logo
ಕನ್ನಡ ಸುದ್ದಿ  /  ಮನರಂಜನೆ  /  ಆಂಜನೇಯ ಪರಮಭಕ್ತ ಧ್ರುವ ಸರ್ಜಾರನ್ನು ಭೇಟಿಯಾದ ಹನುಮಾನ್ ಸಿನಿಮಾದ ಹೀರೋ

ಆಂಜನೇಯ ಪರಮಭಕ್ತ ಧ್ರುವ ಸರ್ಜಾರನ್ನು ಭೇಟಿಯಾದ ಹನುಮಾನ್ ಸಿನಿಮಾದ ಹೀರೋ

Praveen Chandra B HT Kannada

Jan 07, 2024 06:04 PM IST

ಆಂಜನೇಯ ಪರಮಭಕ್ತ ಧ್ರುವ ಸರ್ಜಾರನ್ನು ಭೇಟಿಯಾದ ಹನುಮಾನ್ ಸಿನಿಮಾದ ಹೀರೋ ತೇಜ ಸಜ್ಜಾ

    • ರವಿ ತೇಜಾ ಪುತ್ರ ತೇಜ ಸಜ್ಜಾ ನಾಯಕ ನಟನಾಗಿ ನಟಿಸಿದ ಹನುಮಾನ್‌ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಕರ್ನಾಟಕಕ್ಕೆ ಆಗಮಿಸಿದೆ. ಇಂದು ತೇಜ ಸಜ್ಜಾ ಅವರು ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾರನ್ನು ಭೇಟಿಯಾಗಿದ್ದಾರೆ.
ಆಂಜನೇಯ ಪರಮಭಕ್ತ ಧ್ರುವ ಸರ್ಜಾರನ್ನು ಭೇಟಿಯಾದ ಹನುಮಾನ್ ಸಿನಿಮಾದ ಹೀರೋ ತೇಜ ಸಜ್ಜಾ
ಆಂಜನೇಯ ಪರಮಭಕ್ತ ಧ್ರುವ ಸರ್ಜಾರನ್ನು ಭೇಟಿಯಾದ ಹನುಮಾನ್ ಸಿನಿಮಾದ ಹೀರೋ ತೇಜ ಸಜ್ಜಾ

ಬೆಂಗಳೂರು: ಧ್ರುವ ಸರ್ಜಾ ಆಂಜನೇಯನ ಪರಮಭಕ್ತ. ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾರನ್ನು ರವಿ ತೇಜಾ ಪುತ್ರ ತೇಜ ಸಜ್ಜಾ ಇಂದು ಭೇಟಿಯಾಗಿದ್ದಾರೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ತೇಜ, ಈ ವೇಳೆ ಆಂಜನೇಯನ ಪರಮಭಕ್ತ ಧ್ರುವರನ್ನು ಭೇಟಿಯಾಗಿ ಕೆಲ‌ಕಾಲ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್‌

ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡ ಸಿನಿಮಾದಲ್ಲಿ ಟ್ಯೂನ್‌ ಹೋಲಿಕೆ ಇದ್ರೂ ಕೇಸ್‌, ಯಾಕೆ ಹೀಗೆ? ಕವಿರಾಜ್‌ ಪ್ರಶ್ನೆ

ಸಲಿಂಗಕಾಮಿ ಎಂದ ಮಾಜಿ ಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು; ಯಾವುದೇ ಬಗೆಯ ಲೈಂಗಿಕತೆಯ ಕುರಿತು ಹೆಮ್ಮೆ ಇದೆ ಎಂದ ನಟ

Blink Movie: ಥಿಯೇಟರ್‌ನಲ್ಲಿ ನೋಡದ್ದಕ್ಕೆ ಕ್ಷಮಿಸಿ; ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ

ತೆಲುಗು ಯುವ ನಟ ತೇಜ ಸಜ್ಜಾ ನಟಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಹನುಮಾನ್‌" ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಇದು ಸೂಪರ್‌ ಹೀರೋ ಸಿನಿಮಾ. ಇಲ್ಲಿ ಹನುಮಂತನ ಪೌರಾಣಿಕದ ಕಥೆಯ ಬದಲು ಹನುಮಂತನಂತಹ ಶಕ್ತಿ ಹೊಂದಿರುವ ನಾಯಕನ ಕುರಿತು ಹೇಳಿರುವುದು ಈಗಾಗಲೇ ಟ್ರೇಲರ್‌ನಲ್ಲಿ ಸ್ಪಷ್ಟವಾಗಿದೆ. ಮುಂದಿನ ವಾರ ಬಿಡುಗಡೆಯಾಗಲಿರುವ ತಮ್ಮ ಸಿನಿಮಾ ನೋಡುವಂತೆ ಧ್ರುವ ಸರ್ಜಾ ಅವರಿಗೆ ತೇಜ ಮನವಿ ಮಾಡಿದ್ದಾರೆ.

ಹನುಮಾನ್ ಟ್ರೇಲರ್ ಅದ್ಭುತವಾಗಿದ್ದು, ತಾವು ಸಿನಿಮಾ ನೋಡುವುದಾಗಿ ಆಕ್ಷನ್ ಪ್ರಿನ್ಸ್ ತಿಳಿಸಿದ್ದಾರೆ. ಧ್ರುವ ಸರ್ಜಾ ನಟನೆಯ ಕೆಡಿ, ಮಾರ್ಟಿನ್ ಸಿನಿಮಾಗೆ ತೇಜ ಸಜ್ಜಾ ಶುಭಾಶಯ ಕೋರಿದ್ದು, ನಿಮ್ಮ ಪೊಗರು ಸಿನಿಮಾ ತೆಲುಗು ರಂಗದಲ್ಲಿ ಸದ್ದು ಮಾಡಿತ್ತು. ನೀವು ಅದ್ಭುತವಾಗಿ ಆಕ್ಷನ್ ಮಾಡುತ್ತೀರಾ ಎಂದು ಧ್ರುವ ನಟನೆಯನ್ನು ತೇಜ ಮೆಚ್ಚಿಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜಾ ನಟಿಸುತ್ತಿದ್ದು, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ.

ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಹನುಮಾನ್‌ ಕುರಿತು ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ. ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜನವರಿ 12, 2024ರಂದು ಬಹು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗೆ ಹನುಮಾನ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಈ ಟ್ರೈಲರ್‌ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಹನುಮಾನ್‌ ಸಿನಿಮಾದ ಟ್ರೈಲರ್‌ ವೀಕ್ಷಿಸಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ