Karnataka Election 2023: ಬಿಜೆಪಿ, ಕಾಂಗ್ರೆಸ್ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ಅಭ್ಯರ್ಥಿಗಳಿವರು
Apr 27, 2023 10:11 AM IST
ಸಾಂದರ್ಭಿಕ ಚಿತ್ರ
- ಬಂಡಾಯವೆದ್ದ ಹಲವು ಘಟಾನುಘಟಿ ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ನಾಯಕರ ಪರ ಕಾರ್ಯಕರ್ತರ ಪ್ರಚಾರ ಜೋರಾಗಿ ನಡೆಯುತ್ತಿದೆ. ಬಂಡಾಯದ ಅಲೆಯಿಂದಾಗಿ ಮತವಿಭಜನೆಯಾಗಲಿದ್ದು, ಪ್ರಮುಖ ಪಕ್ಷಗಳಿಗೆ ಮತಗಳ ಕೊರತೆಯಾಗುವುದರ ಜೊತೆಗೆ, ಸೋಲಿನ ಭೀತಿಯೂ ಹೆಚ್ಚಾಗಲಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಅಬ್ಬರದ ಪ್ರಚಾರಕ್ಕೆ ಧುಮುಕಿವೆ. ಈ ನಡುವೆ ಸ್ಥಳೀಯ ಪಕ್ಷ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆಯಲು ಸಿದ್ಧವಾಗಿದೆ. ಆದರೆ, ಈ ಬಾರಿ ರಾಜ್ಯ ಚುನಾವಣೆಯಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ರೋಚಕ ಹಣಾಹಣಿ ಹಾಗೂ ಸೋಲು ಗೆಲುವಿನ ಲೆಕ್ಕಾಚಾರ ಈ ಮೂರು ಪಕ್ಷಗಳ ನಡುವೆ ಮಾತ್ರವಲ್ಲ. ಘಟಾನುಘಟಿ ನಾಯಕರಿಗೆ ಪ್ರಬಲ ಪೈಪೋಟಿ ನೀಡಲು ಪಕ್ಷೇತರ ಅಭ್ಯರ್ಥಿಗಳು ಒಂಟಿ ಕಾಲಲ್ಲಿ ನಿಂತಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಟಿಕೆಟ್ ಘೋಷಿಸಿದ ಬೆನ್ನಲ್ಲೇ, ಟಿಕೆಟ್ ವಂಚಿತ ಹಲವು ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿತು. ಇವರಲ್ಲಿ ಪ್ರಬಲ ನಾಯಕರು ಕೂಡಾ ಸೇರಿದ್ದಾರೆ. ಈ ನಡುವೆ ಬಂಡಾಯವೆದ್ದ ಹಲವು ಧುರೀಣರು ಹಾಗೂ ಯುವ ನಾಯಕರು ಪಕ್ಷಾಂತರದ ಮೊರೆ ಹೋಗಿದ್ದಾರೆ. ಸದ್ಯ ರಾಜ್ಯದಲ್ಲಿ ಟಿಕೆಟ್ ಸಿಗದೆ ಪಕ್ಷೇತರರಾಗಿ ಕಣಕ್ಕಿಳಿದು, ರಾಷ್ಟ್ರೀಯ ಪಕ್ಷಗಳಿಗೆ ಪ್ರಮುಖ ಸವಾಲಾಗಿರುವ ಅಭ್ಯರ್ಥಿಗಳ ವಿವರ ಇಲ್ಲಿದೆ.
ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವ ಬಿಜೆಪಿ ಬಂಡಾಯ ಅಭ್ಯರ್ಥಿಗಳು
ಬಂಡಾಯವೆದ್ದ ಕಾಂಗ್ರೆಸ್ ಅಭ್ಯರ್ಥಿಗಳು
ಸದ್ಯ ಪ್ರಮುಖ ಬಂಡಾಯವೆದ್ದ ಹಲವು ಘಟಾನುಘಟಿ ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ನಾಯಕರ ಪರ ಕಾರ್ಯಕರ್ತರ ಪ್ರಚಾರ ನಡೆಯುತ್ತಿದೆ. ಬಂಡಾಯದ ಅಲೆಯಿಂದಾಗಿ ಮತವಿಭಜನೆಯಾಗಲಿದ್ದು, ಪ್ರಮುಖ ಪಕ್ಷಗಳಿಗೆ ಮತಗಳ ಕೊರತೆಯಾಗುವುದರ ಜೊತೆಗೆ, ಸೋಲಿನ ಭೀತಿಯೂ ಹೆಚ್ಚಾಗಲಿದೆ.