logo
ಕನ್ನಡ ಸುದ್ದಿ  /  Entertainment  /  Sreeleela Got One More Offer In Tollywood

Sreeleela New Telugu Movie: ಮುದ್ದು ಹುಡುಗಿ ಶ್ರೀಲೀಲಾಗೆ ತೆಲುಗಿನಲ್ಲಿ ಮತ್ತೊಂದು ಆಫರ್‌...ನಿರ್ದೇಶಕ, ಹೀರೋ ಬಗ್ಗೆ ಇಲ್ಲಿದೆ ಮಾಹಿತಿ

Rakshitha Sowmya HT Kannada

Oct 04, 2022 09:54 PM IST

ಹೊಸ ತೆಲುಗು ಚಿತ್ರದಲ್ಲಿ ಶ್ರೀಲೀಲಾ

    • ಈ ಚಿತ್ರದಲ್ಲಿ ಇದಕ್ಕೂ ಮುನ್ನ 'ಏಜೆಂಟ್' ಖ್ಯಾತಿಯ ಸಾಕ್ಷಿ ವೈದ್ಯ ಆಯ್ಕೆಯಾಗಿದ್ದರು. ಆದರೆ ಈಗ ಚಿತ್ರದ ನಾಯಕಿ ಬದಲಾಗಿದ್ದು ಆ ಪಾತ್ರಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ರಾಮ್‌ ಪೋತಿನೇನಿಗೆ ಶ್ರೀಲೀಲಾ ಪರ್ಫೆಕ್ಟ್ ಮ್ಯಾಚ್ ಆಗುತ್ತಾರೆ ಎಂಬ ಕಾರಣಕ್ಕೆ ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರಂತೆ.
ಹೊಸ ತೆಲುಗು ಚಿತ್ರದಲ್ಲಿ ಶ್ರೀಲೀಲಾ
ಹೊಸ ತೆಲುಗು ಚಿತ್ರದಲ್ಲಿ ಶ್ರೀಲೀಲಾ

ಚೆಂದದ ನಟಿ ಶ್ರೀಲೀಲಾ ಅವರು 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಮೊದಲ ಸಿನಿಮಾದಲ್ಲೇ ಶ್ರೀಲೀಲಾ ತೆಲುಗು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಶ್ರೀಲೀಲಾ ನಗು, ಸುಂದರ ಮುಖ, ಡಾನ್ಸ್‌ಗೆ ಟಾಲಿವುಡ್‌ ಸಿನಿಪ್ರಿಯರು ಫಿದಾ ಆದರು. ಈಗ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bhagyalakshmi Serial: ಪ್ರಾಣ ಒತ್ತೆ ಇಟ್ಟಾದ್ರೂ ನಿನ್ನ ಸಾಲ ತೀರಿಸ್ತೇವೆ, ಅಮ್ಮನ ಮಾತಿಗೆ ತಾಂಡವ್‌ ಗಪ್‌ ಚುಪ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಅಮೃತಧಾರೆ ಸೀರಿಯಲ್‌: ಮನೆಹಾಳ ಮಾವನ ಪ್ಲ್ಯಾನ್‌ ಪ್ಲಾಪ್‌ ಆಯ್ತು; ನನ್ನ ತಂಗಿ ಕೈ ಹಿಡಿಯಬೇಕೆಂದರೆ... ಪಾರ್ಥನಿಗೆ ಕ್ಲಾಸ್‌ ತೆಗೆದುಕೊಂಡ ಭೂಮಿ

Anjani Putra: ಪುನೀತ್‌ ರಾಜ್‌ಕುಮಾರ್‌- ರಶ್ಮಿಕಾ ಮಂದಣ್ಣ ನಟನೆಯ ಅಂಜನಿಪುತ್ರ ಮತ್ತೆ ರಿಲೀಸ್‌; ಮೇ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

ರಮೇಶ್‌ ಅರವಿಂದ್‌ ನಿರ್ಮಾಣದ ನೀನಾದೆ ನಾ ಸೀರಿಯಲ್‌ಗೆ ಗುಡ್‌ಬೈ ಹೇಳಿದ ಭವ್ಯ ಪೂಜಾರಿ; ಮತ್ತೊಮ್ಮೆ ಭೇಟಿಯಾಗೋಣ ಎಂದ ಶೈಲೂ

ಶ್ರೀಲೀಲಾ ಸದ್ಯಕ್ಕೆ ಮಾಸ್ ಮಹಾರಾಜ ರವಿತೇಜ ಅಭಿನಯದ 'ಧಮಾಕಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ವೈಷ್ಣವ್ ತೇಜ್ ಅವರ ಚಿತ್ರದಲ್ಲೂ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಎ ರಾಜಾ, ಬಾಲಕೃಷ್ಣ ಮತ್ತು ಅನಿಲ್ ರಾವಿಪುಡಿ ಸೇರಿದಂತೆ ಇನ್ನೂ ಅನೇಕ ಪ್ರಾಜೆಕ್ಟ್‌ಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಸಿನಿಮಾಗಳ ನಡುವೆ ಶ್ರೀಲೀಲಾಗೆ ಮತ್ತೊಂದು ಸಿನಿಮಾದಲ್ಲಿ ಆಫರ್‌ ಬಂದಿದೆಯಂತೆ.

ತೆಲುಗಿನ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಸದ್ಯಕ್ಕೆ ಬೋಯಪತಿ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ಅಖಂಡ' ಸಿನಿಮಾದ ಮೂಲಕ ಬೋಯಪತಿ ಭರ್ಜರಿ ಯಶಸ್ಸು ಗಳಿಸಿದ್ದರು. ಬಾಲಯ್ಯ ಅಭಿನಯದ 'ಅಖಂಡ' ತೆಲುಗು ರಾಜ್ಯಗಳಲ್ಲಿ ದೊಡ್ಡ ಯಶಸ್ಸು ಕಂಡಿದೆ. ಇದೀಗ ರಾಮ್‌ ಪೋತಿನೇನಿ ಹಾಗೂ ಬೋಯಪತಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಬಗ್ಗೆ ಮೇಲೆ ಸಿನಿಪ್ರಿಯರಿಗೆ ಭಾರೀ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಇದಕ್ಕೂ ಮುನ್ನ 'ಏಜೆಂಟ್' ಖ್ಯಾತಿಯ ಸಾಕ್ಷಿ ವೈದ್ಯ ಆಯ್ಕೆಯಾಗಿದ್ದರು. ಆದರೆ ಈಗ ಚಿತ್ರದ ನಾಯಕಿ ಬದಲಾಗಿದ್ದು ಆ ಪಾತ್ರಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ರಾಮ್‌ ಪೋತಿನೇನಿಗೆ ಶ್ರೀಲೀಲಾ ಪರ್ಫೆಕ್ಟ್ ಮ್ಯಾಚ್ ಆಗುತ್ತಾರೆ ಎಂಬ ಕಾರಣಕ್ಕೆ ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರಂತೆ. ಶೀಘ್ರದಲ್ಲೇ ಈ ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್‌ ಲಭ್ಯವಾಗಲಿದೆ.

'ಕಿಸ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಹೃದಯ ಕದ್ದ ಕ್ಯೂಟ್ ಹುಡುಗಿ ಶ್ರೀಲೀಲಾ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅತಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿಯರಲ್ಲಿ ಈ ಚೆಲುವೆ ಕೂಡಾ ಒಬ್ಬರು. ಕಿಸ್ ನಂತರ ಶ್ರೀಮುರಳಿ ಜೊತೆ 'ಭರಾಟೆ' ಚಿತ್ರದಲ್ಲಿ ನಟಿಸಿದ ಕ್ಯೂಟ್ ಹುಡುಗಿ ಶ್ರೀಲೀಲಾಗೆ ತೆಲುಗು ಚಿತ್ರರಂಗದಿಂದ ಕೂಡಾ ಆಫರ್ ಬಂತು. ಹಿರಿಯ ನಟ ಶ್ರೀಕಾಂತ್ ಮೇಕ ಪುತ್ರ ರೋಷನ್​​​​​​​​ನೊಂದಿಗೆ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಅವರು ಟಾಲಿವುಡ್​​​​ಗೆ ಎಂಟ್ರಿ ಕೊಟ್ಟರು. ಯೂಟ್ಯೂಬ್​​​​​​ನಲ್ಲಿ ಪೆಳ್ಳಿ ಸಂದಡಿ ಚಿತ್ರದ ಮಧುರಾ ನಗರಿಲೋ… ಹಾಡಿನ ತುಣುಕು ನೋಡಿದ ಯುವಜನತೆ ಶ್ರೀಲೀಲಾ ಅಂದಕ್ಕೆ ಮಾರುಹೋಗಿದ್ದಾರೆ.

ಕನ್ನಡದಲ್ಲಿ ಶ್ರೀಲೀಲಾ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಜೊತೆಗೆ ಜೂನಿಯರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ಜೊತೆ 'ದುಬಾರಿ' ಚಿತ್ರದಲ್ಲಿ ಕೂಡಾ ಶ್ರೀಲೀಲಾ ನಟಿಸಬೇಕಿದೆ. ಆದರೆ ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿರುವ ಶ್ರೀಲೀಲಾ

ಧನ್ವೀರ್‌ ಜೊತೆ 'ಬೈ ಟು ಲವ್'‌ ಚಿತ್ರದಲ್ಲಿ ನಟಿಸಿದ ನಂತರ ಶ್ರೀಲೀಲಾ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದರು. ಬೆಂಗಳೂರಿನ ಮಾತೃಶ್ರೀ ಮನೋವಿಕಾಸ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳನ್ನು ಅವರು ದತ್ತು ಪಡೆದಿದ್ದಾರೆ. 8 ತಿಂಗಳ ಮಗು ಗುರು ಹಾಗೂ ಶೋಭಿತ ಎಂಬ ಹೆಣ್ಣು ಮಗುವಿಗೆ ಈಗ ಶ್ರೀಲೀಲಾ ತಾಯಿ ರೂಪದಲ್ಲಿ ಆಸರೆಯಾಗಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಶ್ರೀಲೀಲಾ, ಓದಿನೆಡೆಗೆ ಗಮನ ಹರಿಸಲು ನಿರ್ಧರಿಸಿದ್ದಾರೆ. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶ್ರೀಲೀಲಾಗೆ ಅಮ್ಮನಂತೆ ಡಾಕ್ಟರ್ ಆಗುವ ಗುರಿಯಂತೆ. ಜನ ಸಾಮಾನ್ಯರನ್ನು ಕಂಡರೆ ಮಾರು ದೂರ ಓಡುವ ಹಲವು ಸೆಲಬ್ರಿಟಿಗಳ ನಡುವೆ ನಟಿ ಶ್ರೀಲೀಲಾ ಅನೇಕರಿಗೆ ಮಾದರಿಯಾಗಿದ್ದಾರೆ.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು