ಕನ್ನಡ ಸುದ್ದಿ  /  ಮನರಂಜನೆ  /  Dhanush: ಹೊಸ ಲುಕ್‌ನೊಂದಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ತಮಿಳು ನಟ ಧನುಷ್‌ ಪ್ರತ್ಯಕ್ಷ; ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸಿದ ನೆಟಿಜನ್ಸ್

Dhanush: ಹೊಸ ಲುಕ್‌ನೊಂದಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ತಮಿಳು ನಟ ಧನುಷ್‌ ಪ್ರತ್ಯಕ್ಷ; ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸಿದ ನೆಟಿಜನ್ಸ್

ಧನುಷ್‌ ನೋಡಿದವರು ಅವರನ್ನು ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸುತ್ತಿದ್ದಾರೆ. ನಟ ಧನುಷ್‌, ಬಾಬಾ ರಾಮ್‌ದೇವ್‌ ಅವರಂತೆ ಬದಲಾಗಿದ್ದಾರೋ, ಅಥವಾ ಬಾಬಾ ರಾಮ್‌ ದೇವ್‌ ಧನುಷ್‌ ಅವರಂತೆ ಕಾಣುತ್ತಿದ್ದಾರೋ ಒಂದೂ ತಿಳಿಯುತ್ತಿಲ್ಲ ಎಂದು ಕಾಮೆಂಟ್‌ ಮಾಡಿ ಕಾಲೆಳೆದಿದ್ದಾರೆ.

ನಟ ಧನುಷ್‌ ಹೊಸ ಲುಕ್‌ ನೋಡಿ ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸಿದ ನೆಟಿಜನ್ಸ್‌
ನಟ ಧನುಷ್‌ ಹೊಸ ಲುಕ್‌ ನೋಡಿ ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸಿದ ನೆಟಿಜನ್ಸ್‌

ಸಿನಿಮಾ ತಾರೆಯರು ಆಗ್ಗಾಗ್ಗೆ ಲುಕ್‌ ಬದಲಿಸುವುದು ಸಾಮಾನ್ಯ, ಅದರಲ್ಲೂ ನಾಯಕರು ಉದ್ದವಾದ ಗಡ್ಡ ಕೂದಲು ಬಿಡುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಆ ಲುಕ್‌ ನೋಡಿ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವೊಮ್ಮೆ ಸೆಲೆಬ್ರಿಟಿಗಳ ಲುಕ್‌ ಟ್ರೋಲ್‌ ಆಗುತ್ತದೆ. ಇದೀಗ ತಮಿಳು ನಟ ಧನುಷ್‌ ಕೂಡಾ ತಮ್ಮ ಹೊಸ ಲುಕ್‌ಗಾಗಿ ಟ್ರೋಲ್‌ ಆಗುತ್ತಿದ್ದಾರೆ.

ಇತ್ತೀಚೆಗೆ ಧನುಷ್‌ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್‌ ನೋಡುತ್ತಿದ್ದಂತೆ ಕೆಲವರು ಕನ್ಫ್ಯೂಸ್‌ ಆಗಿದ್ದಾರೆ. ಏಕೆಂದರೆ ಧನುಷ್‌ ಲುಕ್‌ ಸಂಪೂರ್ಣ ಬದಲಾಗಿದೆ. ಭುಜದವರೆಗೂ ಕೂದಲು, ಉದ್ದ ಗಡ್ಡ ಬಿಟ್ಟು ಧನುಷ್‌ ಸಂಪೂರ್ಣ ಲುಕ್‌ ಬದಲಿಸಿದ್ದಾರೆ. ಧನುಷ್‌ ನೋಡುತ್ತಿದ್ದಂತೆ ಕೆಲವರು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಳು ಹತ್ತಿರ ಓಡಿ ಬಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಧನುಷ್‌ ನೋಡಿದವರು ಅವರನ್ನು ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸುತ್ತಿದ್ದಾರೆ. ನಟ ಧನುಷ್‌, ಬಾಬಾ ರಾಮ್‌ದೇವ್‌ ಅವರಂತೆ ಬದಲಾಗಿದ್ದಾರೋ, ಅಥವಾ ಬಾಬಾ ರಾಮ್‌ ದೇವ್‌ ಧನುಷ್‌ ಅವರಂತೆ ಕಾಣುತ್ತಿದ್ದಾರೋ ಒಂದೂ ತಿಳಿಯುತ್ತಿಲ್ಲ ಎಂದು ಕಾಮೆಂಟ್‌ ಮಾಡಿ ಕಾಲೆಳೆದಿದ್ದಾರೆ. ಇನ್ನೂ ಕೆಲವರು ಬಹುಶ: ಧನುಷ್‌ ಬಾಬಾ ರಾಮ್‌ ದೇವ್‌ ಕುರಿತಾದ ಸಿನಿಮಾದಲ್ಲಿ ನಟಿಸುತ್ತಿರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಧನುಷ್‌ ಹೊಸ ಲುಕ್‌ನಿಂದ ಟ್ರೋಲ್‌ ಆಗುತ್ತಿರುವುದಂತೂ ನಿಜ.

ಧನುಷ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಸತ್ಯಜ್ಯೋತಿ ಫಿಲ್ಸ್ಮ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಅರುಣ್‌ ಮಥೇಶ್ವರನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟಿಸುತ್ತಿರುವುದು ವಿಶೇಷ.

ಮತ್ತಷ್ಟು ಮನರಂಜನೆ ಸುದ್ದಿಗಳು

ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, 150 ವರ್ಷಗಳ ಕಾಲ ಬದುಕುವ ರಹಸ್ಯ ಹೇಳಿಕೊಡುತ್ತೇನೆ; AISMK ಸಂಸ್ಥಾಪಕ ಶರತ್‌ ಕುಮಾರ್

ತಮಿಳು ನಟ ಶರತ್‌ ಕುಮಾರ್‌ ಮಲಯಾಳಂ, ತೆಲುಗು, ಕನ್ನಡ ಭಾಷೆಗಳಲ್ಲಿ ಕೂಡಾ ನಟಿಸಿದ್ದಾರೆ. ಸಿನಿಮಾ ಜೊತೆಗೆ ರಾಜಕೀಯದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಸಮತುವ ಮಕ್ಕಳ್‌ ಕಚ್ಚಿ ಪಕ್ಷವನ್ನು ಶರತ್‌ ಸಂಸ್ಥಾಪಿಸಿದ್ದು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಶರತ್‌, ''ನಾನು 150 ವರ್ಷಗಳ ಕಾಲ ಬದುಕುತ್ತೇನೆ'' ಎಂದು ಹೇಳಿದ್ದು, ಈ ಮಾತುಗಳು ಈಗ ಚರ್ಚೆಗೆ ಕಾರಣವಾಗಿದೆ. ನಟ ಶರತ್‌ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಅಂಬರೀಶ್‌ಗೆ ಗಾಂಚಲಿ ಇತ್ತು, ಭಯ ಹುಟ್ಟಿಸಲು ಒಂದು ಪ್ಲಾನ್‌ ಮಾಡಿದ್ದೆ, ಅಂಬಿ ಜೊತೆಗಿನ ಒಡನಾಟ ನೆನೆದ ಜೈ ಜಗದೀಶ್‌; ವಿಡಿಯೋ

ಪ್ರತಿ ಶನಿವಾರ ಹಾಗೂ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 5 ಕಾರ್ಯಕ್ರಮದ 19ನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್‌ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದ ಇದುವರೆಗಿನ ಅನೇಕ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ.

IPL_Entry_Point