logo
ಕನ್ನಡ ಸುದ್ದಿ  /  ಮನರಂಜನೆ  /  Director Prem About Tamil Actor: ಅವ್ರು ನನ್ನ ವೈಫ್‌ ಕ್ಲೋಸ್‌ ಫ್ರೆಂಡ್‌..ಅವ್ರಿಗೂ ನಿರ್ದೇಶನ ಮಾಡಬೇಕು..ಮನದಾಸೆ ಹೇಳಿಕೊಂಡ ಪ್ರೇಮ್‌

Director Prem about Tamil actor: ಅವ್ರು ನನ್ನ ವೈಫ್‌ ಕ್ಲೋಸ್‌ ಫ್ರೆಂಡ್‌..ಅವ್ರಿಗೂ ನಿರ್ದೇಶನ ಮಾಡಬೇಕು..ಮನದಾಸೆ ಹೇಳಿಕೊಂಡ ಪ್ರೇಮ್‌

HT Kannada Desk HT Kannada

Oct 24, 2022 03:48 PM IST

ತಮಿಳು ನಟ ವಿಜಯ್‌ ದಳಪತಿಗೆ ನಿರ್ದೇಶನ ಮಾಡುವ ಆಸೆ ಹಂಚಿಕೊಂಡ ಪ್ರೇಮ್

    • ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ 'ಕೆಡಿ' ಸಿನಿಮಾ ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೇಮ್‌ ಮತ್ತೊಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತ ತಮಿಳು ನಟರೊಬ್ಬರಿಗೆ ನಿರ್ದೇಶನ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.
ತಮಿಳು ನಟ ವಿಜಯ್‌ ದಳಪತಿಗೆ ನಿರ್ದೇಶನ ಮಾಡುವ ಆಸೆ ಹಂಚಿಕೊಂಡ ಪ್ರೇಮ್
ತಮಿಳು ನಟ ವಿಜಯ್‌ ದಳಪತಿಗೆ ನಿರ್ದೇಶನ ಮಾಡುವ ಆಸೆ ಹಂಚಿಕೊಂಡ ಪ್ರೇಮ್ (‌PC: Rakshitha Prem Fans page)

ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಷನ್‌ನ 'ಕೆಡಿ' ಸಿನಿಮಾ ಟೈಟಲ್‌ ಟೀಸರ್‌ ಇತ್ತೀಚೆಗೆ ತೆರೆ ಕಂಡಿದೆ. ಇಬ್ಬರೂ ಸಿನಿಮಾ ಅನೌನ್ಸ್‌ ಮಾಡಿದಾಗ ಈ ಸಿನಿಮಾ ಟೈಟಲ್‌ ಬಗ್ಗೆ ಸಿನಿಪ್ರಿಯರು ಬಹಳ ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಈ ಚಿತ್ರದ ಮೂಲಕ ನಟ ಪ್ರೇಮ್‌ ಕೊನೆಗೂ ವಿವಿಧ ಭಾಷೆಗಳ ಆರು ಖ್ಯಾತ ನಟರನ್ನು ಕರೆ ತಂದಿದ್ದಾರೆ. ದಿ ವಿಲನ್‌ ರಿಲೀಸ್‌ ಸಮಯದಲ್ಲಿ ಪ್ರೇಮ್‌, ವಿವಿಧ ಭಾಷೆಗಳಿಂದ ಆರು ಹೀರೋಗಳನ್ನು ಕರೆ ತಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಇದು ಟ್ರೋಲ್‌ ಆಗಿತ್ತು. ಆದರೆ ಇದೀಗ ಟ್ರೋಲಿಗರೇ ಆಶ್ಚರ್ಯ ಪಡುವಂತೆ ಪ್ರೇಮ್‌ ಕೊನೆಗೂ ಆರು ಮಂದಿ ಖ್ಯಾತ ನಟರನ್ನು ಕರೆ ತಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೇಮ್‌ ಮತ್ತೊಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತ ತಮಿಳು ನಟರೊಬ್ಬರಿಗೆ ನಿರ್ದೇಶನ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

''ನನ್ನ ಪತ್ನಿಗೆ ವಿಜಯ್‌ ದಳಪತಿ ಕ್ಲೋಸ್‌, ನನಗೆ ವಿಜಯ್‌ ಸೇತುಪತಿ ಬಹಳ ಕ್ಲೋಸ್.‌ ವಿಜಯ್‌ ದಳಪತಿ ಅವರಿಗೂ ನಿರ್ದೇಶನ ಮಾಡುವ ಆಸೆ, ಏನಾಗುವುದೋ ಗೊತ್ತಿಲ್ಲ, ಪ್ಲಾನ್‌ ಮಾಡುತ್ತಿದ್ದೇನೆ, ಮುಂದಿನ ದಿನಗಳಲ್ಲಿ ನೋಡೋಣ'' ಎಂದರು. ಈ ವಿಡಿಯೋ ಕೂಡಾ ಈಗ ವೈರಲ್‌ ಆಗುತ್ತಿದೆ. ನಿಮ್ಮ ಆಸೆ ಈಡೇರಲಿ ಎಂದು ರಕ್ಷಿತಾ ಹಾಗೂ ಪ್ರೇಮ್‌ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನು ಕೆಜಿಎಫ್‌ನಲ್ಲಿ ಅಧೀರನ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್‌ ನಟ ಸಂಜಯ್‌ ದತ್‌, ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದಾರಂತೆ. ಟೈಟಲ್ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಸಂಜಯ್‌ ದತ್‌ ಕೂಡಾ ಆಗಮಿಸಿದ್ದರು. ''ಈಗಾಗಲೇ ಯಶ್, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಜತೆ ಕೆಲಸ ಮಾಡಿದ್ದು ಖುಷಿ ಇದೆ. ಇದೀಗ ಧ್ರುವ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂದಿದೆ. ಮತ್ತೊಂದು ಹೊಸ ಅವತಾರ ಇಲ್ಲಿರಲಿದೆ'' ಎಂದು ಸಂಜಯ್ ದತ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

"ಈ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಸದ್ಯ 'ಕೆಡಿ' ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡಾ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಿದ್ದೇವೆ. ಚಿತ್ರದ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇವೆ ಎಂದು ಪ್ರೇಮ್‌ ಹೇಳಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಬೃಹತ್‌ ಸೆಟ್‌ಗಳನ್ನು ಹಾಕಲಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ