ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rss Annual Meet: ಮಹಿಳೆಯರಿಗೂ ಶಾಖೆಗಳಲ್ಲಿ ಭಾಗವಹಿಸಲು ಅವಕಾಶ? ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನೇರ ಪ್ರಸಾರ ವೀಕ್ಷಿಸಿ

RSS annual meet: ಮಹಿಳೆಯರಿಗೂ ಶಾಖೆಗಳಲ್ಲಿ ಭಾಗವಹಿಸಲು ಅವಕಾಶ? ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನೇರ ಪ್ರಸಾರ ವೀಕ್ಷಿಸಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಮಹಿಳೆಯರನ್ನೂ ಸೇರಿಸಿಕೊಳ್ಳಲಾಗುವುದು. ಸಂಘವು ಇದನ್ನು ಪರಿಗಣಿಸುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ.

RSS annual meet: ಮಹಿಳೆಯರಿಗೂ ಶಾಖೆಗಳಲ್ಲಿ ಭಾಗವಹಿಸಲು ಅವಕಾಶ? ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನೇರ ಪ್ರಸಾರ ವೀಕ್ಷಿಸಿ (PTI Photo)(PTI03_13_2023_000302A)
RSS annual meet: ಮಹಿಳೆಯರಿಗೂ ಶಾಖೆಗಳಲ್ಲಿ ಭಾಗವಹಿಸಲು ಅವಕಾಶ? ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನೇರ ಪ್ರಸಾರ ವೀಕ್ಷಿಸಿ (PTI Photo)(PTI03_13_2023_000302A) (PTI)

ನವದೆಹಲಿ: ಹರಿಯಾಣದ ಪಾಣಿಪತ್‌ನ ಸಮಾಲ್ಕದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಂದು ಸಮಾಪ್ತಿಗೊಳ್ಳಲಿದೆ. 2023-24ನೇ ಸಾಲಿನ ಸಂಘದ ವಾರ್ಷಿಕ ಕಾರ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಇಂದು ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕೊನೆಯ ದಿನವಾಗಿದ್ದು, ಪ್ರಮುಖ ನಿರ್ಣಯಗಳು ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿ

ಆರ್‌ಎಸ್‌ಎಸ್‌ನ ಈ ಸಮಾವೇಶ ಮಾರ್ಚ್‌ 13ರಂದು ಆರಂಭವಾಗಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ. ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವ ವಿರೋಧಿ ಚಿಂತನೆ ಹೆಚ್ಚುತ್ತಿರುವ ಕುರಿತೂ ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಇಂತಹ ಚಿಂತನೆಯನ್ನು ವಿಫಲಗೊಳಿಸುವ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ ಹೇಳಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನತ್ನತಾಧಿಕಾರ ಸಮಿತಿಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಹಿಂದುತ್ವ ವಿರೋಧಿ ಚಿಂತನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.

ಆರ್‌ಎಸ್‌ಎಸ್‌ ಶಾಖೆಗಳಿಗೆ ಮಹಿಳೆಯರು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಮಹಿಳೆಯರನ್ನೂ ಸೇರಿಸಿಕೊಳ್ಳಲಾಗುವುದು. ಸಂಘವು ಇದನ್ನು ಪರಿಗಣಿಸುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ. ಇಲ್ಲಿಯವರೆಗೆ ಮಹಿಳೆಯರನ್ನು ಆರ್‌ಎಸ್‌ಎಸ್‌ ಶಾಖೆಗಳಿಗೆ ಸೇರಿಸಲಾಗುತ್ತಿರಲಿಲ್ಲ. ದುರ್ಗಾ ವಾಹಿನಿ ಮತ್ತು ಇತರ ಸಂಘಟನೆಗಳೊಂದಿಗೆ ಮಹಿಳೆಯರು ಕಾರ್ಯ ನಿರ್ವಹಿಸುತ್ತಾರೆ. ನೇರವಾಗಿ ಸಂಘದ ಶಾಖೆಗಳೊಂದಿಗೆ ಸಂಪರ್ಕ ಸಾಧಿಸುವ ಕುರಿತು ತೀರ್ಮಾನಿಸಲಾಗುತ್ತದೆ. ಈ ಕುರಿತು ಸಂಘದ ವಾರ್ಷಿಕ ಸಭೆಯಲ್ಲಿ ಚರ್ಚಿಸಲಾಗಿದೆ.

  1. ಅಖಿಲ ಭಾರತ ಪ್ರತಿನಿಧಿ ಸಭೆಯ ಮೂರು ದಿನಗಳ ಸಭೆಯ ಮೊದಲ ದಿನ ಸಮಲಖಾನ ಪಟ್ಟಿಕಲ್ಯಾಣ ಗ್ರಾಮದಲ್ಲಿರುವ ಸೇವಾ ಸಾಧನಾ ಮತ್ತು ಗ್ರಾಮಾಭಿವೃದ್ಧಿ ಕೇಂದ್ರದ ಡಾ.ಮನಮೋಹನ ವೈದ್ಯ ಅವರು ಮಹಿಳೆಯರಿಗೂ ಶಾಖೆಯಲ್ಲಿ ಅವಕಾಶ ಕಲ್ಪಿಸುವ ಕುರಿತು ಮಾಹಿತಿ ನೀಡಿದ್ದಾರೆ.
  2. ಸಂಘವು ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 300 ವರ್ಷಗಳ ಪ್ರಯುಕ್ತ ದೇಶಾದ್ಯಂತ ಸಾಮಾಜಿಕ ಸೌಹಾರ್ದತೆ ಮತ್ತು ಸರ್ವಧರ್ಮಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.
  3. ಆರ್‌ಎಸ್‌ಎಸ್‌ನ ಶಾಖೆಯ ವಿಸ್ತರಣೆ ಹೆಚ್ಚಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ ಶಾಖೆಗಳು ಹೆಚ್ಚಳವಾಗಿವೆ. 2025 ರ ವೇಳೆಗೆ, ಶಾಖೆಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ತಲುಪಿಸಲು ನಿರ್ಣಯಿಸಲಾಗಿದೆ.
  4. ರಾಷ್ಟ್ರೀಯ ಸಂಘವು ದೇಶವನ್ನು 911 ಜಿಲ್ಲೆಗಳಾಗಿ ವಿಂಗಡಿಸಿದೆ. ಈ ಪೈಕಿ 901 ಜಿಲ್ಲೆಗಳಲ್ಲಿ ಶೇ.90 ರಷ್ಟು ಶಾಖೆ ಕಾರ್ಯ ನಡೆಯುತ್ತಿದೆ. ಶತಮಾನೋತ್ಸವ ವರ್ಷ ಪ್ರಾರಂಭವಾದ ನಂತರ, ಸಂಘದ 1300 ವಿಸ್ತರಣಾವಾದಿಗಳು ಹಳ್ಳಿಗಳಿಗೆ ಹೋಗಿದ್ದಾರೆ. ಸಂಘವು ಶೀಘ್ರದಲ್ಲೇ 1500 ಹೆಚ್ಚು ವಿಸ್ತರಣಾವಾದಿಗಳನ್ನು ಹಳ್ಳಿಗಳಿಗೆ ಕಳುಹಿಸಲಿದೆ ಎನ್ನುವ ಮಾಹಿತಿ ಆರ್‌ಎಸ್‌ಎಸ್‌ ಸಭೆಯಿಂದ ತಿಳಿದುಬಂದಿದೆ.
  5. ಈ ವರ್ಷದ ಎಬಿಪಿಎಸ್ ಸಭೆಯಲ್ಲಿ ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳಿಂದ ಸುಮಾರು 1,400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಂಘಟನೆಗಳ ಕಾರ್ಯಕರ್ತರು ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
  6. ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಜಿ ಭಾಗವತ್, ದತ್ತಾತ್ರೇಯ ಹೊಸಬಾಳೆ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ವಿವಿಧ ಆರ್‌ಎಸ್‌ಎಸ್ ಅಂಗಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
  7. ಆರ್‌ಎಸ್‌ಎಸ್‌ 2025ರಲ್ಲಿ100 ವರ್ಷಗಳನ್ನು ಪೂರೈಸಲಿದ್ದು, ಶತಮಾನೋತ್ಸವ ವರ್ಷದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಈ ಸಭೆ ಮಹತ್ವದ ಪಾತ್ರ ನಿರ್ವಹಿಸಲಿದೆ.

IPL_Entry_Point

ವಿಭಾಗ