ಕನ್ನಡ ಸುದ್ದಿ  /  ಮನರಂಜನೆ  /  Kangana Ranaut: ಅಲ್ಲಿ ಹೋದ್ರೆ ಕಂಗನಾ ನಿಮ್ಮನ್ನು ಶೂಟ್‌ ಮಾಡ್ತಾರಂತೆ... ಏನಿದು ವಿಚಾರ, ಒಮ್ಮೆ ನೋಡಿ!

Kangana Ranaut: ಅಲ್ಲಿ ಹೋದ್ರೆ ಕಂಗನಾ ನಿಮ್ಮನ್ನು ಶೂಟ್‌ ಮಾಡ್ತಾರಂತೆ... ಏನಿದು ವಿಚಾರ, ಒಮ್ಮೆ ನೋಡಿ!

'ಇಲ್ಲಿ ಯಾರಿಗೂ ಅತಿಕ್ರಮಣ ಪ್ರವೇಶವಿಲ್ಲ. ಒಂದು ವೇಳೆ ಅತಿಕ್ರಮಣ ಮಾಡಲು ಬಂದರೆ ಗುಂಡು ಹಾರಿಸಲಾಗುತ್ತದೆ. ಬದುಕುಳಿದವರಿಗೆ ಮತ್ತೆ ಗುಂಡು ಹಾರಿಸಲಾಗುತ್ತದೆ ಎಂದು ಬರೆಯಾಗಿದೆ. ಈ ಬರಹಗಳು ಗಮನ ಸೆಳೆದದ್ದು, ಕಂಗನಾ ಅಪಾರ್ಟ್‌ಮೆಂಟ್‌ ವಿಚಾರವಾಗಿ ಅಭಿಮಾನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬಾಲಿವುಡ್‌ ನಟಿ ಕಂಗನಾ ರಣಾವತ್‌
ಬಾಲಿವುಡ್‌ ನಟಿ ಕಂಗನಾ ರಣಾವತ್‌

ಬಾಲಿವುಡ್‌ ನಟಿ ಕಂಗನಾ ರಣಾವತ್‌, ಕಾಂಟ್ರವರ್ಸಿ ಕ್ವೀನ್‌ ಎಂದೇ ಕರೆಯಲಾಗುತ್ತದೆ. ಕೆಲವೊಮ್ಮೆ ಅವರು ಆಡುವ ಮಾತುಗಳು ಎದುರಿದ್ದವರ ಕಣ್ಣು ಕೆಂಪಾಗಿಸುತ್ತದೆ. ಒಟ್ಟಿನಲ್ಲಿ ಯಾರು ಏನೇ ಅಂದರೂ ಮನಸ್ಸಿನಲ್ಲಿ ಇದ್ದದ್ದನ್ನು ಹೇಳುವ ಕಂಗನಾ, ಇದೀಗ ಮತ್ತೆ ಚರ್ಚೆಯಲ್ಲಿದ್ದಾರೆ.

ಕಂಗನಾ ಮುಂಬೈನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ ರಿನೋವೇಷನ್‌ ಮಾಡುತ್ತಿದ್ದು ಇತ್ತೀಚೆಗೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ತಮ್ಮ ಮನೆಯ ಬಗ್ಗೆ ವಿವರಿಸಿದ್ದರು. ತಾವೇ ಮುಂದೆ ನಿಂತು ಮನೆಯನ್ನು ನವೀಕರಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಹೀಗೆ ಕಂಗನಾ ತಮ್ಮ ಮನೆಯ ವಿಡಿಯ ಮಾಡುವಾಗ ಅಲ್ಲಿ ಗಮನ ಸೆಳೆದದ್ದು ಅಲ್ಲಿದ್ದ ಒಂದು ಗೋಡೆಯ ಸೈನ್‌ ಬೋರ್ಡ್‌. 'ಇಲ್ಲಿ ಯಾರಿಗೂ ಅತಿಕ್ರಮಣ ಪ್ರವೇಶವಿಲ್ಲ. ಒಂದು ವೇಳೆ ಅತಿಕ್ರಮಣ ಮಾಡಲು ಬಂದರೆ ಗುಂಡು ಹಾರಿಸಲಾಗುತ್ತದೆ. ಬದುಕುಳಿದವರಿಗೆ ಮತ್ತೆ ಗುಂಡು ಹಾರಿಸಲಾಗುತ್ತದೆ ಎಂದು ಬರೆಯಾಗಿದೆ. ಈ ಬರಹಗಳು ಗಮನ ಸೆಳೆದದ್ದು, ಕಂಗನಾ ಅಪಾರ್ಟ್‌ಮೆಂಟ್‌ ವಿಚಾರವಾಗಿ ಅಭಿಮಾನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕಂಗನಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು 'ಚಂದ್ರಮುಖಿ 2' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಕಳೆದ ವರ್ಷ ಕಂಗನಾ ಅಭಿನಯದ ಧಾಕಡ್‌ ತೆರೆ ಕಂಡಿತ್ತು. ತೇಜಸ್‌, ಟೀಕು ವೆಡ್ಸ್‌ ಶೇರು, ಎಮರ್ಜೆನ್ಸಿ ಸಿನಿಮಾಗಳಲ್ಲಿ ಕಂಗನಾ ಬ್ಯುಸಿ ಇದ್ದಾರೆ. ಎಮರ್ಜನ್ಸಿ ಚಿತ್ರಕ್ಕೆ ಕಂಗನಾ ಅವರೇ ಬಂಡವಾಳ ಹೂಡಿದ್ದು ತಾವೇ ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಟೀಕು ವೆಡ್ಸ್‌ ಶೇರು ಚಿತ್ರಕ್ಕೆ ಕೂಡಾ ಕಂಗನಾ ಬಂಡವಾಳ ಹೂಡಿದ್ದಾರೆ.

ಕಂಗನಾ ಹಂಚಿಕೊಂಡಿರುವ ಸ್ಟೇಟಸ್
ಕಂಗನಾ ಹಂಚಿಕೊಂಡಿರುವ ಸ್ಟೇಟಸ್

ಇಂದಿನ ಮತ್ತಷ್ಟು ಮನರಂಜನೆ ಸುದ್ದಿಗಳು

ಸ್ವತ: ಅಪ್ಪುವೇ ಎದ್ದು ಬಂದಂತೆ ಕಾಣ್ತಿದೆ ಅಭಿಮಾನಿ ತಯಾರಿಸಿರುವ ಈ ಪ್ರತಿಮೆ!

ಇಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಅಪ್ಪು ಉತ್ಸವವನ್ನು ಆಚರಿಸುತ್ತಿದ್ದಾರೆ. ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಊರಿನಲ್ಲೂ ಅಭಿಮಾನಿಗಳು ಅಪ್ಪು ಫೋಟೋಗೆ ಪೂಜೆ ಮಾಡಿ ಸಿಹಿ ಹಂಚುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೂಡಾ ಅಪ್ಪು ಕುಟುಂಬದವರು ಅವರಿಗಿಷ್ಟವಾದ ತಿಂಡಿಗಳನ್ನು ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ನಡುವೆ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯೊಬ್ಬರು ಅಪ್ಪುವಿನ ಸಿಲಿಕಾನ್‌ ಸ್ಟಾಚು ತಯಾರಿಸಿ ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಪ್ರತಿ ಪೀಳಿಗೆಗೂ ಸದಾ ಸ್ಫೂರ್ತಿ ನೀವು, ಅಪ್ಪು ಮಾಮನ ದಾರಿಯಲ್ಲಿ ಅಳಿಯ ಧೀರೇನ್‌ ರಾಮ್‌ಕುಮಾರ್

ಸೋಷಿಯಲ್‌ ಮೀಡಿಯಾದಲ್ಲಿಯೂ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಹಂಚುತ್ತಿದ್ದಾರೆ. ಹರಡುತ್ತಿದ್ದಾರೆ. ಅವರೊಂದಿಗಿನ ಬೆಲೆ ಕಟ್ಟಲಾಗದ ಫೋಟೋವನ್ನು ಶೇರ್‌ ಮಾಡಿಕೊಂಡು ಮತ್ತೆ ಕರ್ನಾಟಕದಲ್ಲಿಯೇ ಹುಟ್ಟಿ ಬನ್ನಿ ಎಂದು ಕೋರುತ್ತಿದ್ದಾರೆ. ಈ ನಡುವೆ ಡಾ. ರಾಜ್‌ ಕುಟುಂಬದ ಕುಡಿ, ರಾಮ್‌ಕುಮಾರ್‌ ಮತ್ತು ಪೂರ್ಣಿಮಾ ದಂಪತಿಯ ಪುತ್ರ ಧೀರೇನ್‌ ರಾಮ್‌ಕುಮಾರ್‌ ಪುನೀತ್‌ ಹಾದಿಯಲ್ಲಿಯೇ ಹೊರಟಿದ್ದಾರೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

IPL_Entry_Point