Latest Hassan Photos

<p>ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ.&nbsp;</p>

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

Sunday, April 28, 2024

<p>ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.</p><p>ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.</p>

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

Saturday, April 27, 2024

<p>ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ &nbsp;ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.&nbsp;</p>

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

<p>ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.&nbsp;</p>

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

<p>ಹಾಸನ ಜಿಲ್ಲೆಯು ಸಾಕಷ್ಟು ಪ್ರವಾಸಿ ತಾಣಗಳನ್ನು ತನ್ನ ಮಡಿಲಿನೊಳಗೆ ಇರಿಸಿಕೊಂಡಿದೆ. ಇಲ್ಲಿನ ಬೆಟ್ಟ-ಗುಡ್ಡಗಳು, ಜಲಪಾತಗಳು, ದೇವಾಲಯಗಳು ಜನರನ್ನು ಕೈಬೀಸಿ ಕರೆಯುತ್ತವೆ. ಶಿವರಾತ್ರಿ ಹಬ್ಬ ಸಮೀಪದಲ್ಲಿದ್ದು ನೀವು ಹಾಸನದ ಕಡೆ ಪ್ರವಾಸ ಹೊರಟಿದ್ದರೆ ಈ ಜಾಗಗಳನ್ನು ಮಿಸ್‌ ಮಾಡ್ಡೆ ನೋಡಿ ಬನ್ನಿ. ಕರ್ನಾಟಕದ ಹಲವು ಭಾಗಗಳಿಂದ ಇಲ್ಲಿಗೆ ರೈಲು ಹಾಗೂ ಬಸ್ಸಿನ ಸೌಕರ್ಯಗಳಿವೆ. ಬೆಂಗಳೂರಿನಿಂದ ಹಾಸನಕ್ಕೆ 182 ಕಿಲೊಮೀಟರ್‌ ದೂರವಿದೆ. ಶೆಟ್ಟಿಹಳ್ಳಿ ಚರ್ಚ್‌, ಹಾಸನಾಂಬ ದೇವಾಲಯ, ಗೋರೂರು ಡ್ಯಾಮ್‌, ಅರಸೀಕೆರೆ ಈಶ್ವರ ದೇವಾಲಯ, ಕೇದಾರೇಶ್ವರ ದೇವಾಲಯ, ಬೂಸೇಶ್ವರ ದೇವಾಲಯ ಸೇರಿದಂತೆ ಈ ಜಿಲ್ಲೆಯಲ್ಲಿ ನೋಡಲೇಬೇಕಾದದ 10 ಪ್ರಸಿದ್ಧ ಪ್ರವಾಸಿತಾಣಗಳ ಪರಿಚಯ ಇಲ್ಲಿದೆ.&nbsp;</p>

ಕೇದಾರೇಶ್ವರ ದೇವಾಲಯ, ಶೆಟ್ಟಿಹಳ್ಳಿ ಚರ್ಚ್‌ ಸೇರಿ ಹಾಸನದಲ್ಲಿ ತಪ್ಪದೇ ನೋಡಬೇಕಾದ 10 ಪ್ರಸಿದ್ಧ ತಾಣಗಳಿವು

Saturday, February 24, 2024

<p>&nbsp;ಕಾರ್ಯಾಚರಣೆ. ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಡಿಸಿಎಫ್‌ ಸೌರಭ್‌ಕುಮಾರ್ ನೇತೃತ್ವದಲ್ಲಿ, ಬೇಲೂರು ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಸಹರಾ ಎಸ್ಟೇಟ್‍ನಲ್ಲಿ ಪ್ರಾರಂಭಿಸಲಾಯಿತು.&nbsp;</p><p>ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳ ಸಹಕಾರದಿಂದ ಮಾರ್ಟಿನ್‌ನನ್ನು ಸೆರೆ ಹಿಡಿಯಲಾಯಿತು.</p>

Hassan News: ಹಾಸನದಲ್ಲಿ 36 ದಿನದ ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆ ಶುರು: ಸೆರೆ ಸಿಕ್ಕ ಸಾರಾ ಮಾರ್ಟಿನ್‌

Sunday, January 14, 2024

<p>ಮುಂದಿನ ವರ್ಷದ ಅಕ್ಟೋಬರ್‌ 24ರಿಂದ ನವೆಂಬರ್‌ 4 ರವರೆಗೆ ಹಾಸನಾಂಬ ದೇಗುಲ ತೆರೆದಿರಲಿದೆ. ಒಟ್ಟು 9 ದಿನ ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಘೋಷಿಸಿದ ಬಳಿಕ ಸಚಿವ ಕೆ.ಎನ್‌.ರಾಜಣ್ಣ ಅವರು ಹಾಸನಾಂಬ ದೇಗುಲದ ಗರ್ಭಗುಡಿ ಬಂದ್‌ ಮಾಡಿ ಬೀಗ ಹಾಕಿದರು.</p>

Hassan News: ಹಾಸನಾಂಬ ದೇಗುಲ ಬಂದ್‌: ಮುಂದಿನ ವರ್ಷದ ಅಕ್ಟೋಬರ್‌ 24ರಿಂದ ದರ್ಶನ, 9 ದಿನ ಭಕ್ತರಿಗೆ ಅವಕಾಶ

Thursday, November 16, 2023

<p>ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ.&nbsp;</p>

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Sunday, October 29, 2023

<p>ಕಾಫಿ &nbsp;ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಕುರಿತಾಗಿ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಎಂಟು ವರ್ಷಗಳಿಂದ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್‌ ನಗರದಲ್ಲಿ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಅಂದಿನಿಂದಲೇ ಅಂತರಾಷ್ಟ್ರೀಯ ಕಾಫಿ ದಿನ ಜಾರಿಯಲ್ಲಿದೆ.&nbsp;</p>

Coffee Day: ಕಾಫಿ ಹಲವರ ಜೀವನ ಸಂಗಾತಿ: ಕಾಫಿ ಜಗತ್ತು, ಕೃಷಿ, ಉದ್ಯಮದ ನೋಟ

Sunday, October 1, 2023

<p>ಹೊಗೆನಕಲ್‌ ಫಾಲ್ಸ್‌<br>ಕರ್ನಾಟಕದಲ್ಲಿ ಹರಿಯುವ ಕಾವೇರಿ ನದಿಯ ಕೊನೆಯ ಪ್ರವಾಸಿ ತಾಣವಿದು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಹೊಗೆನೆಕಲ್‌ ಫಾಲ್ಸ್‌ ಪ್ರವಾಸಿಗರ ಸ್ವರ್ಗವೇ ಸರಿ. ಬೋಟಿಂಗ್‌ ನಲ್ಲಿ ಹೋಗಿ ಜಲಪಾತ ವೀಕ್ಷಿಸಿ ಬರುವ ಖುಷಿಯೇ ಬೇರೆ. ಇದು ಬೆಂಗಳೂರಿಗೂ ಸಮೀಪ. ಹತ್ತಿರದಲ್ಲೇ ವೀರಪ್ಪನ್‌ ಅವರಿಂದ ಹತರಾದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಸ್ಮಾರಕವೂ ಇದೆ. ಮಲೈಮಹದೇಶ್ವರ ಬೆಟ್ಟವನ್ನೂ ನೋಡಿಕೊಂಡು ಬರಬಹುದು.</p>

Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

Wednesday, September 27, 2023

<p>ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಪಟಿ ಚಡ್ಡಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.</p>

Cauvery protests:ಕಾವೇರಿಗೆ ಮಂಡ್ಯದಲ್ಲಿ ಬಿಜೆಪಿ ಚಡ್ಡಿ ಚಳವಳಿ: ಕರ್ನಾಟಕದ ಹಲವೆಡೆ ಹೋರಾಟಕ್ಕೆ ನಾನಾ ರೂಪ

Monday, September 25, 2023

<p>ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಲೆ ಮೇಲೆ ಕಲ್ಲುಹೊತ್ತು ಖಾಲಿ ಕೊಡದೊಂದಿಗೆ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಪ್ರತಿಭಟನೆ ನಡೆಸಿದರು.</p>

Cauvery Issue: ಕಾವೇರಿ ಕಾವು : ಕರ್ನಾಟಕದ ನಾನಾ ಕಡೆ ತೀವ್ರಗೊಂಡ ಪ್ರತಿಭಟನೆ ಕಿಚ್ಚು

Sunday, September 24, 2023

<p>ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ಹನುಮಂತ ಪರಸಪ್ಪ ಸರಪಳಿ ಎಂಬ‌ ಯುವಕ ಬರೋಬ್ಬರಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ವಿಂಧ್ಯಗಿರಿ ತುದಿಗೆ ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.</p>

Hassan News: ಬರೋಬ್ಬರಿ 125 ಕೆಜಿ ಜೋಳದ ಚೀಲ ಹೊತ್ತು ಶ್ರವಣಬೆಳಗೊಳದ ವಿಂಧ್ಯಗಿರಿ ಹತ್ತಿದ ಯುವಕ; ಫೋಟೋ ನೋಡಿ

Monday, July 10, 2023

<p>"ಮೊದಲು KMF-ಅಮುಲ್‌ ವಿಲೀನಕ್ಕೆ ಯತ್ನಿಸಿದರು, ಕನ್ನಡಿಗರು ವಿರೋಧಿಸಿದಾಗ ಭ್ರಷ್ಟ BJP ನಂದಿನಿ ಬ್ರಾಂಡ್​​ಗೆ ಕೊನೇ ಮೊಳೆ ಹೊಡೆಯಲು &nbsp;ಪ್ಲಾನ್-ಬಿ ಸಿದ್ಧಪಡಿಸಿದೆ. &nbsp;ನಂದಿನಿಯು ಕರ್ನಾಟಕದ ಅನರ್ಘ್ಯ ರತ್ನ, ಕನ್ನಡಿಗರು ಹಲವು ವರ್ಷಗಳ ಪರಿಶ್ರಮ, ಸಮರ್ಪಣೆಯಿಂದ ಅದನ್ನು ಕಟ್ಟಿದ್ದಾರೆ. &nbsp;ನಂದಿನಿ ಬ್ರಾಂಡ್ಅನ್ನು ಯಾರೂ ಹೈಜಾಕ್ ಮಾಡಲು ಸಾಧ್ಯವಿಲ್ಲ" ಎಂದು ಈ ಹಿಂದೆ ಡಿಕೆಶಿ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.&nbsp;<br>&nbsp;</p>

Amul vs Nandini: ನಂದಿನಿ ಮಳಿಗೆಯಲ್ಲಿ ಹಾಲಿನ ಉತ್ಪನ್ನ ಖರೀದಿಸಿದ ಡಿಕೆಶಿ.. 'ಕನ್ನಡಿಗರು ತಮ್ಮ ಸ್ವಾಭಿಮಾನ ಮಾರಿಕೊಳ್ಳಲ್ಲ' ಎಂದ ಕೈ ನಾಯಕ

Monday, April 10, 2023

<p>ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಿ ಬಾಗಿಲು ತೆಗೆಯಲಾಯ್ತು. ತೆರೆದ ನಂತರ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಬಿಬಿಎಂಪಿ ಮಾಜಿ ಉಪಮೇಯರ್ ಹೇಮಾವತಿ‌, ಸ್ಥಳೀಯ ಶಾಸಕ ಪ್ರೀತ್ಂ ಗೌಡ ಹಾಗೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ದೇವಾಲಯದ ಟ್ರಸ್ಟಿಗಳು ಉಪಸ್ಥಿತರಿದ್ದರು.</p>

Hasanamba: ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ; ಮೊದಲ ದಿನದ ಫೋಟೋಗಳನ್ನು ಕಣ್ತುಂಬಿಕೊಳ್ಳಿ

Thursday, October 13, 2022