hanuman jayanti 2024: ಕರ್ನಾಟಕದ ಪ್ರಮುಖ ಹನುಮ ದೇಗುಲ, ಬೆಂಗಳೂರು,ಮೈಸೂರು, ಶಿಕಾರಿಪುರ, ಹಂಪಿ, ನುಗ್ಗಿಕೇರಿಯಲ್ಲಿ ಆಂಜನೇಯನ ಸ್ಮರಣೆ
ಹನುಮಾನ್ ಹುಟ್ಟಿದ ನಾಡು ಕರ್ನಾಟಕ. ಇಲ್ಲಿ ಸಾಕಷ್ಟು ಕಡೆ ಆಂಜನೇಯ ದೇಗುಲಗಳಿವೆ. ಇದರಲ್ಲಿ ಹತ್ತು ಪ್ರಮುಖ ದೇಗುಲಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
(1 / 10)
ಬೆಂಗಳೂರಿನ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನವನ್ನುರಾಗಿಗುಡ್ಡ ಆಂಜನೇಯ ದೇವಸ್ಥಾನ ಎಂದೇ ಕರೆಯಲಾಗುತ್ತದೆ. ಐದು ದಶಕದ ಹಿಂದೆ ಆರಂಭಗೊಂಡಿರುವ ದೇಗುಲವನ್ನು ಟ್ರಸ್ಟ್ ನಿರ್ವಹಿಸುತ್ತದೆ. ವಿಶೇಷ ಆಂಜನೇಯ ಮೂರ್ತಿ ಇಲ್ಲಿನ ಆಕರ್ಷಣೆ.
(2 / 10)
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಿರ್ಮಿಸಲಾಗಿರುವ ಕಾರ್ಯಸಿದ್ದಿ ಆಂಜನೇಯ ದೇಗುಲ ಹಾಗೂ ಮೂರ್ತಿ ಇದು. 70 ಅಡಿ ಉದ್ದದ ಮೂರ್ತಿ ಇಲ್ಲಿನ ವಿಶೇಷ. ದಶಕದ ಹಿಂದೆ ಈ ದೇಗುಲ ಆರಂಭಗೊಂಡಿದೆ.
(3 / 10)
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿದೇ ಆಂಜನೇಯಸ್ವಾಮಿ ದೇಗುಲ. 600 ವರ್ಷಕ್ಕೂ ಹೆಚ್ಚು ಹಳೆಯ ದೇಗುಲವಿದು. ವ್ಯಾಸರಾಜ ನಿರ್ಮಿತ ದೇಗುಲ ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ,
(4 / 10)
ಹಂಪಿಯಲ್ಲಿರುವ ಯಂತ್ರೋದ್ದಾರಕ ಆಂಜನೇಯ ದೇಗುಲವಿದು, ತುಂಗಭದ್ರಾ ನದಿ ತೀರದಲ್ಲಿರುವ ಈ ಸ್ಥಳವನ್ನು ಹನುಮ ಜನುಮ ಸ್ಥಳ ಎಂದು ಕರೆಯಲಾಗುತ್ತದೆ.
(5 / 10)
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯ ಕಾಂತೇಶ ಕೂಡ ಪ್ರಮುಖ ಆಂಜನೇಯ ದೇವಾಲಯ. ಶಿವಮೊಗ್ಗ ಹಾಗೂ ಹಾವೇರಿ ಭಾಗದಲ್ಲಿ ಕಾಂತೇಶ- ಭ್ರಾಂತೇಶ ಹಾಗೂ ಶಾಂತೇಶ ಆಂಜನೇಯ ದೇಗುಲ ಬಲು ಜನಪ್ರಿಯ.
(6 / 10)
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿರುವ ಭ್ರಾಂತೇಶ ದೇಗುಲವಿದು. ಇದನ್ನು ಹುಚ್ಚೂರಾಯ ಸ್ವಾಮಿ ಎಂದೂ ಕರೆಯಲಾಗುತ್ತದೆ. ಜನರ ಭ್ರಾಂತುಗಳನ್ನು ಬಿಡಿಸುವ ಶಕ್ತಿ ಈ ದೇವರಿಗಿದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
(7 / 10)
ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿರುವ ಶಾಂತೇಶ ದೇಗುಲ ಶಾಂತ ಮೂರ್ತಿ. ಇದು ಕೂಡ ಹಳೆಯ ದೇಗುಲ
(8 / 10)
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಗ್ರಾಮದ ಆಂಜನೇಯಸ್ವಾಮಿ ದೇಗುಲ ಪುರಾತನವಾದದ್ದು ಹಾಗೂ ಶಕ್ತಿಯುತವಾದದ್ದು.
(9 / 10)
ಬಾಗಲಕೋಟೆ ನಗರದಿಂದ ಹತ್ತು ಕಿ.ಮಿ. ದೂರದಲ್ಲಿರುವ ತುಳಸಿಗೇರಿ ಆಂಜನೇಯಸ್ವಾಮಿ ದೇಗುಲವೂ ಪುರಾತನವಾದದ್ದು. ತಿರುಪತಿಗೆ ನಂಟು ಇರುವ ಈ ದೇಗುಲದ ಜಾತ್ರೆ ವಿಶೇಷ.
ಇತರ ಗ್ಯಾಲರಿಗಳು