ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ತೆಲಂಗಾಣ ಯುವತಿ ಬೆಂಗಳೂರಿನಲ್ಲಿ ಉಸಿರುಗಟ್ಟಿಸಿ ಕೊಲೆ; ದೆಹಲಿ ಮೂಲದ ಆರೋಪಿ ಪರಾರಿ

Bangalore Crime: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ತೆಲಂಗಾಣ ಯುವತಿ ಬೆಂಗಳೂರಿನಲ್ಲಿ ಉಸಿರುಗಟ್ಟಿಸಿ ಕೊಲೆ; ದೆಹಲಿ ಮೂಲದ ಆರೋಪಿ ಪರಾರಿ

ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ತೆಲಂಗಾಣ ಮೂಲದ ಪ್ರಿಯತಮೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಬಳಿಕ ದೆಹಲಿ ಮೂಲದ ಆರೋಪಿ ಪರಾರಿಯಾಗಿದ್ದಾನೆ.

ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೆಲಂಗಾಣ ಮೂಲದ ಯುವತಿ ಮೃತ ದುರ್ದೈವಿ.
ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೆಲಂಗಾಣ ಮೂಲದ ಯುವತಿ ಮೃತ ದುರ್ದೈವಿ.

ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Living Relationship) ಯುವತಿಯನ್ನು ಪ್ರಿಯಕರನೇ ಉಸಿರುಗಟ್ಟಿಸಿ ಕೊಲೆ (Women Murder) ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ನಗರದ ಜೀವನ್ ಭೀಮಾ ನಗರದ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿಯನ್ನು ತೆಲಂಗಾಣದ ಪೆದ್ದಪಲ್ಲಿಯ 23 ವರ್ಷದ ಆಕಾಂಕ್ಷಾ ಎಂದು ಗುರುತಿಸಲಾಗಿದೆ.

ಮೃತ ಆಕಾಂಕ್ಷಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಆಗಿದ್ದು, ಕೆಳೆದ ಹಲವು ದಿನಗಳಿಂದ ದೆಹಲಿ ಮೂಲಕದ ಅರ್ಪಿತ್ (27) ಎಂಬ ಯುವಕನೊಂದಿಗೆ ವಾಸವಾಗಿದ್ದಳು ಎಂದು ಹೇಳಲಾಗಿದೆ.

ಆಕಾಂಕ್ಷಾ ಮತ್ತು ಅರ್ಪಿತ್ ಸ್ವಲ್ಪ ದಿನಗಳ ಕಾಲ ಬೆಂಗಳೂರಿನಲ್ಲೇ ಲಿನ್‌ ಇನ್ ರಿಲೇಶನ್‌ಶಿಪ್‌ನಲ್ಲೇ ಇದ್ದಾರೆ. ಆರೋಪಿ ಅರ್ಪಿತ್‌ ಕೆಲ ದಿನಗಳ ಕಾಲ ಕೆಲಸ ಮೇಲೆ ಹೈದರಾಬಾದ್‌ಗೆ ಹೋಗಿದ್ದಾನೆ. ಆಗ ಆಕಾಂಕ್ಷಾ ಗೆಳತಿಯೊಂದಿಗೆ ಬೇರೊಂದು ರೂಮ್ ಮಾಡಿಕೊಂಡಿದ್ದಾಳೆ. ಬೆಂಗಳೂರಿಗೆ ವಾಪಸ್‌ ಆಗಿದ್ದ ಆರೋಪಿ ಇಬ್ಬರು ಒಟ್ಟಿಗೆ ಇರುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

ಆಕಾಂಕ್ಷಾ ಮತ್ತು ಅರ್ಪಿತ್ ನಡುವೆ ವಿನಾಕಾರಣ ಹಲವು ದಿನಗಳಿಂದ ಜಗಳ ಆಗುತ್ತಿತ್ತು. ಇದರಿಂದ ಬೇಸತ್ತು ಇಬ್ಬರು ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದಾರೆ. ನಿನ್ನೆ ಈಕೆ ಇದ್ದ ಮನೆಗೆ ಬಂದಿದ್ದ ಆರೋಪಿ ಮತ್ತೆ ಗಲಾಟೆ ಮಾಡಿದ್ದಾನೆ.

ಇದು ತಾರಕಕ್ಕೇರಿದ್ದು, ಸಿಟ್ಟಿಗೆದ್ದ ಆರೋಪಿ ಅರ್ಪಿತ್ ಪ್ರಿಯತಮೆ ಆಕಾಂಕ್ಷಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಯುವತಿಯ ಕುತ್ತಿಗೆಗೆ ಬಟ್ಟೆ ಕಟ್ಟಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ರೀತಿಯಲ್ಲಿ ಬಿಂಬಿಸಲು ಯತ್ನಿಸಿದ್ದಾನೆ.

ಫ್ಯಾನ್‌ಗೆ ಮೃತದೇಹ ಕಟ್ಟಲಾಗದೆ ನೆಲದ ಮೇಲೆಯೇ ಬಿಟ್ಟು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಮೃತಳ ಮತ್ತೊರ್ವ ರೂಮೇಟ್‌ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೊದಲು ಅನುಮಾನಾಸ್ಪದ ಸಾವು ಎಂದುಕೊಂಡಿದ್ದ ಪೊಲೀಸರಿಗೆ ಸ್ಥಳ ಪರಿಶೀಲನೆ ಬಳಿಕ ಇದು ಕೊಲೆ ಎಂಬುದು ಬೆಳಕಿಗೆ ಬಂದಿದೆ.

ಸದ್ಯ ಆರೋಪಿಯ ವಿರುದ್ದ ಕೊಲೆ ಕೇಸ್ ದಾಖಲು ಮಾಡಿದ ಜೀವನ್ ಭೀಮಾ ನಗರ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಅರ್ಪಿತ್‌ಗಾಗಿ ಬಲೆಬೀಸಿದ್ದಾರೆ.

IPL_Entry_Point

ವಿಭಾಗ