ಕನ್ನಡ ಸುದ್ದಿ  /  Entertainment  /  Ramya And Rashmika Wished Good Luck For Dhananjay Starrer Hoysala Movie

Ramya and Rashmika on Hoysala: ಧನಂಜಯ್‌ ‘ಗುರುದೇವ್‌ ಹೊಯ್ಸಳ’ನಿಗೆ ರಮ್ಯಾ ರಶ್ಮಿಕಾ ಸಾಥ್.. ಏನಂದ್ರು ಈ ಸುಂದರಿಯರು?

ಧನಂಜಯ್‌ ನಟನೆಯ 25ನೇ ಚಿತ್ರ ‘ಗುರುದೇವ್‌ ಹೊಯ್ಸಳ’ ಇಂದು ರಿಲೀಸ್‌ ಆಗಿದೆ. ಈ ಚಿತ್ರಕ್ಕೆ ನಟಿಯರಾದ ರಮ್ಯಾ ಮತ್ತು ರಶ್ಮಿಕಾ ಶುಭ ಕೋರಿದ್ದಾರೆ.

ಧನಂಜಯ್‌ ‘ಗುರುದೇವ್‌ ಹೊಯ್ಸಳ’ನಿಗೆ ರಮ್ಯಾ ರಶ್ಮಿಕಾ ಸಾಥ್.. ಏನಂದ್ರು ಈ ಸುಂದರಿಯರು?
ಧನಂಜಯ್‌ ‘ಗುರುದೇವ್‌ ಹೊಯ್ಸಳ’ನಿಗೆ ರಮ್ಯಾ ರಶ್ಮಿಕಾ ಸಾಥ್.. ಏನಂದ್ರು ಈ ಸುಂದರಿಯರು?

Ramya and Rashmika on Hoysala: ಡಾಲಿ ಧನಂಜಯ್‌ ನಟನೆಯ 25ನೇ ಸಿನಿಮಾ ‘ಗುರುದೇವ್‌ ಹೊಯ್ಸಳ’ ಇಂದು ರಾಜ್ಯ, ದೇಶ, ವಿದೇಶಗಳಲ್ಲಿ (ಮಾ. 30) ಬಿಡುಗಡೆ ಆಗಿದೆ. ವಿಜಯ್‌ ಎನ್‌. ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿ ಗುರುದೇವ್‌ ಹೊಯ್ಸಳನಾಗಿ ಮಿಂಚಿದ್ದಾರೆ ಧನಂಜಯ್‌. ಟೀಸರ್‌, ಟ್ರೇಲರ್‌ ಮೂಲಕ ಸದ್ದು ಮಾಡಿರುವ ಈ ಚಿತ್ರ ಪ್ರೇಕ್ಷಕ ವಲುಯದಲ್ಲಿಯೂ ಅಷ್ಟೇ ಕುತೂಹಲ ಮೂಡಿಸಿತ್ತು. ಈಗ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಯಲ್ಲಿ ಸ್ಯಾಂಡಲ್‌ವುಡ್‌ ಸಿನಿಮಾ ಮಂದಿಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ.

ಧನಂಜಯ್‌ ಹೊಯ್ಸಳನಿಗೆ ರಮ್ಯಾ ಶುಭ ಹಾರೈಕೆ..

ಧನಂಜಯ್‌ ಜತೆಗೆ ಉತ್ತರಕಾಂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲ ಕಂಬ್ಯಾಕ್‌ ಮಾಡಿರುವ ರಮ್ಯಾ, ಇದೀಗ ಹೊಯ್ಸಳನ ಬಗ್ಗೆಯೂ ಮಾತನಾಡಿದ್ದಾರೆ. "ಈ ಹಿಂದೆ ರತ್ನನ್‌ ಪ್ರಪಂಚ ಸಿನಿಮಾ ನೋಡಿ ಮನಸೋತಿದ್ದೆ. ಇದೀಗ ಗುರುದೇವ್‌ ಹೊಯ್ಸಳನನ್ನು ನೋಡಲು ಕಾತರದಲ್ಲಿದ್ದೇನೆ. ತಂಡದ ಜತೆಗೆ ಸಂತೋಷ್‌ ಚಿತ್ರಮಂದಿರಕ್ಕೆ ಬರಲಿದ್ದೇನೆ.." ಎಂದಿದ್ದಾರೆ ರಮ್ಯಾ. ಇದಕ್ಕೆ ಪ್ರತಿಕ್ರಿಯಿಸಿದ ಧನಂಜಯ್, ನೀವ್‌ ಬರ್ತೀರಾ ಅಂದಮೇಲೆ ಸೆಲೆಬ್ರೇಷನ್‌ ಇನ್ನೂ ಜೋರು ಬಿಡಿ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಏನಂದ್ರು..

ಇನ್ನು ಯಜಮಾನ ಚಿತ್ರದಲ್ಲಿ ದರ್ಶನ್‌ ಜತೆಗೆ ಧನಂಜಯ್‌ ಮತ್ತು ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಇದೀಗ ಇಂದು ಬಿಡುಗಡೆ ಆಗುತ್ತಿರುವ ಹೊಯ್ಸಳ ಚಿತ್ರಕ್ಕೆ ಖುದ್ದು ರಶ್ಮಿಕಾ ಟ್ವಿಟ್‌ ಮೂಲಕ ಶುಭಾಶಯ ರವಾನಿಸಿದ್ದಾರೆ. ಹೊಯ್ಸಳ ಚಿತ್ರಕ್ಕೆ ಒಳ್ಳೆಯದಾಗಲಿ ಎಂದಷ್ಟೇ ರಶ್ಮಿಕಾ ಟ್ವಿಟ್‌ ಮಾಡಿದ್ದಾರೆ. ಇತ್ತ ಇದೇ ರಶ್ಮಿಕಾ ತೆಲುಗಿನಲ್ಲಿ ಇಂದು ಬಿಡುಗಡೆ ಆಗುತ್ತಿರುವ ದಸರಾ ಸಿನಿಮಾ ತಂಡಕ್ಕೂ ವಿಶ್‌ ಮಾಡಿದ್ದಾರೆ. ಈ ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ.

ಹೊಯ್ಸಳನ ಮೊದಲ ವೀಕ್ಷಕನಾದ ಕಿಚ್ಚ..

ಸಿನಿಮಾಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯತ್ನಗಳಿಗೆ ನಟ ಸುದೀಪ್‌ ತಮ್ಮ ಕೈಲಾದಷ್ಟು ಸಾಥ್‌ ನೀಡುತ್ತಲೇ ಇರುತ್ತಾರೆ. ಇದೀಗ ಆ ಸಹಕಾರ ಹೊಯ್ಸಳನಿಗೂ ಸಿಕ್ಕಿದೆ. ಸಿನಿಮಾ ಬಿಡುಗಡೆಗೆ ಒಂದು ದಿನದ ಮೊದಲೇ ಅಂದರೆ ಇಂದು (ಮಾ. 29) ಸುದೀಪ್‌ ಅವರಿಗೆ ಸಿನಿಮಾ ತೋರಿಸಿದೆ ಚಿತ್ರತಂಡ. ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಹಿಟ್‌ ಎಂಬ ಪಟ್ಟಿಯನ್ನೂ ನೀಡಿದ್ದಾರೆ. ಧನಂಜಯ್‌, ನವೀನ್‌ ಶಂಕರ್‌, ಅಮೃತಾ ಅಯ್ಯಂಗಾರ್‌ ಮತ್ತು ಕಾರ್ತಿಕ್‌ ಗೌಡ ಸುದೀಪ್‌ ಅವರಿಗೆಂದೇ ವಿಶೇಷ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಿದ್ದರು. ಚಿತ್ರ ವೀಕ್ಷಿಸಿ ತಂಡಕ್ಕೆ ಶುಭಾಶಯವನ್ನೂ ಹೇಳಿದ್ದಾರೆ ಸುದೀಪ್.

ಸೋಷಿಯಲ್ ಮೆಸೇಜ್ ಹೊತ್ತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ನಿರ್ದೇಶಕ ವಿಜಯ್. ಎನ್ ಚಿತ್ರ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

IPL_Entry_Point