logo
ಕನ್ನಡ ಸುದ್ದಿ  /  ಮನರಂಜನೆ  /  Attack On Actor Vishal Home: ತಮಿಳು ನಟ ವಿಶಾಲ್‌ ಮನೆ ಮೇಲೆ ಕಲ್ಲು ತೂರಾಟ...ಪ್ರಕರಣ ದಾಖಲು

Attack on Actor Vishal home: ತಮಿಳು ನಟ ವಿಶಾಲ್‌ ಮನೆ ಮೇಲೆ ಕಲ್ಲು ತೂರಾಟ...ಪ್ರಕರಣ ದಾಖಲು

Rakshitha Sowmya HT Kannada

Sep 28, 2022 09:24 AM IST

ನಟ ವಿಶಾಲ್‌ ಮನೆ ಮೇಲೆ ದಾಳಿ

    • ಸೆಪ್ಟೆಂಬರ್‌ 27 ಮಧ್ಯರಾತ್ರಿ ಕಾರಿನಲ್ಲಿ ಬಂದ ಕಿಡಿಗೇಡಿಗಳ ಗುಂಪೊಂದು ವಿಶಾಲ್‌ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಘಟನೆ ಸಂಬಂಧ ವಿಶಾಲ್‌ ಮ್ಯಾನೇಜರ್‌, ಪೊಲೀಸರಿಗೆ ದೂರು ನೀಡಿದ್ದಾರೆ.
ನಟ ವಿಶಾಲ್‌ ಮನೆ ಮೇಲೆ ದಾಳಿ
ನಟ ವಿಶಾಲ್‌ ಮನೆ ಮೇಲೆ ದಾಳಿ (PC: Facebook)

ನಟ ವಿಶಾಲ್‌ ಮೂಲತ: ಆಂಧ್ರ ಪ್ರದೇಶಕ್ಕೆ ಸೇರಿದವರಾದರೂ ಹೆಸರು ಮಾಡಿರುವುದು ಮಾತ್ರ ತಮಿಳಿನಲ್ಲಿ. ಅಷ್ಟೇ ಏಕೆ, ಅವರು ಕನ್ನಡಿಗರಿಗೆ ಕೂಡಾ ಮೆಚ್ಚಿನ ನಟ. ಕಳೆದ ವರ್ಷ ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ, ಇದೇ ವಿಶಾಲ್‌, ಪುನೀತ್‌ ಅವರನ್ನು ನೆನೆದು ಕಣ್ಣೀರಿಟ್ಟಿದ್ದರು. ಪುನೀತ್‌ ರಾಜ್‌ಕುಮಾರ್‌ ನಡೆಸುತ್ತಿದ್ದ ಶಕ್ತಿಧಾಮದ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದರು.

ಟ್ರೆಂಡಿಂಗ್​ ಸುದ್ದಿ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

ಎಲ್ಲರೊಂದಿಗೆ ಸ್ನೇಹದಿಂದ ನಡೆದುಕೊಳ್ಳುವ ನಟ ವಿಶಾಲ್‌ ಚೆನ್ನೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಅಣ್ಣಾನಗರದಲ್ಲಿ ನಟ ವಿಶಾಲ್‌ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದು ಸೆಪ್ಟೆಂಬರ್‌ 27 ಮಧ್ಯರಾತ್ರಿ ಕಾರಿನಲ್ಲಿ ಬಂದ ಕಿಡಿಗೇಡಿಗಳ ಗುಂಪೊಂದು ವಿಶಾಲ್‌ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಘಟನೆ ಸಂಬಂಧ ವಿಶಾಲ್‌ ಮ್ಯಾನೇಜರ್‌, ಪೊಲೀಸರಿಗೆ ದೂರು ನೀಡಿದ್ದಾರೆ. ಇಡೀ ಘಟನೆ ವಿಶಾಲ್‌ ಮನೆ ಮುಂದೆ ಅಳವಡಿಸಿದರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅಣ್ಣಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶಾಲ್‌ ಮನೆ ಮೇಲೆ ಹೀಗೆ ದಾಳಿ ನಡೆದಿರುವ ವಿಚಾರ ತಿಳಿದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ವಿಶಾಲ್‌, ಯಾರ ಸುದ್ದಿಗೂ ಹೋದವರಲ್ಲ, ಆದರೆ ಸಿನಿಮಾ ಹಾಗೂ ಕಲಾವಿದರ ಸಂಘದ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ವಿಶಾಲ್‌ ವಿರುದ್ಧ ಕತ್ತಿ ಮಸೆದಿದ್ದರು. ಈ ನಡುವೆ ವಿಶಾಲ್‌ ಮನೆ ಮೇಲೆ ಯಾರು ದಾಳಿ ಮಾಡಿರಬಹುದು..? ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ವಿಶಾಲ್‌ 1989 ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು. 2004 ರಲ್ಲಿ ಚೆಲ್ಲಮೆ ಎಂಬ ಚಿತ್ರದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸುವ ಮೂಲಕ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ ವಿಶಾಲ್‌, ತಿಮಿರು, ಸತ್ಯಂ, ಪಿಸ್ತಾ, ಅವನ್‌ ಇವನ್‌, ಪೂಜೈ, ವಿಲನ್‌, ಅಯೋಗ್ಯ, ಚಕ್ರ, ಎನಿಮಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರು ಲಾಠಿ, ತುಪ್ಪರಿವಾಲನ್‌ 2, ಮಾರ್ಕ್‌ ಆಂಟೋನಿ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಚೆನ್ನೈನಲ್ಲಿ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ ಆಚರಿಸಿದ್ದ ವಿಶಾಲ್‌

ಕಳೆದ ಮಾರ್ಚ್ 17 ರಂದು ವಿಶಾಲ್, ತಮಿಳುನಾಡಿನಲ್ಲಿ ಪುನೀತ್ ರಾಜ್​​​ಕುಮಾರ್ ಹುಟ್ಟುಹಬ್ಬ ಆಚರಿಸಿದ್ದರು. ವಿಶಾಲ್ ಹಾಗೂ ಪುನೀತ್ ನಡುವೆ ಉತ್ತಮ ಸ್ನೇಹ ಇತ್ತು. ಅಪ್ಪು ಹುಟ್ಟುಹಬ್ಬವನ್ನು​​​​ ವಿಶಾಲ್, ಚೆನ್ನೈ ಸುತ್ತಮುತ್ತಲಿನ ವೃದ್ಧಾಶ್ರಮಗಳಿಗೆ ತೆರಳಿ ವೃದ್ಧರಿಗೆ ಅನ್ನದಾನ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದರು. ಈ ವಿಡಿಯೋವನ್ನು ವಿಶಾಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ''ನನ್ನ ಆತ್ಮೀಯ ಗೆಳೆಯ ಪುನೀತ್ ರಾಜ್​​​ಕುಮಾರ್ ಹುಟ್ಟುಹಬ್ಬವನ್ನು ಈ ಪ್ರೀತಿಪಾತ್ರರಿಗೆ ಸಹಾಯ ಮಾಡುವ ಮೂಲಕ ಆಚರಿಸಿದ್ದೇನೆ. ಇದಕ್ಕಿಂತ ಸಂತೋಷ ಹಾಗೂ ಹೆಮ್ಮೆ ಬೇರೆ ಯಾವುದರಿಂದಲೂ ದೊರೆಯುತ್ತಿರಲಿಲ್ಲ. ಈ ಹಿರಿಯರು ಪುನೀತ್ ಅವರನ್ನು ಆಶೀರ್ವದಿಸುವುದನ್ನು ನೋಡಲು ಬಹಳ ಖುಷಿಯಾಗುತ್ತಿದೆ'' ಎಂದು ವಿಶಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು