ಕನ್ನಡ ಸುದ್ದಿ  /  ಕರ್ನಾಟಕ  /  Ramanagara: 'ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗುವಿಂದ ದುರಾದೃಷ್ಟ'; ಜ್ಯೋತಿಷ್ಯ ನಂಬಿ ಪತ್ನಿ-ಮಗುವನ್ನು ಹೊರ ಹಾಕಿದ ಭೂಪ

Ramanagara: 'ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗುವಿಂದ ದುರಾದೃಷ್ಟ'; ಜ್ಯೋತಿಷ್ಯ ನಂಬಿ ಪತ್ನಿ-ಮಗುವನ್ನು ಹೊರ ಹಾಕಿದ ಭೂಪ

ಪೊಲೀಸರ ಪ್ರಕಾರ, ದಂಪತಿ ನಡುವಿನ ಪ್ರಮುಖ ಸಮಸ್ಯೆ ವರದಕ್ಷಿಣೆ. ಅದಕ್ಕೆ ನೆಪವಾಗಿ, ಆ ಮಗು ಕುಟುಂಬಕ್ಕೆ ದುರಾದೃಷ್ಟ ತರುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಹಿನ್ನೆಲೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರು ತನ್ನನ್ನು ಹೊರಹಾಕಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಮನಗರ: ಜ್ಯೋತಿಷ್ಯವನ್ನು ನಂಬಿ ಜನ ಏನೆಲ್ಲಾ ಮಾಡ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನ. ರಾಶಿಭವಿಷ್ಯ, ಜ್ಯೋತಿಷ್ಯ ಶಾಸ್ತ್ರ ಅಥವಾ ಪಂಚಾಂಗಗಳ ನಂಬಿ ವಾಸ್ತು ಸರಿಪಡಿಸಿಕೊಂಡವರು ಇದ್ದಾರೆ. ಜೀವನಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಧನಾತ್ಮ ಕ ಬದಲಾವಣೆ ಕಂಡುಕೊಂಡವರೂ ಇರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಜ್ಯೋತಿಷಿಗಳು ಹೇಳಿದ್ದನ್ನು ಕೇಳಿ ತನ್ನ ಪತ್ನಿ ಹಾಗೂ ಪುಟ್ಟ ಮಗುವನ್ನು ದೂರ ಮಾಡಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಕುಟುಂಬಕ್ಕೆ ಅದೃಷ್ಟದ ಬದಲು ದುರಾದೃಷ್ಟ ತರಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಮಾತು ಕೇಳಿದ ಈ ವ್ಯಕ್ತಿ, ತಾನು ತಾಳಿ ಕಟ್ಟಿ ವಿವಾಹವಾದ ಪತ್ನಿ ಹಾಗೂ ಮೂರು ವರ್ಷದ ಮಗನನ್ನು ಮನೆಯಿಂದ ಹೊರ ಹಾಕಿದ್ದಾನೆ. ಹೀಗೆಂದು ಸಂತ್ರಸ್ತ ಮಹಿಳೆಯು ರಾಮನಗರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದುವೆಯಾದಾಗಿನಿಂದಲೂ ಪತಿ ವರದಕ್ಷಿಣೆಗಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಮಗನ ಮೂಲ ನಕ್ಷತ್ರದ ಜನನದ ಬಗ್ಗೆ ತಿಳಿದ ಬಳಿಕ ಆತ ನಿತ್ಯ ಪೀಡಿಸುತ್ತಿದ್ದಾನೆ ಎಂದು ಮಹಿಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಶೃತಿ ಕಳೆದ ನಾಲ್ಕು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಜುನಾಥ ಲೇಔಟ್‌ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ನವೀನ್ ಎಂಬಾತನನ್ನು ವಿವಾಹವಾಗಿದ್ದಾರೆ.

ಈ ಬಗ್ಗೆ ಕಳೆದ ಗುರುವಾರ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಪೊಲೀಸರು ನವೀನ್‌ನನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ. ಪೊಲೀಸರ ಪ್ರಕಾರ, ದಂಪತಿ ನಡುವಿನ ಪ್ರಮುಖ ಸಮಸ್ಯೆ ವರದಕ್ಷಿಣೆ. ಅದಕ್ಕೆ ನೆಪವಾಗಿ, ಆ ಮಗು ಕುಟುಂಬಕ್ಕೆ ದುರಾದೃಷ್ಟ ತರುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಹಿನ್ನೆಲೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರು ತನ್ನನ್ನು ಹೊರಹಾಕಿದ್ದಾರೆ ಎಂದು ಶ್ರುತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. “ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗಾಗಿ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ” ಎಂದು ರಾಮನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ ಸಂತೋಷ್ ಬಾಬು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಈ ದಂಪತಿಗೆ 2020ರ ಜನವರಿ 22ರಂದು ಗಂಡು ಮಗುವಾಗಿದೆ. ಮಗುವಿನ ಭವಿಷ್ಯ ಕೇಳುವ ಸಲುವಾಗಿ ಪತಿ ಜ್ಯೋತಿಷಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಗು ಮೂಲ ನಕ್ಷತ್ರದಲ್ಲಿ ಹುಟ್ಟಿರುವುದರಿಂಧ ತಂದೆ ಹಾಗೂ ಕುಟುಂಬಕ್ಕೆ ದುರದೃಷ್ಟಕರ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಬಳಿಕ ನವೀನ್ ತನ್ನ ಹೆಂಡತಿ ಮತ್ತು ಮಗುವಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನಂತೆ.

IPL_Entry_Point