Mangalore Thalak: ಜುಟ್ಟು ಹಿಡಿದು ತಲಾಖ್.. ತಲಾಖ್.. ತಲಾಖ್ ಅಂತ ಹೇಳಿ ಮನೆಯಿಂದ ಹೊಡೆದು ಓಡಿಸಿದ್ರು ; ನೊಂದ ಮುಸ್ಲಿಂ ಮಹಿಳೆಯ ಮಾತು
May 30, 2023 06:11 PM IST
- ಮದುವೆಯಾದ ಆರೇ ತಿಂಗಳಿಗೆ ಕಟ್ಟಿಕೊಂಡ ಹೆಂಡತಿಗೆ ತಲಾಖ್ ಕೊಟ್ಟು ಮನೆಯಿಂದ ಆಚೆಗಟ್ಟಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಎಂಬಾತನನ್ನು ಮದುವೆಯಾಗಿದ್ದ ಶಬಾನಗೆ ನಿತ್ಯವೂ ಹಣಕ್ಕಾಗಿ ಹುಸೇನ್ ಕುಟುಂಬ ಚಿತ್ರಹಿಂಸೆ ನೀಡುತ್ತಿತ್ತು. ಶಬಾನಳನ್ನ ಎರಡನೇ ಮದುವೆಯಾಗಿದ್ದ ಹುಸೇನ್ ಆಗಲೇ 10 ಲಕ್ಷ ಪೀಕಿ ಮತ್ತೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ಮೊದಲ ಹೆಂಡತಿಗೂ ಇದೇ ರೀತಿ ಕಿರುಕುಳ ಕೊಟ್ಟು ತಲಾಖ್ ಕೊಟ್ಟಿದ್ದ. ಇದೀಗ ಶಬಾನಾ ಮೇಲೂ ಹಲ್ಲೆ ನಡೆಸಿ ತಲಾಖ್ ಘೋಷಿಸಿರುವ ಹುಸೇನ್ ವಿರುದ್ಧ ದೂರು ದಾಖಲಾಗಿದೆ.