ಕನ್ನಡ ಸುದ್ದಿ  /  ಮನರಂಜನೆ  /  Kangana Ranaut: ರಾಜಕಾರಣಿಗಳು ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ 30 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ; ಕಂಗನಾ ರನೌತ್‌

Kangana Ranaut: ರಾಜಕಾರಣಿಗಳು ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ 30 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ; ಕಂಗನಾ ರನೌತ್‌

ಹಿಂದೂ ವಿರೋಧಿ, ದೇಶವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಅನೇಕ ಸಂಸ್ಥೆಗಳು ನನ್ನನ್ನು ಬ್ರಾಂಡ್‌ ಅಂಬಾಸಿಡರ್‌ ಸ್ಥಾನದಿಂದ ಕೈ ಬಿಟ್ಟವು. ಇದರಿಂದ ನನಗೆ 30-40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಕಂಗನಾ ರನೌತ್‌
ಕಂಗನಾ ರನೌತ್‌

ಬಾಲಿವುಡ್‌ ನಟಿ ಕಂಗನಾ ರನೌತ್‌ ಒಂದೆಡೆ ಕಾಂಟ್ರವರ್ಸಿ ಕ್ವೀನ್‌ ಎಂದು ಗುರುತಿಸಿಕೊಂಡಿದ್ದರೆ, ಮತ್ತೊಂದು ಕಡೆ ಡೇರ್‌ ಡೆವಿಲ್‌ ಎಂದೂ ಹೆಸರಾಗಿದ್ದಾರೆ. ಯಾರು ಏನೇ ಹೇಳಲಿ ತನಗೆ ಅನಿಸಿದ್ದನ್ನು ಥಟ್‌ ಎಂದು ಹೇಳುವ ವ್ಯಕ್ತಿತ್ವದಿಂದಾಗಿ ಕಂಗನಾ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ.

ಒಬ್ಬ ಸ್ಟಾರ್‌ ನಟಿಯಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟರೆ ಅದು ಸೂಕ್ತವಲ್ಲ ಎಂದು ಎಂದಿಗೂ ಕಂಗನಾ ಯೋಚನೆ ಮಾಡಿದವರಲ್ಲ. ಈ ರೀತಿ ಮಾತನಾಡಿ ಅವರು ಅನೇಕರ ವಿರೋಧ ಎದುರಿಸಿದ್ದಾರೆ, ಈಗಲೂ ಎದುರಿಸುತ್ತಿದ್ದಾರೆ. ಅದರಲ್ಲಿ ಬಾಲಿವುಡ್‌ ಮಂದಿ ಕೂಡಾ ಇದ್ದಾರೆ. ಬಾಲಿವುಡ್‌ನಲ್ಲಿ ಯಾರೂ ನನ್ನೊಂದಿಗೆ ಗೆಳೆತನ ಮಾಡಲು ಯೋಗ್ಯರಲ್ಲ ಎಂದು ಕಂಗನಾ ಹೇಳಿದ್ದು ಇದಕ್ಕೆ ಪ್ರಮುಖ ಕಾರಣ. ರಾಜಕಾರಣಿಗಳು, ದೇಶ ವಿರೋಧಿಗಳ ಬಗ್ಗೆ ಮಾತನಾಡುತ್ತಿರುವುದಕ್ಕೆ ಕಂಗನಾ ವರ್ಷಕ್ಕೆ ಸುಮಾರು 30 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರಂತೆ. ಹಾಗಂತ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ನನಗೆ ಏನು ಅನ್ನಿಸುತ್ತದೆ ಅದನ್ನೇ ನಾನು ಮಾತನಾಡುತ್ತೇನೆ. ಅದರಿಂದ ನಾನು ಹಣ ಕಳೆದುಕೊಳ್ಳುತ್ತೇನೆ ಎಂದರೆ, ಅದು ಹಾಗೇ ಇರಲಿ ಎಂದು ಟ್ವಿಟ್ಟರ್‌ ಮಾಲೀಕ ಎಲೋನ್‌ ಮಸ್ಕ್‌, ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಆ ಸಂದರ್ಶನದ ಸ್ಕ್ರೀನ್‌ಶಾಟನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ ರಣಾವತ್‌, ಹಿಂದೂ ವಿರೋಧಿ, ದೇಶವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಅನೇಕ ಸಂಸ್ಥೆಗಳು ನನ್ನನ್ನು ಬ್ರಾಂಡ್‌ ಅಂಬಾಸಿಡರ್‌ ಸ್ಥಾನದಿಂದ ಕೈ ಬಿಟ್ಟವು. ಇದರಿಂದ ನನಗೆ 30-40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ನಾನು ಸ್ವತಂತ್ರ್ಯಳು, ನನಗೆ ಬೇಕಾದ ಹಾಗೆ ಬದುಕುತ್ತೇನೆ, ಅನ್ನಿಸಿದ್ದನ್ನು ಹೇಳುತ್ತೇನೆ, ಭಾರತದ ಸಂಸ್ಕೃತಿ, ಸಮಗ್ರತೆಗೆ ಬೆಲೆ ಕೊಡದ ಕಾರ್ಪೊರೇಟ್‌ ಬ್ರಾಂಡ್‌ ಮುಖ್ಯಸ್ಥರು ಮುಖ್ಯವಲ್ಲ. ನಾನು ಎಲೋನ್‌ ಮಸ್ಕ್‌ನನ್ನು ಪ್ರಶಂಸಿಸುತ್ತೇನೆ. ಶ್ರೀಮಂತರು ಹಣದ ಬಗ್ಗೆ ಕಾಳಜಿ ವಹಿಸಬಾರದು ಎಂದು ಕಂಗನಾ ಬರೆದುಕೊಂಡಿದ್ದಾರೆ.

ಇನ್ನಷ್ಟು ಮನರಂಜನೆ ಸುದ್ದಿಗಳು

ದೇವತೆಗಳು ರಾಜರು ಬಹುಪತ್ನಿತ್ವ ಅನುಸರಿಸುತ್ತಿದ್ದರು, ನಾನು ಪವಿತ್ರಾ ಲಿವ್‌ ಇನ್‌ ರಿಲೇಶನ್‌ನಲ್ಲಿದ್ದೇವೆ; ನರೇಶ್‌ ಕೃಷ್ಣ

ಟಾಲಿವುಡ್‌ ನಟ ನರೇಶ್‌ ಕೃಷ್ಣ ಹಾಗೂ ಪವಿತ್ರಾ ಲೋಕೇಶ್‌ ಅಭಿನಯದ ಮತ್ತೆ ಮದುವೆ ಸಿನಿಮಾ ಮೇ 26ರಂದು ತೆರೆ ಕಾಣುತ್ತಿದೆ. ಪವಿತ್ರಾ ಹಾಗೂ ನರೇಶ್‌ ಸದ್ಯಕ್ಕೆ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಬುಧವಾರ, ಈ ಜೋಡಿ ಬೆಂಗಳೂರಿಗೆ ಆಗಮಿಸಿತ್ತು. ನಗರದ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ಏರ್ಪಡಿಸಿದ್ದರು. ಪವಿತ್ರಾ ಹಾಗೂ ನರೇಶ್‌ ಬಗ್ಗೆ ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

ಟಾಲಿವುಡ್‌ ಜೋಡಿ ವರುಣ್‌ ತೇಜ್‌ ಲಾವಣ್ಯ ತ್ರಿಪಾಠಿ ಪ್ರೀತಿಗೆ ಮನೆಯವರಿಂದ ಗ್ರೀನ್‌ ಸಿಗ್ನಲ್‌; ಜೂನ್‌ನಲ್ಲಿ ನಿಶ್ಚಿತಾರ್ಥ?

ವರುಣ್‌ ಹಾಗೂ ಲಾವಣ್ಯ ಜೂನ್‌ನಲ್ಲಿ ಎಂಗೇಜ್‌ಮೆಂಟ್‌ ಆಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಾದ್ಯಂತ ಹರಿದಾಡುತ್ತಿದೆ. ಆದರೆ ನಿಶ್ಚಿತಾರ್ಥ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಶೀಘ್ರದಲ್ಲೇ ಇಬ್ಬರೂ ಪ್ರೆಸ್‌ಮೀಟ್‌ ಮಾಡಿ ಎಂಗೇಜ್‌ಮೆಂಟ್‌ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀನು ವೈಟ್ಲ ನಿರ್ದೇಶನದ 'ಮಿಸ್ಟರ್' ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಅಂದಿನಿಂದ ಈ ಜೋಡಿ ಹೊರಗೆ ಸುತ್ತಾಡುತ್ತಿದ್ದಾರೆ. ಸಂಪೂರ್ಣ ಸ್ಟೋರಿ ಓದಲು ಕ್ಲಿಕ್‌ ಮಾಡಿ.

 

 

 

 

IPL_Entry_Point