Varuj Tej: ಟಾಲಿವುಡ್ ಜೋಡಿ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಪ್ರೀತಿಗೆ ಮನೆಯವರಿಂದ ಗ್ರೀನ್ ಸಿಗ್ನಲ್; ಜೂನ್ನಲ್ಲಿ ನಿಶ್ಚಿತಾರ್ಥ?
ವರುಣ್ ಹಾಗೂ ಲಾವಣ್ಯ ಪ್ರೀತಿಗೆ ಎರಡೂ ಮನೆಯವರಿಂದ ಒಪ್ಪಿಗೆ ಸಿಕ್ಕಿದ್ದು ತಮ್ಮ ಮದುವೆಗೆ ಮದುವೆ ಮುದ್ರೆ ಒತ್ತಲು ರೆಡಿ ಆಗುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಜೂನ್ನಲ್ಲಿ ನಿಶ್ಭಿತಾರ್ಥ ನೆರವೇರಲಿದ್ದು ವರ್ಷದ ಕೊನೆಯಲ್ಲಿ ಮದುವೆ ನಡೆಲಿದೆ ಎಂದು ಮೂಲಗಳು ತಿಳಿಸಿವೆ.
ಟಾಲಿವುಡ್ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇಬ್ಬರೂ ಪ್ರೀತಿಸುತ್ತಿದ್ದು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ ಎಂದು ಈ ಜೋಡಿ ಹೇಳುತ್ತಿದ್ದರೂ ಇಬ್ಬರ ಪ್ರೀತಿ ವಿಚಾರ ಟಾಲಿವುಡ್ನಲ್ಲಿ ಮತ್ತೆ ಮತ್ತೆ ಸದ್ದು ಮಾಡುತ್ತಲೇ ಇದೆ.
ಟ್ರೆಂಡಿಂಗ್ ಸುದ್ದಿ
ವರುಣ್ ಹಾಗೂ ಲಾವಣ್ಯ ಜೂನ್ನಲ್ಲಿ ಎಂಗೇಜ್ಮೆಂಟ್ ಆಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ನಾದ್ಯಂತ ಹರಿದಾಡುತ್ತಿದೆ. ಆದರೆ ನಿಶ್ಚಿತಾರ್ಥ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಶೀಘ್ರದಲ್ಲೇ ಇಬ್ಬರೂ ಪ್ರೆಸ್ಮೀಟ್ ಮಾಡಿ ಎಂಗೇಜ್ಮೆಂಟ್ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀನು ವೈಟ್ಲ ನಿರ್ದೇಶನದ 'ಮಿಸ್ಟರ್' ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಅಂದಿನಿಂದ ಈ ಜೋಡಿ ಹೊರಗೆ ಸುತ್ತಾಡುತ್ತಿದ್ದಾರೆ. ಅನೇಕ ಪಾರ್ಟಿ, ಟಾಲಿವುಡ್ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಷ್ಟಿದ್ದರೂ ಇಬ್ಬರೂ ತಮ್ಮ ಪ್ರೀತಿಯನ್ನು ಅನೌನ್ಸ್ ಮಾಡಿಲ್ಲ.
ವರುಣ್ ಸಹೋದರಿ ನಿಹಾರಿಕಾ ಮದುವೆ ಸಮಾರಂಭಕ್ಕೆ ಕೂಡಾ ಲಾವಣ್ಯ ತ್ರಿಪಾಠಿ ಆಗಮಿಸಿದ್ದರು. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರಿಂದ ಒಪ್ಪಿಗೆ ಸಿಕ್ಕಿದ್ದು ತಮ್ಮ ಮದುವೆಗೆ ಮದುವೆ ಮುದ್ರೆ ಒತ್ತಲು ರೆಡಿ ಆಗುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಜೂನ್ನಲ್ಲಿ ನಿಶ್ಭಿತಾರ್ಥ ನೆರವೇರಲಿದ್ದು ವರ್ಷದ ಕೊನೆಯಲ್ಲಿ ಮದುವೆ ನಡೆಲಿದೆ ಎಂದು ಮೂಲಗಳು ತಿಳಿಸಿವೆ.
ವರುಣ್ ತೇಜ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕಳೆದ ವರ್ಷ ತೆರೆಕಂಡ 'ಗಣಿ' ಸಿನಿಮಾ ಫ್ಲಾಪ್ ಆಗಿತ್ತು. ಆದರೆ ವೆಂಕಟೇಶ್ ಜೊತೆ ಅನಿಲ್ ರಾವಿಪುಡಿ ನಿರ್ದೇಶನದ ಮಲ್ಟಿಸ್ಟಾರರ್ 'ಎಫ್ 3' ಯಶಸ್ವಿಯಾಯಿತು. ವರುಣ್ ತೇಜ್ ಸದ್ಯ ಪ್ರವೀಣ್ ಸತ್ತಾರು ನಿರ್ದೇಶನದ 'ಗಾಂಡಿವಧಾರಿ ಅರ್ಜುನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿವಿಎಸ್ಎನ್ ಪ್ರಸಾದ್ ನಿರ್ಮಾಣದ ಈ ಚಿತ್ರಕ್ಕೆ ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜಿಸಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.
ಮತ್ತಷ್ಟು ಮನರಂಜನೆ ಸುದ್ದಿಗಳು
ನಟ ರಾಮ್ಚರಣ್ ಪತ್ನಿ ಉಪಾಸನಾ ಬಗ್ಗೆ ಅವಹೇಳನಕಾರಿ ಹೇಳಿಕೆ; ವ್ಯಕ್ತಿಗೆ ಥಳಿಸಿದ ಮೆಗಾ ಅಭಿಮಾನಿಗಳು, ವಿಡಿಯೋ ವೈರಲ್
ಟಾಲಿವುಡ್ ಕ್ಯೂಟ್ ಕಪಲ್ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳು ಕೂಡಾ ಮೆಗಾ ಕುಟುಂಬದ ಹೊಸ ಕುಡಿಯನ್ನು ನೋಡಲು ಕಾಯುತ್ತಿದ್ದಾರೆ. ಈ ನಡುವೆ ಉಪಾಸನಾ ಕಾಮಿನೇನಿ ಕೊನಿಡೇಲ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ವ್ಯಕ್ತಿಯೊಬ್ಬನನ್ನು ಅಭಿಮಾನಿಗಳು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಹೈದರಾಬಾದ್ನಲ್ಲಿ ಜರುಗಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಮಾಡಿ
ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನು ಹಾಗೇ ಇದೆ; ಬಸವರಾಜ ಬೊಮ್ಮಾಯಿ ಬಗ್ಗೆ ಪವನ್ ಒಡೆಯರ್ ಬೇಸರದ ಮಾತು
ಈ ಬಾರಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೆಲವರು ಸಿದ್ದು ಪರ ನಿಂತರೆ ಡಿಕೆ ಶಿವಕುಮಾರ್ ಅವರಿಗೂ ಅವಕಾಶ ನೀಡಿ ಎಂದು ಅನೇಕರು ಮನವಿ ಮಾಡುತ್ತಿದ್ದಾರೆ. ಇದರ ನಡುವೆ ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಇದೇ ವಿಚಾರವಾಗಿ ಅವರು ಎರಡು ಟ್ವೀಟ್ ಮಾಡಿದ್ದಾರೆ. ಪವನ್ ಒಡೆಯರ್ ಅವರ ಟ್ವೀಟ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಸಂಪೂರ್ಣ ಸ್ಟೋರಿ ಓದಲು ಈ ಲಿಂಕ್ ಒತ್ತಿ.