ಧರ್ಮರಾಯನು ತಮ್ಮೆಲ್ಲರನ್ನೂ ಸದಾಕಾಲ ಕಾಪಾಡುತ್ತಿರುವ ಶ್ರೀಕೃಷ್ಣನನ್ನು ತಾನು ಮತ್ತು ತನ್ನ ಸೋದರರು ಎದುರಾಗಿರುವ ಕಷ್ಟಗಳಿಂದ ಪಾರಾಗಲು ಹಾಗು ಕಳೆದುಕೊಂಡ ಸಾಮ್ರಾಜ್ಯವನ್ನು ಮರಳಿ ಪಡೆಯಲು ಮಾಡಬೇಕಾದ ವ್ರತ್ಗಗಳ ಬಗ್ಗೆ ತಿಳಿಸಲು ಬಿನ್ನವಿಸಿಕೊಳ್ಳುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಿಗೆ ಸಂಕಷ್ಟಹರ ಚತುರ್ಥಿ ವ್ರತ ಆಚರಿಸುವಂತೆ ತಿಳಿಸುತ್ತಾನೆ.