logo
ಕನ್ನಡ ಸುದ್ದಿ  /  ಮನರಂಜನೆ  /  Athiya Shetty Trolled: ಕೈ ತುಂಬಾ ಹಣ ಇರುವಾಗ ಸಂಪ್ರದಾಯ ಪಾಲಿಸಲು ಸಮಸ್ಯೆ ಏನು...ಹಿಗ್ಗಾ ಮುಗ್ಗಾ ಟ್ರೋಲ್‌ ಆದ ಆಥಿಯಾ ಶೆಟ್ಟಿ..ವಿಡಿಯೋ

Athiya Shetty Trolled: ಕೈ ತುಂಬಾ ಹಣ ಇರುವಾಗ ಸಂಪ್ರದಾಯ ಪಾಲಿಸಲು ಸಮಸ್ಯೆ ಏನು...ಹಿಗ್ಗಾ ಮುಗ್ಗಾ ಟ್ರೋಲ್‌ ಆದ ಆಥಿಯಾ ಶೆಟ್ಟಿ..ವಿಡಿಯೋ

HT Kannada Desk HT Kannada

Feb 01, 2023 10:52 PM IST

ಕುಂಕುಮ, ಮಂಗಳಸೂತ್ರ ಧರಿಸದೆ ಟ್ರೋಲ್‌ ಆದ ಆಥಿಯಾ ಶೆಟ್ಟಿ

    • ನಿಮ್ಮ ತಂದೆ ತಾಯಿ ಮದುವೆಯಲ್ಲಿ ಸಂಪ್ರದಾಯ ಪಾಲಿಸಿದ್ದರು. ಆದರೆ ನೀವು ಮಾತ್ರ ಮದುವೆಯಾದರೂ ಭಾರತೀಯ ಸಂಪ್ರದಾಯವನ್ನು ಪಾಲಿಸುತ್ತಿಲ್ಲ. ಮದುವೆಗೆ ಮುಂಚೆ ಆದರೆ ನಿಮ್ಮಿಷ್ಟಕ್ಕೆ ಇರಬಹುದಿತ್ತು. ಅದರೆ ನೀವು ಈಗ ಗೃಹಿಣಿ. ಹೊಸದಾಗಿ ಮದುವೆಯಾಗುವ ಹೆಣ್ಣು ಮಗಳು ಸಿಂಧೂರ ಇಟ್ಟು, ಕೈ ತುಂಬಾ ಬಳೆ, ಮಂಗಳಸೂತ್ರ ಧರಿಸುತ್ತಾರೆ. ಆದರೆ ನೀವು ಈ ರೀತಿ ವಿದೇಶಿ ಸಂಸ್ಕೃತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ನೆಟಿಜನ್ಸ್‌ ಆಥಿಯಾಗೆ ಬುದ್ಧಿ ಹೇಳಿದ್ದಾರೆ.
ಕುಂಕುಮ, ಮಂಗಳಸೂತ್ರ ಧರಿಸದೆ ಟ್ರೋಲ್‌ ಆದ ಆಥಿಯಾ ಶೆಟ್ಟಿ
ಕುಂಕುಮ, ಮಂಗಳಸೂತ್ರ ಧರಿಸದೆ ಟ್ರೋಲ್‌ ಆದ ಆಥಿಯಾ ಶೆಟ್ಟಿ

ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್, ಕಳೆದ ವಾರ ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದರು. ಆಥಿಯಾ ಹಾಗೂ ರಾಹುಲ್‌ ಕುಟುಂಬ, ಆತ್ಮೀಯರಿಗಷ್ಟೇ ಮದುವೆಗೆ ಆಹ್ವಾನ ನೀಡಿತ್ತು. ಹೊಸದಾಗಿ ಮದುವೆಯಾಗಿದ್ದ ಈ ಜೋಡಿ 2 ದಿನಗಳ ಹಿಂದಷ್ಟೇ ಮುಂಬೈ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್ ಡೇಟ್ ಮುಗಿಸಿ ಹೊರಡುವಾಗ ಪಾಪರಾಜಿಗಳು ತೆಗೆದಿದ್ದ ಫೋಟೋಗಳು ವೈರಲ್‌ ಆಗಿದ್ದವು.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ನವ ದಂಪತಿ ಫೋಟೋಗಳನ್ನು ನೋಡಿ ಕೆಲವರು ಸಂತೋಷ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟ್ರೋಲ್‌ ಮಾಡಿದ್ದರು. ಆಥಿಯಾ ಶೆಟ್ಟಿ ಸಿಂಧೂರ ಇಟ್ಟಿಲ್ಲ, ಮಂಗಳಸೂತ್ರ ಧರಿಸಿಲ್ಲ. ಎಂಬ ಕಾರಣಕ್ಕೆ ಟ್ರೋಲ್‌ ಆಗಿದ್ದಾರೆ. ನಿಮ್ಮ ತಂದೆ ತಾಯಿ ಮದುವೆಯಲ್ಲಿ ಸಂಪ್ರದಾಯ ಪಾಲಿಸಿದ್ದರು. ಆದರೆ ನೀವು ಮಾತ್ರ ಮದುವೆಯಾದರೂ ಭಾರತೀಯ ಸಂಪ್ರದಾಯವನ್ನು ಪಾಲಿಸುತ್ತಿಲ್ಲ. ಮದುವೆಗೆ ಮುಂಚೆ ಆದರೆ ನಿಮ್ಮಿಷ್ಟಕ್ಕೆ ಇರಬಹುದಿತ್ತು. ಅದರೆ ನೀವು ಈಗ ಗೃಹಿಣಿ. ಹೊಸದಾಗಿ ಮದುವೆಯಾಗುವ ಹೆಣ್ಣು ಮಗಳು ಸಿಂಧೂರ ಇಟ್ಟು, ಕೈ ತುಂಬಾ ಬಳೆ, ಮಂಗಳಸೂತ್ರ ಧರಿಸುತ್ತಾರೆ. ಆದರೆ ನೀವು ಈ ರೀತಿ ವಿದೇಶಿ ಸಂಸ್ಕೃತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ನೆಟಿಜನ್ಸ್‌ ಆಥಿಯಾಗೆ ಬುದ್ಧಿ ಹೇಳಿದ್ದಾರೆ.

ನೀವು ಸೆಲೆಬ್ರಿಟಿ ಕಿಡ್‌ ಆಗಿ ನೂರಾರು ಜನರಿಗೆ ಮಾದರಿ ಆಗಬೇಕು. ಸಾಮಾನ್ಯ ಹುಡುಗಿಯರೇ ಹೊಸದಾಗಿ ಮದುವೆಯಾದ ನಂತರ ಮಂಗಳಸೂತ್ರ ತೊಡುತ್ತಾರೆ, ನಿಮಗೆ ಸಮಸ್ಯೆ ಏನು..? ಕೈ ತುಂಬಾ ದುಡ್ಡು ಇರುವಾಗ ಸಂಪ್ರದಾಯ ಪಾಲಿಸಲು ನಿಮಗೆ ಇರುವ ಅಡ್ಡಿ ಏನು..? ಎಂದು ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದಾರೆ. ಆದರೆ ಆಥಿಯಾ ಆಗಲೀ ರಾಹುಲ್‌ ಆಗಲೀ ಈ ಟ್ರೋಲ್‌ಗೆ ತಲೆ ಕೆಡಿಸಿಕೊಂಡಿಲ್ಲಂತೆ ಕಾಣುತ್ತಿದೆ.

ರಾಹುಲ್‌ ಹಾಗೂ ಅಥಿಯಾ ಪ್ರೀತಿಸುತ್ತಿದ್ದು ಶೀಘ್ರದಲ್ಲೇ ಮದುವೆಯಾಗ್ತಾರೆ ಎಂಬ ಸುದ್ದಿ ಕೆಲವು ವರ್ಷಗಳಿಂದ ಕೇಳಿ ಬಂದಿತ್ತು. ಆದರೆ ಈ ಜೋಡಿ ಮಾತ್ರ ತಮ್ಮ ಮದುವೆ ವಿಚಾರವನ್ನು ನಿರಾಕರಿಸುತ್ತಲೇ ಬಂದಿದ್ದರು. ಕೊನೆಗೂ ಜನವರಿ 23 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಲೋಖಂಡವಾಲದ ಸುನಿಲ್‌ ಶೆಟ್ಟಿ ಮನೆಯಲ್ಲೇ ಈ ಮದುವೆ ನೆರವೇರಿದೆ. ಶೀಘ್ರದಲ್ಲೇ ಈ ಜೋಡಿಯ ಆರತಕ್ಷತೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಬಾಲಿವುಡ್‌, ಕ್ರಿಕೆಟ್‌ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ವಿಜಯ್‌ ದೇವರಕೊಂಡ ಫ್ಯಾನ್ಸ್‌ ಬಳಿ ಕ್ಷಮೆ ಯಾಚಿಸಿದ ಸಮಂತಾ...ಈ ಬ್ಯೂಟಿ ಮಾಡಿದ ತಪ್ಪಾದ್ರೂ ಏನು?

ಸಮಂತಾ ಹಾಲಿವುಡ್‌ ಸೈನ್ಸ್‌ ಫಿಕ್ಷನ್‌ ಸಿಟಾಡೆಲ್‌ನ ಹಿಂದಿ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಈ ಸೀರೀಸ್‌ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಆದರೆ ವಿಜಯ್ ದೇವರಕೊಂಡ ಜೊತೆಗಿನ ಚಿತ್ರಕ್ಕೆ ಸ್ಯಾಮ್ ಡೇಟ್ಸ್ ನೀಡುತ್ತಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮತ್ತಷ್ಟು ಮಾಹಿತಿಗೆ ಕ್ಲಿಕ್‌ ಮಾಡಿ

ಶಿವರಾಜ್‌ಕುಮಾರ್‌ ಸಿನಿಮಾ ಹಾಡಿನ ಸಾಲುಗಳೇ ಹಯವದನ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್‌...!

ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಯವದನ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್‌ ಗಮನ ಸೆಳೆಯುತ್ತಿದೆ. ಸಿನಿಮಾ ಹಾಡುಗಳನ್ನು ಚಿತ್ರದ ಟೈಟಲ್‌ ಆಗಿ ಬಳಸುವುದು ಈಗ ಟ್ರೆಂಡ್‌ ಆಗಿದೆ. ಪೂರ್ತಿ ಸ್ಟೋರಿಯನ್ನು ಓದಲು ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ