logo
ಕನ್ನಡ ಸುದ್ದಿ  /  ಮನರಂಜನೆ  /  Jugalbandi Trailer: ಮಾನಸಿ ಸುಧೀರ್‌ ಹೊಸ ಸಿನಿಮಾ ಟ್ರೇಲರ್‌ ರಿಲೀಸ್‌.. ಕಾಂತಾರ ಕಮಲಕ್ಕನ 'ಜುಗಲ್‌ ಬಂದಿ' ಹೇಗಿದೆ ನೋಡಿ

Jugalbandi Trailer: ಮಾನಸಿ ಸುಧೀರ್‌ ಹೊಸ ಸಿನಿಮಾ ಟ್ರೇಲರ್‌ ರಿಲೀಸ್‌.. ಕಾಂತಾರ ಕಮಲಕ್ಕನ 'ಜುಗಲ್‌ ಬಂದಿ' ಹೇಗಿದೆ ನೋಡಿ

HT Kannada Desk HT Kannada

Mar 21, 2023 01:20 PM IST

'ಜುಗಲ್ ಬಂದಿ' ಟ್ರೇಲರ್‌ ರಿಲೀಸ್

  • ಡಿಂಡಿಮ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾದ 'ಜುಗಲ್ ಬಂದಿ' ಚಿತ್ರ ಹಲವು ಕಥೆಗಳ ಜುಗಲ್ ಬಂದಿ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆ ಒಳಗೊಂಡ ಟ್ರೇಲರ್ ತುಣುಕು ಕೂಡಾ ಅದರ ಝಲಕ್ ಕಟ್ಟಿಕೊಟ್ಟಿದೆ. ಚಿತ್ರದಲ್ಲಿ 'ಕಾಂತಾರ' ಖ್ಯಾತಿಯ ಮಾನಸಿ ಸುಧೀರ್ ಹಾಗೂ ಇನ್ನಿತರರು ನಟಿಸಿದ್ದಾರೆ. 

'ಜುಗಲ್ ಬಂದಿ'  ಟ್ರೇಲರ್‌ ರಿಲೀಸ್
'ಜುಗಲ್ ಬಂದಿ' ಟ್ರೇಲರ್‌ ರಿಲೀಸ್

ಮಾನಸಿ ಸುಧೀರ್‌ ತಮ್ಮ ವಿಭಿನ್ನ ಹಾಡುಗಳು ಹಾಗೂ ಅಭಿನಯದ ಮೂಲಕ ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಬಹಳ ಪರಿಚಯ. ಇದಾದ ನಂತರ ಅವರಿಗೆ 'ಕಾಂತಾರ' ಸಿನಿಮಾದಲ್ಲಿ ನಟಿಸುವ ಅವಕಾಶ ಒಲಿದುಬಂತು. ವಯಸ್ಸು ಚಿಕ್ಕದಾದರೂ ಕಾಂತಾರದಲ್ಲಿ ಮಾನಸಿ, ರಿಷಬ್‌ ಶೆಟ್ಟಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಇದೀಗ ಅವರ ಮತ್ತೊಂದು ಸಿನಿಮಾ 'ಜುಗಲ್ ಬಂದಿ' ಟ್ರೇಲರ್‌ ಬಿಡುಗಡೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ಹೊಸಬರ ವಿನೂತನ ಪ್ರಯತ್ನವಿರುವ 'ಜುಗಲ್ ಬಂದಿ' ಸಿನಿಮಾವನ್ನು ದಿವಾಕರ ಡಿಂಡಿಮ ನಿರ್ದೇಶಿಸಿದ್ದಾರೆ. ಇದು ದಿವಾಕರ್‌ ಅವರ ಮೊದಲ ಸಿನಿಮಾ. ಇದು ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದ ಸಿನಿಮಾ ಸದ್ಯದಲ್ಲೇ ರಿಲೀಸ್‌ ಕೂಡಾ ಆಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ. ಡಿಂಡಿಮ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆ ಒಳಗೊಂಡ ಟ್ರೇಲರ್ ತುಣುಕು ಕೂಡಾ ಅದರ ಝಲಕ್ ಕಟ್ಟಿಕೊಟ್ಟಿದೆ. ಚಿತ್ರದಲ್ಲಿ 'ಕಾಂತಾರ' ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ಹಾಗೂ ಇನ್ನಿತರರು ನಟಿಸಿದ್ದಾರೆ.

ದಿವಾಕರ ಡಿಂಡಿಮ, ನಿರ್ದೇಶನದ ಜೊತೆಗೆ ಡಿಂಡಿಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿ 'ಜುಗಲ್ ಬಂದಿ' ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ ಬರೆದಿರುವುದು ವಿಶೇಷ.

ಮತ್ತಷ್ಟು ಮನರಂಜನೆ ಸುದ್ದಿಗಳು

ಹಿಂದುತ್ವದ ವಿರುದ್ದ ಟ್ವೀಟ್‌... ನಟ ಚೇತನ್‌ ಅಹಿಂಸಾ ಬಂಧನ

ಹಿಂದೂ ಧರ್ಮದ ವಿರುದ್ಧ ಅವಹೇಳನಾಕಾರಿ ಪೋಸ್ಟ್‌ ಹಂಚಿಕೊಂಡ ಕಾರಣ ನಟ ಚೇತನ ಅಹಿಂಸಾ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಚೇತನ್‌ ಬಂಧಿಸಿದ ಪೊಲೀಸರು ಅವರನ್ನು ಕೋರ್ಟ್‌ಗೆ ಕರೆದೊಯ್ದಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ವೈಷ್ಣವಿ ಗೌಡ ತಾಯಿ ಈಗ ಅಡ್ವೊಕೇಟ್‌... ಅಮ್ಮನ ಸಾಧನೆಯನ್ನು ಕೊಂಡಾಡಿದ ಮಗಳು!

'ಅಗ್ನಿಸಾಕ್ಷಿ' ಖ್ಯಾತಿಯ ವೈಷ್ಣವಿ ಗೌಡ ಕೆಲವು ದಿನಗಳ ಹಿಂದೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ಇದೀಗ ಆ ಬೇಸರದಿಂದ ಹೊರ ಬರುತ್ತಿರುವ ವೈಷ್ಣವಿ ಮೊದಲಿನಂತೆ ತಮ್ಮ ಯೂಟ್ಯೂಬ್‌, ಧಾರಾವಾಹಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ವೈಷ್ಣವಿ ತಾಯಿ ವಕೀಲೆಯಾಗಿ ಪ್ರಮೋಷನ್‌ ಪಡೆದಿದ್ದು ಈ ಸಂತೋಷದ ವಿಚಾರವನ್ನು ಸ್ವತ: ವೈಷ್ಣವಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

ಅಲ್ಲಿ ಹೋದ್ರೆ ಕಂಗನಾ ನಿಮ್ಮನ್ನು ಶೂಟ್‌ ಮಾಡ್ತಾರಂತೆ... ಏನಿದು ವಿಚಾರ, ಒಮ್ಮೆ ನೋಡಿ!

ಬಾಲಿವುಡ್‌ ನಟಿ ಕಂಗನಾ ರಣಾವತ್‌, ಕಾಂಟ್ರವರ್ಸಿ ಕ್ವೀನ್‌ ಎಂದೇ ಕರೆಯಲಾಗುತ್ತದೆ. ಕೆಲವೊಮ್ಮೆ ಅವರು ಆಡುವ ಮಾತುಗಳು ಎದುರಿದ್ದವರ ಕಣ್ಣು ಕೆಂಪಾಗಿಸುತ್ತದೆ. ಒಟ್ಟಿನಲ್ಲಿ ಯಾರು ಏನೇ ಅಂದರೂ ಮನಸ್ಸಿನಲ್ಲಿ ಇದ್ದದ್ದನ್ನು ಹೇಳುವ ಕಂಗನಾ, ಇದೀಗ ಮತ್ತೆ ಚರ್ಚೆಯಲ್ಲಿದ್ದಾರೆ. ಕಂಗನಾ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ