Shilpa Shetty as Satyavati: ‘KD’ ರಣರಂಗ ಪ್ರವೇಶಿಸಿದ ಸತ್ಯವತಿ; 17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಕುಂದ್ರಾ ಸತಿ..
Mar 22, 2023 12:20 PM IST
‘KD’ ರಣರಂಗ ಪ್ರವೇಶಿಸಿದ ಸತ್ಯವತಿ; 17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಶಿಲ್ಪಾ ಶೆಟ್ಟಿ..
ಧ್ರುವ ಸರ್ಜಾ ನಟನೆಯ ಕೆಡಿ ರಣರಂಗಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಸತ್ಯವತಿ ಹೆಸರಿನ ಪಾತ್ರದ ಮೊದಲ ಲುಕ್ ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ.
Shilpa Shetty as Satyavati: ನಿರ್ದೇಶಕ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ‘ಕೆಡಿ’ ಸಿನಿಮಾ, ಶೀರ್ಷಿಕೆ ಟೀಸರ್ ಮೂಲಕವೇ ಸುದ್ದಿಯಲ್ಲಿದೆ. ಸ್ಟಾರ್ ಕಾಸ್ಟ್ ವಿಚಾರವಾಗಿಯೂ ಅಷ್ಟೇ ಟಾಕ್ ಕ್ರಿಯೇಟ್ ಮಾಡಿರುವ ಈ ಸಿನಿಮಾದಲ್ಲಿ ಘಟಾನುಘಟಿ ಸ್ಟಾರ್ ನಟರ ದಂಡೇ ನಟಿಸುತ್ತಿದೆ. ಇದೀಗ ಈ ರಣರಂಗಕ್ಕೆ ಮಂಗಳೂರು ಸುಂದರಿಯ ಆಗಮನವಾಗಿದೆ.
ಕೆಡಿ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಖಳನಾಗಿ ಅಬ್ಬರಿಸಲಿದ್ದಾರೆ ಎಂಬುದು ಈ ಹಿಂದೆಯೇ ಸುದ್ದಿಯಾದ ವಿಚಾರ. ಕ್ರೇಜಿಸ್ಟಾರ್ ರವಿಚಂದ್ರನ್ ಅಣ್ಣಯ್ಯಪ್ಪ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಇದೇ ಬಳಗಕ್ಕೆ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಎಂಟ್ರಿಯಾಗಲಿದೆ ಎಂದೇ ಈ ಹಿಂದೆ ಸುದ್ದಿಯಾಗಿತ್ತು. ಆದರೆ, ಅಧಿಕೃತವಾಗಿರಲಿಲ್ಲ. ಇದೀಗ ಅದು ನಿಜವಾಗಿದೆ. ಯುಗಾದಿ ಪ್ರಯುಕ್ತ ಸತ್ಯವತಿಯ ಲುಕ್ ಬಹಿರಂಗವಾಗಿದೆ.
ಬಾಲಿವುಡ್ ಅಂಗಳದಲ್ಲಿ ದೊಡ್ಡ ಹೆಸರು ಮಾಡಿರುವ ನಟಿ ಶಿಲ್ಪಾ ಶೆಟ್ಟಿ, ಸೌತ್ನ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿಯೂ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸುದೀರ್ಘ 17 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಚಂದನವನಕ್ಕೆ ರೀ ಎಂಟ್ರಿಕೊಟ್ಟಿದ್ದಾರೆ. ಕೆಡಿ ಸಿನಿಮಾದಲ್ಲಿ ಸತ್ಯವತಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದರ ಮೊದಲ ಲುಕ್ ಯುಗಾದಿ ಹಬ್ಬದ ಪ್ರಯುಕ್ತ ಇಂದು ರಿಲೀಸ್ ಆಗಿದೆ.
ಈ ಹಿಂದೆ ಅಂದರೆ 1998ರಲ್ಲಿ ರವಿಚಂದ್ರನ್ ಜತೆಗೆ ಪ್ರೀತ್ಸೋದ್ ತಪ್ಪಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದ ಈ ಚೆಲುವೆ ಅದಾದ ಬಳಿಕ ಒಂದಾಗೋಣ ಬಾ ಮತ್ತು ಉಪೇಂದ್ರ ಜತೆಗೆ ಆಟೋ ಶಂಕರ್ ಸಿನಿಮಾದಲ್ಲಿ ನಟಿಸಿದ್ದರು. ಅದೇ ಕೊನೇ ಆ ಬಳಿಕ ಮತ್ತೆಂದೂ ಕನ್ನಡದತ್ತ ಮುಖ ಮಾಡಿರಲಿಲ್ಲ. ಇದೀಗ ‘ಕೆಡಿ’ ಜತೆ ಆಗಮಿಸಲಿದ್ದಾರೆ.
ಇನ್ನು ಈಗಾಗಲೇ ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾವನ್ನು ವಿಶೇಷ ಸೆಟ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಈ ಚಿತ್ರಕ್ಕಾಗಿ ನಟ ಧ್ರುವ ಸರ್ಜಾ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತ: ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. 'ಧ್ರುವ ಸರ್ಜಾ 23 ದಿನಗಳಲ್ಲಿ 18 ಕಿಲೋ ತೂಕ ಇಳಿಸಿಕೊಂಡು ಕೆಡಿ ವಾರ್ ಫೀಲ್ಡ್ಗೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ' ಎಂದು ಪ್ರೇಮ್ ಬರೆದುಕೊಂಡಿದ್ದರು.
ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. 70- 80ರ ಕಾಲಘಟ್ಟದ ಭೂಗತ ಜಗತ್ತಿನ ಹಿನ್ನೆಲೆಯುಳ್ಳ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ.
Radhana Ram Kaatera Look: ‘ಕಾಟೇರ’ನ ಮನದರಸಿ ಪ್ರಭಾವತಿಯ ಪ್ರಭಾವಳಿ ಹೇಗಿದೆ ನೋಡಿ.. ಲಂಗ ದಾವಣಿಯಲ್ಲಿ ರಾಧನಾ ರಾಮ್ ಮಿಂಚಿಂಗ್...
Radhana Ram Kaatera Look: ‘ಕಾಟೇರ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ನ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಕಳೆದ ವರ್ಷವೇ ಈ ವಿಚಾರವನ್ನು ಖಚಿತಪಡಿಸಿದ್ದ ನಿರ್ದೇಶಕ ತರುಣ್ ಸುಧೀರ್, ಇದೀಗ ಯುಗಾದಿ ಹಬ್ಬದ ಪ್ರಯುಕ್ತ ನಾಯಕಿಯ ಫಸ್ಟ್ ಲುಕ್ ಬಹಿರಂಗಪಡಿಸಿದ್ದಾರೆ. ಇಲ್ಲಿದೆ ನೋಡಿ ಆ ಲುಕ್.. ಪ್ರಭಾವತಿಯ ಮೊದಲ ನೋಟದ ಜತೆಗೆ ಹಲವು ವಿಶೇಷತೆಗಳೂ ಪೋಸ್ಟರ್ನಲ್ಲಿದೆ. ಇಂದಿರಾ ಗಾಂಧಿಯ ಗೋಡೆ ಬರಹ, ರೈತರ ಬದುಕು, ಹಳ್ಳಿ ಜೀವನ ಎಲ್ಲವೂ ಪೋಸ್ಟರ್ನಲ್ಲಿ ಸೂಕ್ಷ್ಮವಾಗಿ ಅಡಗಿವೆ.. ಪೂರ್ತಿ ಓದಿಗೆ ಇಲ್ಲಿ ಕ್ಲಿಕ್ ಮಾಡಿ