‘ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ?’ ನಟ ಪ್ರಥಮ್‌ ಗರಂ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ?’ ನಟ ಪ್ರಥಮ್‌ ಗರಂ

‘ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ?’ ನಟ ಪ್ರಥಮ್‌ ಗರಂ

  • ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ಫಯಾಜ್‌ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ರಾಜಕೀಯ ಬಣ್ಣವನ್ನೂ ಪಡೆಯುತ್ತಿದೆ. ಈ ನಡುವೆ ನೇಹಾಳ ಮನೆಗೆ ನಟ ಪ್ರಥಮ್‌ ತೆರಳಿದ್ದಾರೆ. ಜತೆಗೆ ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ ಎಂದೂ ಗರಂ ಆಗಿದ್ದಾರೆ.

ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಎಲ್ಲೆಡೆ ನೇಹಾಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲ ಧ್ವನಿ ಕೇಳಿಬರುತ್ತಿದೆ.
icon

(1 / 7)

ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಎಲ್ಲೆಡೆ ನೇಹಾಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲ ಧ್ವನಿ ಕೇಳಿಬರುತ್ತಿದೆ.

ಹುಬ್ಬಳ್ಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯ ಮೊರೆ ಹೋದರೆ, ಸೋಷಿಯಲ್‌ ಮೀಡಿಯಾದಲ್ಲೂ ದೊಡ್ಡ ಅಭಿಮಾನವೇ ಶುರುವಾಗಿದೆ. 
icon

(2 / 7)

ಹುಬ್ಬಳ್ಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯ ಮೊರೆ ಹೋದರೆ, ಸೋಷಿಯಲ್‌ ಮೀಡಿಯಾದಲ್ಲೂ ದೊಡ್ಡ ಅಭಿಮಾನವೇ ಶುರುವಾಗಿದೆ. 

ಈ ನಡುವೆ ನಟ ಪ್ರಥಮ್‌, ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಮನೆಗೆ ತೆರಳಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿ ತಮ್ಮದೇ ಧಾಟಿಯಲ್ಲಿ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ. 
icon

(3 / 7)

ಈ ನಡುವೆ ನಟ ಪ್ರಥಮ್‌, ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಮನೆಗೆ ತೆರಳಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿ ತಮ್ಮದೇ ಧಾಟಿಯಲ್ಲಿ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ. 

"ನಮಗಂತೂ ನೇಹಾ ಅವರ ಹತ್ಯೆ ತುಂಬ ನೋವು ತರಿಸಿದೆ. ಈ ನಡುವೆ ರಾಜಕೀಯ ಪಕ್ಷಗಳು ಮಾತ್ರ ಬಗೆಬಗೆ ಹೇಳಿಕೆ ನೀಡುತ್ತಿವೆ. ಇವರ ಆ ಹೇಳಿಕೆಯಿಂದ ಕುಟುಂಬ ನೋವು ಅನುಭವಿಸುತ್ತಿದೆ" ಎಂದಿದ್ದಾರೆ. 
icon

(4 / 7)

"ನಮಗಂತೂ ನೇಹಾ ಅವರ ಹತ್ಯೆ ತುಂಬ ನೋವು ತರಿಸಿದೆ. ಈ ನಡುವೆ ರಾಜಕೀಯ ಪಕ್ಷಗಳು ಮಾತ್ರ ಬಗೆಬಗೆ ಹೇಳಿಕೆ ನೀಡುತ್ತಿವೆ. ಇವರ ಆ ಹೇಳಿಕೆಯಿಂದ ಕುಟುಂಬ ನೋವು ಅನುಭವಿಸುತ್ತಿದೆ" ಎಂದಿದ್ದಾರೆ. 

“ಈ ಸಾವಿನಲ್ಲಿ ರಾಜಕಾರಣ ಮಾಡಬೇಡಿ. ಓಲೈಕೆ ರಾಜಕಾರಣ ಕೈಬಿಡಿ. ಆದಷ್ಟು ಬೇಗ ನೇಹಾ ಹಂತಕನಿಗೆ ಶಿಕ್ಷೆ ಆಗಬೇಕು. ಆಗ ನೇಹಾ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ. ಫಯಾಜ್‌ ಬರೋಬ್ಬರಿ 9 ಬಾರಿ ನೇಹಾಗೆ ಚಾಕು ಇರಿದಿದ್ದಾನೆ. ಇದು ನಿಜಕ್ಕೂ ಕ್ಷಮಿಸಲಾರ್ಹ ತಪ್ಪು”
icon

(5 / 7)

“ಈ ಸಾವಿನಲ್ಲಿ ರಾಜಕಾರಣ ಮಾಡಬೇಡಿ. ಓಲೈಕೆ ರಾಜಕಾರಣ ಕೈಬಿಡಿ. ಆದಷ್ಟು ಬೇಗ ನೇಹಾ ಹಂತಕನಿಗೆ ಶಿಕ್ಷೆ ಆಗಬೇಕು. ಆಗ ನೇಹಾ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ. ಫಯಾಜ್‌ ಬರೋಬ್ಬರಿ 9 ಬಾರಿ ನೇಹಾಗೆ ಚಾಕು ಇರಿದಿದ್ದಾನೆ. ಇದು ನಿಜಕ್ಕೂ ಕ್ಷಮಿಸಲಾರ್ಹ ತಪ್ಪು”

"ಇಂಥ ಅಯೋಗ್ಯರನ್ನು ಒಂದು ಗತಿ ಕಾಣಿಸುವ ಕೆಲಸವನ್ನು ಮುಸ್ಲಿಂ ಸಮುದಾಯವೇ ಮಾಡಬೇಕು. ಯಾರೂ ಅವನ ಪರವಾಗಿ ವಕಾಲತ್ತು ವಹಿಸಕೂಡದು. ಅದರಲ್ಲೂ ನಿಮಗೆ ಯಾಕ್ರಯ್ಯ ಹಿಂದೂ ಹುಡುಗಿಯರ ಸಹವಾಸ" ಎಂದಿದ್ದಾರೆ.  
icon

(6 / 7)

"ಇಂಥ ಅಯೋಗ್ಯರನ್ನು ಒಂದು ಗತಿ ಕಾಣಿಸುವ ಕೆಲಸವನ್ನು ಮುಸ್ಲಿಂ ಸಮುದಾಯವೇ ಮಾಡಬೇಕು. ಯಾರೂ ಅವನ ಪರವಾಗಿ ವಕಾಲತ್ತು ವಹಿಸಕೂಡದು. ಅದರಲ್ಲೂ ನಿಮಗೆ ಯಾಕ್ರಯ್ಯ ಹಿಂದೂ ಹುಡುಗಿಯರ ಸಹವಾಸ" ಎಂದಿದ್ದಾರೆ.  

"ನಿಮ್ಮ ಧರ್ಮದಲ್ಲಿ ಒಂದಲ್ಲ ಎರಡಲ್ಲ 10 ಮದುವೆಯಾಗಿ ಖುಷಿಯಾಗಿರಿ. ,ನಿಮಗ್ಯಾರು ಬೇಡ ಅಂದವರು. ಆದರೆ, ಹಿಂದೂ ಹುಡುಗಿಯರ ಸಹವಾಸ ಯಾಕ್ರಯ್ಯ ನಿಮಗೆ. ನಮ್ಮ ಹಿಂದೂಗಳ ತಂಟೆಗೆ ಮಾತ್ರ ಬರಬೇಡಿ, ಚೆನ್ನಾಗಿರಲ್ಲ" ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಪ್ರಥಮ್.
icon

(7 / 7)

"ನಿಮ್ಮ ಧರ್ಮದಲ್ಲಿ ಒಂದಲ್ಲ ಎರಡಲ್ಲ 10 ಮದುವೆಯಾಗಿ ಖುಷಿಯಾಗಿರಿ. ,ನಿಮಗ್ಯಾರು ಬೇಡ ಅಂದವರು. ಆದರೆ, ಹಿಂದೂ ಹುಡುಗಿಯರ ಸಹವಾಸ ಯಾಕ್ರಯ್ಯ ನಿಮಗೆ. ನಮ್ಮ ಹಿಂದೂಗಳ ತಂಟೆಗೆ ಮಾತ್ರ ಬರಬೇಡಿ, ಚೆನ್ನಾಗಿರಲ್ಲ" ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಪ್ರಥಮ್.


ಇತರ ಗ್ಯಾಲರಿಗಳು