ಕನ್ನಡ ಸುದ್ದಿ  /  Entertainment  /  Producer Ravinder Chandrasekaran Has Given An Expensive Gift To His Wife Mahalakshmi Whats That

Ravindar Costly Gifts to Wife: ಪತ್ನಿಗೆ ಚಿನ್ನದ ಮಂಚ, ಐಶಾರಾಮಿ ಬಂಗಲೆ, 300 ಸಿಲ್ಕ್‌ ಸೀರೆ ನೀಡಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್!?

ಪತ್ನಿ ಮಹಾಲಕ್ಷ್ಮಿಗಾಗಿ ಕೋಟಿ ಕೋಟಿ ಹಣವನ್ನೇ ಸುರಿದಿದ್ದಾರಂತೆ ರವೀಂದರ್‌. ಅದ್ಯಾವ ಮಟ್ಟಿಗೆ ಎಂದರೆ, ಪತ್ನಿಗೆ ನೀಡಿದ ಐಷಾರಾಮಿ ಕೊಡುಗೆಗಳೇ ಅದಕ್ಕೆ ಸಾಕ್ಷಿ. ಹಾಗಾದರೆ, ರವೀಂದರ್‌ ತನ್ನ ಎರಡನೇ ಪತ್ನಿ ಮಹಾಲಕ್ಷ್ಮೀಗೆ ನೀಡಿದ ಉಡುಗೊರೆಗಳೇನು? ಇಲ್ಲಿದೆ ನೋಡಿ ಮಾಹಿತಿ..

ಪತ್ನಿಗೆ ಚಿನ್ನದ ಮಂಚ, ಐಶಾರಾಮಿ ಬಂಗಲೆ, 300 ಸಿಲ್ಕ್‌ ಸೀರೆ ನೀಡಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರ್‌!?
ಪತ್ನಿಗೆ ಚಿನ್ನದ ಮಂಚ, ಐಶಾರಾಮಿ ಬಂಗಲೆ, 300 ಸಿಲ್ಕ್‌ ಸೀರೆ ನೀಡಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರ್‌!? (Instagram)

ಚೆನ್ನೈ: ಇದೇ ತಿಂಗಳಾರಂಭಕ್ಕೆ ತಮಿಳು ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಹಾಗೂ ನಿರೂಪಕಿ ಮಹಾಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಯ ಫೋಟೋಗಳು ಮಾಡಿದ ಸದ್ದು ಅಷ್ಟಿಷ್ಟಲ್ಲ. ಶುಭ ಕೋರಿದವರಿಗಿಂತ ಕಾಲೆಳೆದವರ ಸಂಖ್ಯೆಯೇ ಹೆಚ್ಚು. ಮದುವೆ ಮುಗಿದು ಇದೀಗ 15 ದಿನಗಳಾಗುತ್ತ ಬಂದರೂ ಈಗಲೂ ಈ ಜೋಡಿಯ ಬಗ್ಗೆ ಬಗೆಬಗೆ ಪುಕಾರುಗಳು ಹರಿದಾಡುತ್ತಿವೆ.

ಅದೆಲ್ಲವನ್ನು ಬದಿಗಿಟ್ಟು ಪರಿತಿ ರವೀಂದರ್‌ ಬಗ್ಗೆ ಹೇಳುವುದಾದರೆ, ಪತ್ನಿ ಮಹಾಲಕ್ಷ್ಮಿಗಾಗಿ ಕೋಟಿ ಕೋಟಿ ಹಣವನ್ನೇ ಸುರಿದಿದ್ದಾರಂತೆ. ಅದ್ಯಾವ ಮಟ್ಟಿಗೆ ಎಂದರೆ, ಪತ್ನಿಗೆ ನೀಡಿದ ಐಷಾರಾಮಿ ಕೊಡುಗೆಗಳೇ ಅದಕ್ಕೆ ಸಾಕ್ಷಿ. ಹಾಗಾದರೆ, ರವೀಂದರ್‌ ತನ್ನ ಎರಡನೇ ಪತ್ನಿ ಮಹಾಲಕ್ಷ್ಮೀಗೆ ನೀಡಿದ ಉಡುಗೊರೆಗಳೇನು? ಇಲ್ಲಿದೆ ನೋಡಿ ಮಾಹಿತಿ..

ಚಿನ್ನದ ಮಂಚ, ಐಶಾರಾಮಿ ಬಂಗಲೆ..

ಪತ್ನಿ ಮಹಾಲಕ್ಷ್ಮಿ ಮಲಗುವ ಮಂಚವನ್ನು ಚಿನ್ನದಲ್ಲಿ ಮಾಡಿಸಿ ಕೊಟ್ಟಿದ್ದಾರೆ ಪತಿ ರವೀಂದರ್‌, ಆ ಮಂಚಕ್ಕೆ ಪೂರ್ತಿ ಚಿನ್ನದ ತಗಡಿನ ಲೇಪನ ಮಾಡಲಾಗಿದೆಯಂತೆ. ಅಷ್ಟೇ ಅಲ್ಲ‌ 300ಕ್ಕೂ ಅಧಿಕ ರೇಷ್ಮೆ ಸೀರೆಗಳನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೋಟ್ಯಂತರ ಬೆಲೆ ಬಾಳುವ ಚಿನ್ನವನ್ನೂ ಉಡುಗೊರೆ ರೂಪದಲ್ಲಿ ಪ್ರಸೆಂಟ್‌ ಮಾಡಿದ್ದಾರೆ. 75 ಲಕ್ಷ ಮೊತ್ತದಲ್ಲಿ ನಿರ್ಮಿಸಿದ ಮನೆಯೊಂದನ್ನೂ ಹೆಂಡತಿಗೆ ನೀಡಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳು ನಿಜವೋ ಸುಳ್ಳೋ ಎಂಬ ಬಗ್ಗೆ ಈ ದಂಪತಿಯೇ ಅಧಿಕೃತವಾಗಿ ಹೇಳಬೇಕಿದೆ.

ಹನಿಮೂನ್‌ ಅಲ್ಲ ದೇವರ ದರ್ಶನಕ್ಕೆ..

ಸುದ್ದಿಯಲ್ಲಿರುವ ಈ ಜೋಡಿ ಸದ್ಯ ಕೆಲ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದೆ. ಇತ್ತೀಚೆಗಷ್ಟೇ ವಿಮಾನವೊಂದರ ಮುಂದೆ ಪತ್ನಿಯೊಂದಿಗೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದ ರವೀಂದರ್‌, ಈ ಫೋಟೋಗೆ ಅವರು ನೀಡಿರುವ ಕ್ಯಾಪ್ಷನ್‌ ತಮಾಷೆಯಾಗಿದೆ. ''ನಿರ್ಮಾಪಕ ರವೀಂದರ್‌ ತಮ್ಮ ಪತ್ನಿ ಜೊತೆ ಪ್ರೈವೇಟ್‌ ಜೆಟ್‌ನಲ್ಲಿ ವಿದೇಶಕ್ಕೆ ಹನಿಮೂನ್‌ ಹೋಗುತ್ತಿದ್ದಾರೆ ಎಂದು ದಯವಿಟ್ಟು ಬರೆಯಬೇಡಿ. ನಾನು ತಿರಿಚಿ ಬಳಿಯ ದಲ್ಮಿಯಾಪುರಂನಲ್ಲಿರುವ ಕುಲದೇವತೆಯ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ದೇವಸ್ಥಾನದ ಮುಂದೆ ನಿಂತಿರುವ ಫೋಟೋ ಹಂಚಿಕೊಂಡು, ''ನನ್ನ ಕುಲದ ಏಳಿಗೆಗಾಗಿ ಬಂದವಳು ನೀನು, ಕುಲದೇವತೆಯ ಕೃಪೆಯಿಂದ ಬದುಕು ಆರಂಭಿಸೋಣ, ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು, ನಮ್ಮನ್ನು ದ್ವೇಷಿಸುವ ಜಗತ್ತಿಗೆ ತುಂಬಾ ಧನ್ಯವಾದಗಳು ರವಿ ಮತ್ತು ಶ್ರೀಮತಿ ರವಿ'' ಎಂದು ಬರೆದುಕೊಂಡಿದ್ದಾರೆ.

ಸೆ. 1 ರಂದು ತಿರುಪತಿಯಲ್ಲಿ ಮದುವೆಯಾಗಿದ್ದ ಜೋಡಿ

ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್‌ ಸೆಪ್ಟೆಂಬರ್‌ 1 ರಂದು ತಿರುಪತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಇಬ್ಬರೂ ಟ್ರೋಲ್‌ ಆಗಿದ್ದರು. ಮಹಾಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದಾರೆ. ಆದರೆ ರವೀಂದರ್‌ ಚಂದ್ರಶೇಖರನ್‌ ಬಹಳ ಧಡೂತಿ. ಮದುವೆ ಫೋಟೋ ನೋಡಿದವರಿಗೆ ಒಂದು ಕ್ಷಣ ಇದು ರಿಯಲ್‌ ಮದುವೆ ಎನ್ನಿಸಿಲ್ಲ. ಯಾವುದೋ ಸಿನಿಮಾ ಅಥವಾ ಜಾಹೀರಾತಿಗಾಗಿ ಹೀಗೆ ಫೋಟೋಶೂಟ್‌ ಮಾಡಿಸಿರಬಹುದು ಎಂಬ ಅನುಮಾನ ಕಾಡಿತ್ತು. ಆದರೆ ಇದು ನಿಜ ಎಂದು ತಿಳಿದಾಗ, ಕೆಲವರು ಲವ್‌ ಇಸ್‌ ಬ್ಲೈಂಡ್‌, ನಿಮ್ಮ ಜೋಡಿ ಚೆನ್ನಾಗಿಲ್ಲದಿದ್ದರೂ ನಿಮ್ಮ ಪ್ರೀತಿ ನಿಜವಾಗಿದೆ. ನೀವು ನೂರು ಕಾಲ ಬಾಳಿ ಎಂದು ಹಾರೈಸಿದರೆ, ಇನ್ನೂ ಕೆಲವರು ನಿಮ್ಮ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ಕಾಲೆಳೆದಿದ್ದರು.

IPL_Entry_Point

ವಿಭಾಗ