logo
ಕನ್ನಡ ಸುದ್ದಿ  /  ಮನರಂಜನೆ  /   Bollywood Actress Praised Rajamouli: ನನಗೆ ಸ್ಟಾರ್‌ ಹೀರೋಗಳಿಗಿಂತ ನಿರ್ದೇಶಕ ರಾಜಮೌಳಿ ಅಂದ್ರೆ ಬಹಳ ಇಷ್ಟ ಎಂದ ಬಾಲಿವುಡ್‌ ನಟಿ

Bollywood Actress Praised Rajamouli: ನನಗೆ ಸ್ಟಾರ್‌ ಹೀರೋಗಳಿಗಿಂತ ನಿರ್ದೇಶಕ ರಾಜಮೌಳಿ ಅಂದ್ರೆ ಬಹಳ ಇಷ್ಟ ಎಂದ ಬಾಲಿವುಡ್‌ ನಟಿ

HT Kannada Desk HT Kannada

Sep 22, 2022 02:26 PM IST

ರಾಜಮೌಳಿ ಹೊಗಳಿದ ಮೌನಿರಾಯ್

  • ''ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ. ಆರ್‌ಆರ್‌ಆರ್‌ ಸೇರಿದಂತೆ ಅವರು ನಿರ್ದೇಶಿಸಿದ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಅವರ ನಿರ್ದೇಶನದ ಶೈಲಿಗೆ ಫಿದಾ ಆಗಿದ್ದೇನೆ ಎಂದು ಮೌನಿ ರಾಯ್‌ ಹೇಳಿಕೊಂಡಿದ್ದಾರೆ.

ರಾಜಮೌಳಿ ಹೊಗಳಿದ ಮೌನಿರಾಯ್
ರಾಜಮೌಳಿ ಹೊಗಳಿದ ಮೌನಿರಾಯ್

ಸಾಮಾನ್ಯವಾಗಿ ಹುಡುಗಿಯರು ಹೀರೋಗಳನ್ನು ಇಷ್ಟಪಡುತ್ತಾರೆ. ಸೆಲಬ್ರಿಟಿಗಳಾದರೂ ಕೂಡಾ ನನಗೆ ಆ ಹೀರೋ ಜೊತೆ ನಟಿಸುವ ಆಸೆ ಎಂದು ಮನದಾಸೆ ವ್ಯಕ್ತಪಡಿಸುತ್ತಾರೆ. ಆದರೆ ಬಾಲಿವುಡ್‌ ನಟಿಯೊಬ್ಬರು ನನಗೆ ಸ್ಟಾರ್‌ ಹೀರೋಗಳಿಗಿಂತ ನಿರ್ದೇಶಕ ರಾಜಮೌಳಿ ಎಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

ಇತ್ತೀಚೆಗೆ ಬಾಲಿವುಡ್‌ ನಟಿಯರು, ದಕ್ಷಿಣದ ಹೀರೋ, ನಿರ್ದೇಶಕರು ಬಹಳ ಇಷ್ಟ ಎಂದು ಹೇಳುತ್ತಿರುವ ಎಷ್ಟೋ ಉದಾಹರಣೆಗಳನ್ನು ನೋಡಬಹುದು. ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಸಾರಾ ಅಲಿಖಾನ್‌ ತಮಗೆ ವಿಜಯ್‌ ದೇವರಕೊಂಡ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಕಂಗನಾ ರಣಾವತ್‌, ಬಾಲಿವುಡ್‌ಗೆ ಬಂದು ದಯವಿಟ್ಟು ಹಾಳಾಗಬೇಡಿ ಎಂದು ಯಶ್‌, ಅಲ್ಲು ಅರ್ಜುನ್‌ಗೆ ಮನವಿ ಮಾಡಿದ್ದರು. ಇದೀಗ ನಟಿ ಮೌನಿ ರಾಯ್‌, ನನಗೆ ಸ್ಟಾರ್‌ ಹೀರೋಗಳಿಗಿಂತ ರಾಜಮೌಳಿ ಎಂದರೆ ಬಹಳ ಇಷ್ಟು ಎಂದು ಹೇಳಿಕೊಂಡಿದ್ದಾರೆ.

ಹಿಂದಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುವ ಮೌನಿ ರಾಯ್ ಕೆಜಿಎಫ್‌ ಹಿಂದಿ ವರ್ಷನ್‌ನಲ್ಲಿ ಯಶ್‌ ಜೊತೆ ಹಾಡಿ ಕುಣಿದಿದ್ದರು. ಇತ್ತೀಚೆಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನೆಗೆಟಿವ್ ಟಚ್ ಇರುವ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಯಶಸ್ಸಿನ ನಂತರ, ಬ್ರಹ್ಮಾಸ್ತ್ರ ಚಿತ್ರತಂಡ ಮುಂಬೈನಲ್ಲಿ ಮತ್ತೆ ಪ್ರಚಾರ ಮಾಡುತ್ತಿದೆ. ಮೌನಿ ರಾಯ್ ಕೂಡಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವೇಳೆ ಜಕ್ಕಣ್ಣನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ''ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ. ಆರ್‌ಆರ್‌ಆರ್‌ ಸೇರಿದಂತೆ ಅವರು ನಿರ್ದೇಶಿಸಿದ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಅವರ ನಿರ್ದೇಶನದ ಶೈಲಿಗೆ ಫಿದಾ ಆಗಿದ್ದೇನೆ. ನನಗೆ ಸ್ಟಾರ್‌ ಹೀರೋಗಳಿಗಿಂತ ನಿರ್ದೇಶಕ ರಾಜಮೌಳಿ ಎಂದರೆ ಇಷ್ಟ. ನಾಗಾರ್ಜುನ ಅಕ್ಕಿನೇನಿ ಜೊತೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕೆಲಸ ಮಾಡಿದ್ದು ಬಹಳ ಖುಷಿ ಎನಿಸಿದೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾಗಳಲ್ಲೂ ನಟಿಸಲು ಎದುರು ನೋಡುತ್ತಿದ್ದೇನೆ. ರಾಜಮೌಳಿ ಅವರ ಅವರ ನಿರ್ದೇಶನದಲ್ಲಿ ನಟಿಸಲು ನಾನು ಉತ್ಸುಕನಾಗಿದ್ದೇನೆ' ಎಂದು ಮೌನಿ ರಾಯ್‌ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ದ ಮೌನಿ ರಾಯ್‌

ಮೌನಿ ರಾಯ್‌ ಮದುವೆಯಾದ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಅವರ ಫೋಟೋಗಳನ್ನು ನೋಡಿದ ನೆಟಿಜನ್ಸ್‌ 'ಮೌನಿ ರಾಯ್‌ ಅವರ ಮುಖದ ಚಹರೆಯೇ ಬೇರೆಯಾಗಿದೆ.. ನೀವೇನಾದ್ರೂ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ? ಎಂದು ಪ್ರಶ್ನಿಸಿದ್ದರು. ನಟಿಯರು, ಅದರಲ್ಲೂ ಬಾಲಿವುಡ್‌ ನಟಿಯರಿಗೂ ಕಾಸ್ಮೆಟಿಕ್‌ ಸರ್ಜರಿಗೂ ಎಲ್ಲಿಲ್ಲದ ನಂಟು ಹಾಗಾಗಿ ಮದುವೆಯಾದ ನಂತರ ಅಂದ ಹಾಳಾಗಬಾರದು ಎಂದು ಅವರು ಸೌಂದರ್ಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಬೇಕು ಎನ್ನಲಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು