ಕನ್ನಡ ಸುದ್ದಿ  /  Entertainment  /  Theft At Aishwarya Rajinikanth Home

Aishwarya Rajinikanth: ರಜನಿಕಾಂತ್‌ ಪುತ್ರಿ ಮನೆಯಲ್ಲಿ ದರೋಡೆ... ಪೊಲೀಸರಿಗೆ ದೂರು ನೀಡಿದ ಐಶ್ವರ್ಯ

ನಾನು ಬಹಳ ದಿನಗಳಿಂದ ಲಾಕರ್‌ನತ್ತ ಗಮನ ಹರಿಸಿದಲಿಲ್ಲ. ಆದರೆ ಈಗ ನೋಡಿದರೆ ಅಲ್ಲಿ ಇಟ್ಟಿದ್ದೆಲ್ಲಾ ನಾಪತ್ತೆಯಾಗಿದೆ ಎಂದು ಕೂಡಾ ಐಶ್ವರ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಐಶ್ವರ್ಯ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಐಶ್ವರ್ಯ ರಜನಿಕಾಂತ್‌ ಮನೆಯಲ್ಲಿ ಕಳ್ಳತನ
ಐಶ್ವರ್ಯ ರಜನಿಕಾಂತ್‌ ಮನೆಯಲ್ಲಿ ಕಳ್ಳತನ

ಖ್ಯಾತ ನಟ ರಜನಿಕಾಂತ್‌ ಪುತ್ರಿ ಐಶ್ವರ್ಯ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಹಣ ಕಳ್ಳತನವಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳತನವಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಐಶ್ವರ್ಯ ತೆನಾಂಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಘಟನೆ ಫೆಬ್ರವರಿ 10 ರಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಐಶ್ವರ್ಯ ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಆಕೆ ಮನೆಯಲ್ಲಿ ಇಲ್ಲದೆ ಸಮಯವನ್ನೇ ನೋಡಿಕೊಂಡ ಕಳ್ಳರು ಹೊಂಚು ಹಾಕಿ ಐಶ್ವರ್ಯ ಮನೆಯಲ್ಲಿ ಲೂಟಿ ಮಾಡಿದ್ದಾರೆ. ಐಶ್ವರ್ಯ ಹೇಳಿಕೆ ಪ್ರಕಾರ ಲಾಕರ್‌ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳು, ವಜ್ರ, ಚಿನ್ನದ ಆಭರಣ, ಹಣ ಕಳ್ಳತನವಾಗಿದೆ. ಹಾಗೇ ತಾವು ಲಾಕರ್‌ನಲ್ಲಿ ಇಷ್ಟು ಸಾಮಗ್ರಿಗಳನ್ನು ಇಟ್ಟಿದ್ದ ವಿಚಾರ ಮನೆ ಕೆಲಸದವರಿಗೆ ಮಾತ್ರ ಗೊತ್ತಿತ್ತು. ನಾನು ಬಹಳ ದಿನಗಳಿಂದ ಲಾಕರ್‌ನತ್ತ ಗಮನ ಹರಿಸಿದಲಿಲ್ಲ. ಆದರೆ ಈಗ ನೋಡಿದರೆ ಅಲ್ಲಿ ಇಟ್ಟಿದ್ದೆಲ್ಲಾ ನಾಪತ್ತೆಯಾಗಿದೆ ಎಂದು ಕೂಡಾ ಐಶ್ವರ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಐಶ್ವರ್ಯ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಲಾಲ್‌ ಸಲಾಮ್‌ ಚಿತ್ರ ನಿರ್ದೇಶಿಸುತ್ತಿರುವ ಐಶ್ವರ್ಯ

ಕಳೆದ ವರ್ಷ ನವೆಂಬರ್‌ 5 ರಂದು'ಲಾಲ್‌ ಸಲಾಮ್‌' ಚಿತ್ರದ ಮುಹೂರ್ತ ನೆರವೇರಿದ್ದು ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. 'ಲಾಲ್‌ ಸಲಾಮ್‌', ಕ್ರಿಕೆಟ್‌ ಹಿನ್ನೆಲೆ ಇರುವ ಕಥೆಯನ್ನೊಂದಿದ್ದು ತಮಿಳಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌, ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ವಿಶಾಲ್‌ ಹಾಗೂ ವಿಕ್ರಾಂತ್‌ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್‌ ಕೂಡಾ ಮಗಳು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪತಿ ಧನುಷ್‌ ಅವರಿಂದ ದೂರಾಗಿರುವ ಐಶ್ವರ್ಯ

ಕಳೆದ ವರ್ಷ ಜನವರಿ 17 ರಂದು ಐಶ್ವರ್ಯ ಹಾಗೂ ಧನುಷ್‌ ಡಿವೋರ್ಸ್‌ ಘೋಷಿಸಿದ್ದರು. ತಮಿಳಿನ ಖ್ಯಾತ ನಿರ್ದೇಶಕ-ನಿರ್ಮಾಪಕ ಕಸ್ತೂರಿ ರಾಜಾ ಪುತ್ರ ಧನುಷ್ 2004 ರಲ್ಲಿ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇವರು ಮದುವೆಯಾದಾಗ ಧನುಷ್​​​​​​ಗೆ 21 ಹಾಗೂ ಐಶ್ವರ್ಯಾಗೆ 23 ವರ್ಷ ವಯಸ್ಸು. ಈ ದಂಪತಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ‌''ಹಿತೈಷಿಗಳಾಗಿ, ಪೋಷಕರಾಗಿ, ಸ್ನೇಹಿತರಾಗಿ, ದಂಪತಿಗಳಾಗಿ 18 ವರ್ಷಗಳ ನಮ್ಮ ಜೀವನ ಪರಸ್ಪರ ಹೊಂದಾಣಿಕೆ, ಬೆಳವಣಿಗೆಯಿಂದ ಕೂಡಿತ್ತು. ಆದರೆ ಈಗ ನಾವು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಗಂಡ-ಹೆಂಡತಿ ಸಂಬಂಧದಿಂದ ಹೊರ ಬರುವ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನಿರ್ಧಾರವನ್ನು ದಯವಿಟ್ಟು ಗೌರವಿಸಿ ಹಾಗೂ ಅದನ್ನು ನಿಭಾಯಿಸುವಂತ ಪ್ರೈವೆಸಿಯನ್ನು ನಮಗೆ ನೀಡಿ ಪ್ರೀತಿಯನ್ನು ಹರಡಿ'' ಎಂದು ಧನುಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಐಶ್ವರ್ಯ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದೇ ಪೋಸ್ಟ್ ಹಂಚಿಕೊಂಡಿದ್ದು 'ಇದಕ್ಕೆ ಕ್ಯಾಪ್ಷನ್ ಅಗತ್ಯವಿಲ್ಲ. ನಿಮ್ಮ ಪ್ರೀತಿ ಹಾಗೂ ವಿವೇಚನೆಯಷ್ಟೇ ಅಗತ್ಯ' ಎಂದು ಹೇಳಿದ್ದರು.

IPL_Entry_Point

ವಿಭಾಗ