Sanya Iyer: ನೀಳ ಕೇಶರಾಶಿಗೆ ಕತ್ತರಿ ಹಾಕಿದ ಪುಟ್ಟಗೌರಿ ಸಾನ್ಯಾ ಅಯ್ಯರ್; ಹೊಸ ಹೇರ್ಸ್ಟೈಲ್ ಚೆನ್ನಾಗಿಲ್ಲ ಎಂದು ಬೇಸರಗೊಂಡ ಹುಡುಗರು
ಇದು ಸರ್ಪ್ರೈಸ್ ಅಲ್ಲ ಶಾಕ್ , ಈ ರೀತಿ ತುಂಡ ಕೂದಲು ನಿಮಗೆ ಸರಿ ಹೊಂದುವುದಿಲ್ಲ , ಡಿಸ್ಲೈಕ್ ಬಟನ್ ಇದ್ದಿದ್ರೆ ಚೆನ್ನಾಗಿರ್ತಿತ್ತು, ಹೆಣ್ಮಕ್ಕಳಿಗೆ ಉದ್ದ ಕೂದಲು ಬಹಳ ಚೆಂದ ಈ ರೀತಿ ಗಿಡ್ಡ ಕೂದಲು ಕತ್ತರಿಸುವ ಅವಶ್ಯಕತೆ ಏನಿತ್ತು ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಬಿಗ್ಬಾಸ್ನಿಂದ ಹೊರಗೆ ಬಂದಾಗಿನಿಂದ ಸಾಕಷ್ಟು ಜನರ ಪ್ರೀತಿ, ಅಭಿಮಾನ ಗಳಿಸಿದ್ಧಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಸಾನ್ಯಾ ಹಂಚಿಕೊಂಡಿರುವ ವಿಡಿಯೋ ನೋಡಿ ಅವರ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಸಾನ್ಯಾ ತಮ್ಮ ನೀಳ ಕೇಶರಾಶಿಗೆ ಕತ್ತರಿ ಹಾಕಿದ್ದಾರೆ. ಅವರ ಹೊಸ ಹೇರ್ಸ್ಟೈಲ್ ನೋಡಿ ಕೆಲವರು ಮಾತ್ರ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಉಳಿದವರು ಮಾತ್ರ ಮೊದಲಿದ್ದ ಸ್ಟೈಲ್ ಚೆನ್ನಾಗಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸಾನ್ಯಾ ಅಯ್ಯರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲು ಉದ್ದ ಕೂದಲಿರುವ ಕ್ಲಿಪ್ಪಿಂಗ್ ಹಂಚಿಕೊಂಡು ನಂತರ ಕೂದಲಿಗೆ ಕತ್ತರಿ ಹಾಕಿರುವ ವಿಡಿಯೋ ಸೇರಿಸಿದ್ದಾರೆ. ''ಯಾಕೆ ಅಂತ ಕೇಳ್ಬೇಡಿ ಆಯ್ತಾ ? ಇದು ಸರ್ಪ್ರೈಸ್'' ಎಂದು ಸಾನ್ಯಾ ಬರೆದುಕೊಂಡಿದ್ದಾರೆ.
ಈ ವಿಡಿಯೋಗೆ ನಾನಾ ಕಮೆಂಟ್ಗಳು ಹರಿದುಬರುತ್ತಿವೆ. ಇದು ಸರ್ಪ್ರೈಸ್ ಅಲ್ಲ ಶಾಕ್ , ಈ ರೀತಿ ತುಂಡ ಕೂದಲು ನಿಮಗೆ ಸರಿ ಹೊಂದುವುದಿಲ್ಲ , ಡಿಸ್ಲೈಕ್ ಬಟನ್ ಇದ್ದಿದ್ರೆ ಚೆನ್ನಾಗಿರ್ತಿತ್ತು, ಹೆಣ್ಮಕ್ಕಳಿಗೆ ಉದ್ದ ಕೂದಲು ಬಹಳ ಚೆಂದ ಈ ರೀತಿ ಗಿಡ್ಡ ಕೂದಲು ಕತ್ತರಿಸುವ ಅವಶ್ಯಕತೆ ಏನಿತ್ತು?, ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ತಾ? ನೀವು ಯಾವ ರೀತಿ ಹೇರ್ಸ್ಟೈಲ್ ಮಾಡಿದ್ರೂ ಬಹಳ ಚೆನ್ನಾಗಿ ಕಾಣ್ತೀರ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಜೊತೆಗೆ ಸಾನ್ಯಾ ಹೇಳಲು ಹೊರಟ ಆ ಸರ್ಪ್ರೈಸ್ ಸುದ್ದಿಗಾಗಿ ಕಾಯುತ್ತಿದ್ದಾರೆ.
ವಿವಾದಗಳಿಂದ ಕೂಡಾ ಸುದ್ದಿಯಾಗಿದ್ದ ಸಾನ್ಯಾ
ಇದೇ ವರ್ಷ ಜನವರಿಯಲ್ಲಿ ಸಾನ್ಯಾ ಅಯ್ಯರ್ ಪುತ್ತೂರಿನಲ್ಲಿ ನಡೆದ 30ನೇ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನೋಡಲು ಅತಿಥಿಯಾಗಿ ತೆರಳಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಾನ್ಯಾ, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ 'ಐ ಲವ್ ಯೂ ಪುತ್ತೂರು' ಎಂದಿದ್ದಾರೆ. ಈ ಮಾತುಗಳನ್ನು ಕೇಳಿದ ಒಬ್ಬ ಅಭಿಮಾನಿ ಎಲ್ಲರಿಗೂ ಕೇಳುವಂತೆ 'ಐ ಲವ್ ಯೂ ಸಾನ್ಯಾ' ಎಂದಿದ್ದಾರೆ. ಇದೇ ರೀತಿ ಪದೇ ಪದೇ ಐ ಲವ್ ಯೂ ಎಂದು ಅರಚಾಡುತ್ತಿದ್ದ ಆತ ಕಾರ್ಯಕ್ರಮ ಮುಗಿದ ನಂತರ ಸಾನ್ಯಾ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದರಿಂದ ಸಾನ್ಯಾ ಬೇಸರ ವ್ಯಕ್ತಪಡಿಸಿದ್ದರು. ನಂತರ ವೇದಿಕೆಯಲ್ಲೇ ಆಯೋಜಕರಿಗೆ ಬೆರಳು ತೋರಿಸಿ ಆವಾಜ್ ಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸಾನ್ಯಾ ಮೈ ಮೇಲೆ ಕಾಮಾಕ್ಯದೇವಿ ಆವಾಹನೆ
ಸಾನ್ಯಾ ಅಯ್ಯರ್, ಬಿಗ್ ಬಾಸ್ಗೆ ಬರುವ ಮುನ್ನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಆ ವೇಳೆ ಅವರು ಮಹಿಷಾಸುರ ಮರ್ದಿನಿ ರೂಪಕದಲ್ಲಿ ದೇವಿ ವೇಷ ಧರಿಸಿ ನೃತ್ಯ ಮಾಡಿದ್ದರು. ವೇದಿಕೆ ಮೇಲೆ ಬರುವ ಮುನ್ನ ಸಾನ್ಯಾಗೆ ದೇವಿ ಆವಾಹನೆಯಾಗಿತ್ತಂತೆ. ಈ ವಿಡಿಯೋ ತುಣುಕು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಾಹಿನಿಗಳಲ್ಲಿ ಚರ್ಚೆ ನಡೆದಿತ್ತು.