ಕನ್ನಡ ಸುದ್ದಿ  /  Astrology  /  Baba Vanga Predictions For India 2022-23, Who Is Blind Baba Vanga? What His Predictions? Complete Details

Baba vanga predictions: ಬಾಬಾ ವಂಗಾ ಭವಿಷ್ಯವಾಣಿ, ಭಾರತದ ಕುರಿತು ಭಯಂಕರ ಭವಿಷ್ಯ ನುಡಿದ ಬಾಬಾ, ಯಾರಿದು ಬಾಬಾ ವಂಗಾ? ಏನಾಗುತ್ತೆ ಅಂತೆ?

Baba vanga predictions for india: ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಇತ್ತೀಚೆಗೆ ಭಾರತದ ಕುರಿತು ಆರು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.

Baba vanga predictions: ಬಾಬಾ ವಂಗಾ ಭವಿಷ್ಯವಾಣಿ, ಭಾರತದ ಕುರಿತು ಭಯಂಕರ ಭವಿಷ್ಯ ನುಡಿದ ಬಾಬಾ, ಯಾರಿದು ಬಾಬಾ ವಂಗ? ಏನಾಗುತ್ತೆ ಅಂತೆ?
Baba vanga predictions: ಬಾಬಾ ವಂಗಾ ಭವಿಷ್ಯವಾಣಿ, ಭಾರತದ ಕುರಿತು ಭಯಂಕರ ಭವಿಷ್ಯ ನುಡಿದ ಬಾಬಾ, ಯಾರಿದು ಬಾಬಾ ವಂಗ? ಏನಾಗುತ್ತೆ ಅಂತೆ?

Baba vanga predictions for india: ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಇತ್ತೀಚೆಗೆ ಭಾರತದ ಕುರಿತು ಆರು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಬಾಲ್ಯದಲ್ಲಿಯೇ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಈ ಬಾಬಾ ವಂಗಾ ಅವರ ಕೆಲವೊಂದು ಭವಿಷ್ಯವಾಣಿಗಳು ನಿಜವಾಗಿರುವುದರಿಂದ ಇವರ ಭವಿಷ್ಯವಾಣಿ ಕುರಿತು ಜಗತ್ತಿನ ಕೆಲವರು ನಂಬುತ್ತಾರೆ. ಹೊರ ಕಣ್ಣುಗಳು ಇಲ್ಲದಿದ್ದರೂ ಒಳಗಣ್ಣಿನಿಂದ ಜಗತ್ತಿನ ಭವಿಷ್ಯ ನೋಡುವ ಸಾಮರ್ಥ್ಯ ಇವರಿಗಿದೆಯಂತೆ. ಇವರು ಭಾರತದ ಕುರಿತು ಈ ವರ್ಷ ನುಡಿದ ಭವಿಷ್ಯವೇನು? ಭಾರತಕ್ಕೆ ನಿಜಕ್ಕೂ ಅಪಾಯ ಕಾದಿದೆಯೇ? ತಿಳಿದುಕೊಳ್ಳೋಣ.

ಯಾರಿದು ಬಾಬಾ ವಂಗಾ? (Baba vanga)

Baba vanga: ಭವಿಷ್ಯ ಎಲ್ಲರೂ ತಿಳಿದುಕೊಳ್ಳಲು ಬಯಸುವ ವಿಷ್ಯ. ನಮಗೆ ಮುಂದೇನಾಗಬಹುದು. ನಮ್ಮ ದೇಶಕ್ಕೆ ಏನಾಗಬಹುದು. ದಿನಭವಿಷ್ಯ, ವಾರಭವಿಷ್ಯ, ವರ್ಷ ಭವಿಷ್ಯ ಹೀಗೆ ಭವಿಷ್ಯವನ್ನು ಎಲ್ಲರೂ ಓದುತ್ತಾರೆ. ಬಾಬಾ ವಂಗಾ ಅವರು ಮೂಲತಃ ಬಲ್ಗೇರಿಯಾದವರು. 1911ರಲ್ಲಿ ಜನಿಸಿದ್ದರು. 12ನೇ ವಯಸ್ಸಿನಲ್ಲಿಯೇ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡರು. ದೇವರ ದಿವ್ಯ ದರ್ಶನವನ್ನು ಪಡೆದು ಇವರು ಜಗತ್ತಿನ ಭವಿಷ್ಯವಾಣಿ ಹೇಳುತ್ತಾ ಸುದ್ದಿಯಲ್ಲಿರುತ್ತಾರೆ.

ಭಾರತಕ್ಕೆ ಏನಾಗುತ್ತದೆ?

Baba vanga predictions for india 2022-2023: ಬಲ್ಗೇರಿಯಾದ ಬಾಬಾ ವಂಗಾ ಭಾರತದ ಕುರಿತು ಹೇಳಿರುವ ಭವಿಷ್ಯವನ್ನು ಕೇಳಿ ಸಾಕಷ್ಟು ಜನರು ಬಾಂಬ್‌ ಬಿದ್ದಂತೆ ಬೆದರಿದ್ದಾರೆ. ಅವರು ಈ ಹಿಂದೆ ತಿಳಿಸಿದ ಈ ಭವಿಷ್ಯವಾಣಿ ಕುರಿತು ಮತ್ತೆಮತ್ತೆ ತಿಳಿದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಬಾಬಾ ವಂಗಾ ಭಾರತದ ಕುರಿತು ಏನು ಹೇಳಿದ್ದಾರೆ ಎಂಬ ಕುತೂಹಲ ನಿಮ್ಮಲ್ಲಿರಬಹುದು.

- ಮಿಡತೆಗಳ ಹಾವಳಿ

ಹಲವು ದೇಶಗಳು ಮಿಡತೆಗಳ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿವೆ. ಮೊದಲೆಲ್ಲ ಮಿಡತೆಗಳನ್ನು ಯುದ್ಧವಾಗಿ ಮತ್ತೊಂದು ದೇಶಕ್ಕೆ ಬಿಡಲಾಗುತ್ತಿತ್ತು. ಬೆಳೆ ನಾಶ ಮಾಡುವ ಮಿಡತೆಗಳನ್ನು ಶತ್ರು ದೇಶಕ್ಕೆ ಕಳುಹಿಸಿ ಆ ದೇಶದ ಆರ್ಥಿಕತೆಯನ್ನು, ಕೃಷಿಯನ್ನು ಸರ್ವನಾಶ ಮಾಡುವ ಹುನ್ನಾರ ಇದರಲ್ಲಿ ಇರುತ್ತಿತ್ತು.

ಭಾರತವು ಮುಂದಿನ ವರ್ಷ ಮಿಡತೆಗಳ ಹಾವಳಿಯಿಂದ ತೊಂದರೆ ಅನುಭವಿಸಲಿದೆ ಎಂದು ಬಾಬಾ ವಂಗ ಹೇಳಿದ್ದಾರೆ. ಇದರಿಂದ ಆಹಾರಕ್ಕೆ ತತ್ತ್ವಾರ ಆಗಲಿದೆಯಂತೆ.

- ತಾಪಮಾನ ಇಳಿಕೆ

ಮುಂದಿನ ವರ್ಷ ಎಲ್ಲೆಡೆ ತಾಪಮಾನ ಇಳಿಕೆಯಾಗಿ ಮಿಡತೆಗಳ ಹಾವಳಿ ಹೆಚ್ಚಾಗಿ ಈ ಗುಂಪು ಭಾರತದ ಮೇಳೆ ದಾಳಿ ಮಾಡಲಿದೆ ಎಂದು ಬಾಬಾ ವಂಗ ಮುನ್ಸೂಚನೆ ಮಾಡಿದ್ದಾರೆ.

- ಭಾರತದಲ್ಲಿ ಕ್ಷಾಮ ತಲೆದೋರಲಿದೆ

ಬಾಬಾ ವಂಗ ಹೇಳಿರುವ ಪ್ರಕಾರ ಭಾರತವು ಮುಂದಿನ ವರ್ಷ ಕ್ಷಾಮದಿಂದ ತೊಂದರೆ ಅನುಭವಿಸಲಿದೆ.

ಬಾಬಾ ವಂಗಾ ಹೇಳಿದ ವಿಶ್ವ ಭವಿಷ್ಯಗಳು

- ಸೈಬೀರಿಯಾದಿಂದ ಹೊಸ ಮಾರಣಾಂತಿಕ ವೈರಸ್‌ ಜಗತ್ತನ್ನು ಕಾಡಲಿದೆ. ಕೊರೊನಾದಂತೆ ಇನ್ನೊಂದು ವೈರಸ್‌ ಬರುವ ಸೂಚನೆಯನ್ನು ನೀಡಿದ್ದಾರೆ.

- ಬಾಬಾ ವಂಗಾ ಹೇಳಿದ ಇನ್ನೊಂದು ಭವಿಷ್ಯವೆಂದರೆ ಏಲಿಯನ್‌ ದಾಳಿ. ಅನ್ಯಗ್ರಹ ಜೀವಿಗಳು ಈ ಜಗತ್ತಿನ ಮೇಲೆ ದಾಳಿ ಮಾಡಲಿವೆಯಂತೆ.

- ಮಿಡತೆ ಹಾವಳಿ- ಜಗತ್ತನ್ನು ಕಾಡಲಿರುವ ಇನ್ನೊಂದು ದೊಡ್ಡ ತೊಂದರೆ ಇದೆಂದು ಬಾಬಾ ಹೇಳಿದ್ದಾರೆ.

- ಪ್ರವಾಹಗಳು

-ಬರಗಾಲಗಳು

ನಿಜವಾಗುತ್ತ ಬಾಬಾ ವಂಗಾ ಭವಿಷ್ಯ?

ಭವಿಷ್ಯವಾಣಿ ಎನ್ನುವುದು ನಿಜವಾಗಬಹುದು ಅಥವಾ ಸುಳ್ಳಾಗಬಹುದು. ಸುಳ್ಳು ಭವಿಷ್ಯ ಹೇಳುವವರೂ ಸಾಕಷ್ಟು ಜನರು ಇರುತ್ತಾರೆ. ಕೆಲವೊಬ್ಬರ ಭವಿಷ್ಯಗಳು ನಿಜವಾಗುತ್ತ ಇರುತ್ತವೆ. ಎರಡು ಕಣ್ಣಿಲ್ಲದ ಬಾಬಾ ವಂಗ ಹೇಳಿದ ಕೆಲವು ಭವಿಷ್ಯ ನಿಜವಾಗಿರುವುದರಿಂದ ಸಾಕಷ್ಟು ಜನರು ಬಾಬಾ ವಂಗಾ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

- ಏಷ್ಯಾದ ಹಲವು ದೇಶಗಳಲ್ಲಿ ಭೀಕರ ಪ್ರವಾಹ ಉಂಟಾಗಲಿದೆ ಎಂದು ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದರು. ಪಾಕಿಸ್ತಾನ ಪ್ರವಾಹದಿಂದ ಸಾಕಷ್ಟು ಸಂಕಷ್ಟಕ್ಕೆ ಈಡಾಗಿದೆ. ಇಟಲಿಯ ಹಲವು ನಗರಗಳು ಈ ವರ್ಷ ಬರಗಾಲದಿಂದ ಸಂಕಷ್ಟಕ್ಕೆ ಈಡಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತಲೆದೋರಿದ ಪ್ರವಾಹಕ್ಕೂ ಬಾಬಾ ಭವಿಷ್ಯವಾಣಿಗೂ ಸಂಬಂಧವುಂಟಾ? ಗೊತ್ತಿಲ್ಲ!

- ಇದೇ ರೀತಿ ಬರಗಾಲದ ಸಮಸ್ಯೆಯ ಕುರಿತು ಇವರು ಕೆಲವು ದೇಶಗಳಿಗೆ ನೀಡಿದ ಮುನ್ಸೂಚನೆಯೂ ನಿಜವಾಗಿದೆ.

ಆದರೆ ಬಾಬಾ ವಂಗನ ಹಲವು ಭವಿಷ್ಯವಾಣಿಗಳು ನಿಜವಾಗಿಲ್ಲ ಎನ್ನುವುದನ್ನೂ ಗಮನಿಸಬೇಕು. ಯುರೋಪ್‌ನಲ್ಲಿ 2016ರಲ್ಲಿ ದೊಡ್ಡ ಯುದ್ಧ ನಡೆಯಲಿದ ಎಂದಿದ್ರು. ಅದು ನಿಜವಾಗಿಲ್ಲ. 2010-14ರಲ್ಲಿ ಭೀಕರ ಪರಮಾಣು ಯುದ್ಧ ನಡೆಯುತ್ತದೆ ಎಂದಿದ್ರು. ಅದೂ ನಿಜವಾಗಿಲ್ಲ. ಆದರೆ, ಜಗತ್ತಿಗೆ ಭವಿಷ್ಯದಲ್ಲಿ ಪರಮಾಣು ಯುದ್ಧದ ಆತಂಕ ಇರೋದು ನಿಜ. ಈ ಬಾಬಾ ತುಂಬಾ ಬುದ್ಧಿವಂತಿಕೆಯಿಂದ ಇಂತಹ ಭವಿಷ್ಯಗಳನ್ನು ನುಡಿಯುತ್ತಿದ್ದಾರೆ ಎಂದೆನಿಸುತ್ತದೆ.