗೆ ಎಂಟ್ರಿಕೊಡಲಿದೆ.

ಟ್ರೆಂಡಿಂಗ್​ ಸುದ್ದಿ

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಕಾಮಿಡಿ ಕಿಲಾಡಿಗಳು ಕೀಟಲೆ ಮಾಡಲು ಸಜ್ಜಾಗಿದ್ದಾರೆ. ಅದರಂತೆ, ಈಗಾಗಲೇ ಬಗೆಬಗೆ ಪ್ರೋಮೋಗಳ ಮೂಲಕ ವೀಕ್ಷಕರನ್ನು ಸೆಳೆಯಲು ಪ್ಲಾನ್‌ ರೂಪಿಸಿದ್ದಾರೆ. ನಗುವಿನ ಹಬ್ಬ ಯಾವಾಗಿನಿಂದ ಶುರು ಎಂಬುದಕ್ಕೂ ಉತ್ತರ ರಿವೀಲ್‌ ಆಗಿದೆ. ಈ ನಡುವೆ ಒಂದು ವಿಶೇಷ ಸರ್ಪ್ರೈಸ್‌ ನೀಡಲು ಜೀ ಕನ್ನಡ ವಾಹಿನಿ ಮುಂದಾಗಿದೆ. ಅದೇನೆಂದರೆ, ಈ ಸಲದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಶೋನಲ್ಲಿ ಈ ಹಿಂದಿನ ತೀರ್ಪುಗಾರರು ಕಾಣಸಿಗುವುದಿಲ್ಲ. ಬದಲಿಗೆ, ನಿರೂಪಕರನ್ನೇ ತೀರ್ಪುಗಾರರನ್ನಾಗಿಸಿದ್ದಾರೆ ಜಗ್ಗೇಶ್.‌‌

ವಾರಾಂತ್ಯದಲ್ಲಿ ಮನರಂಜಿಸುತ್ತಿರುವ ಡ್ರಾಮಾ ಜೂನಿಯರ್ಸ್‌ ಸೀಸನ್‌ 5 ಇದೀಗ ಕೊನೇ ಹಂತಕ್ಕೆ ಬಂದಿದೆ. ಅಂದರೆ, ಇಂದು (ಏ. 21) ಈ ಶೋನ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ಜಿದ್ದಾಜಿದ್ದಿನ ಮಕ್ಕಳ ಸಮರದಲ್ಲಿ ಯಾರು ವಿಜೇತಯರಾಗುತ್ತಾರೆ ಎಂಬ ಕೌತುಕ ಮನೆ ಮಾಡಿದೆ. ಹೀಗೆ ವಿಜೇತರನ್ನು ಘೋಷಿಸಿಕೊಂಡ ಬಳಿಕ ಈ ಸೀಸನ್‌ ಸಮಾಪ್ತಿಯಾಗಲಿದೆ. ಅದಾದ ಬಳಿಕ, ಇದೇ ಸ್ಲಾಟ್‌ಗೆ ಕಾಮಿಡಿ ಕಿಲಾಡಿಗಳು ಎಂಟ್ರಿಕೊಡಲಿದ್ದಾರೆ. ಏ. 27ರಿಂದ ರಾತ್ರಿ 9ಕ್ಕೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶೋ ಆರಂಭವಾಗಲಿದೆ.

ಕುತೂಹಲ ಮೂಡಿಸಿದ ತೀರ್ಪುಗಾರರು!

ಈ ಹಿಂದಿನ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅಂದರೆ, ಸೀಸನ್‌ 4ರಲ್ಲಿ ನವರಸ ನಾಯಕ ಜಗ್ಗೇಶ್‌, ರಕ್ಷಿತಾ ಪ್ರೇಮ್‌, ನೆನಪಿರಲಿ ಪ್ರೇಮ್‌ ತೀರ್ಪುಗಾರರ ಸ್ಥಾನದಲ್ಲಿದ್ದರು. ಮಾಸ್ಟರ್‌ ಆನಂದ್‌ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಆದರೆ, ಈ ಸಲ ಭಾರೀ ಬದಲಾವಣೆಯ ಜತೆಗೆ ಈ ಶೋ ಆಗಮಿಸುತ್ತಿದೆ. ಅಂದರೆ, ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಆರು ಮಂದಿ ತೀರ್ಪುಗಾರರು ಈ ಸಲದ ವೇದಿಕೆ ಹಂಚಿಕೊಳ್ಳಲಿದ್ದಾರೆ. ಅವರು ಯಾರು ಎಂಬುದನ್ನು ಆಡಿಷನ್‌ ಮೂಲಕ ಸೆಲೆಕ್ಟ್‌ ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್!

ಐವರು ತೀರ್ಪುಗಾರರು, ಶಿವರಾಜ್‌ ಕೆಆರ್‌ ಪೇಟೆ ನಿರೂಪಣೆ

ಈ ಸಲದ ಶೋನಲ್ಲಿ ಮುಖ್ಯ ಜಡ್ಜ್‌ ಆಗಿ ಜಗ್ಗೇಶ್‌ ಕಾಣಿಸಿಕೊಂಡರೆ, ಅವರ ಜತೆಗೆ ಇನ್ನೂ ಐವರು ತೀರ್ಪುಗಾರರಾಗಿ ಇರಲಿದ್ದಾರೆ. ಆ ಪೈಕಿ ಜೀ ಕನ್ನಡದಲ್ಲಿ ಎಲ್ಲ ರಿಯಾಲಿಟಿ ಶೋಗಳ ನಿರೂಪಕರಾಗಿರುವ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಕುರಿ ಪ್ರತಾಪ್‌, ಶ್ವೇತಾ ಚಂಗಪ್ಪ ಈ ಸಲದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಿರೂಪಣೆ ಮಾಡುವ ಬದಲು ತೀರ್ಪುಗಾರರಾಗಿ ಕಣಕ್ಕಿಳಿಯಲಿದ್ದಾರೆ.

ಏ. 27ರಿಂದ ಶುರು

ಹಾಗಾದರೆ, ಈ ಶೋನ ನಿರೂಪಣೆ ಯಾರದ್ದು? ಆ ಕುತೂಹಲಕ್ಕೂ ಉತ್ತರವಿದೆ. ಈ ಶೋನ ನಿರೂಪಣೆಯನ್ನು ಕಾಮಿಡಿ ಕಿಲಾಡಿಗಳು ಶೋನ ವಿಜೇತ ಶಿವರಾಜ್‌ ಕೆಆರ್‌ ಪೇಟೆ ನಡೆಸಿಕೊಡಲಿದ್ದಾರೆ. ಇದೇ ಏ. 27ರಿಂದ ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಯಿಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಲಿದೆ. ಯಾವೆಲ್ಲ ಕಿಲಾಡಿಗಳು ಹಾಸ್ಯ ಉಕ್ಕಿಸಲು ಬರಲಿದ್ದಾರೆ ಎಂಬುದು ಆವತ್ತೇ ರಿವೀಲ್‌ ಆಗಲಿದೆ. ಸದ್ಯ ತೀರ್ಪುಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ಎಂಬಂತೆ ಹೊಸ ಪ್ರೋಮೋ ಬಿಡುಗಡೆಯಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ