logo
ಕನ್ನಡ ಸುದ್ದಿ  /  ಮನರಂಜನೆ  /  Actor Ajith Simplicity:ಅಭಿಮಾನಿಯ ಬೈಕ್‌ ರಿಪೇರಿ ಮಾಡಿಕೊಟ್ಟದ್ದೂ ಅಲ್ದೆ, ಅವರೊಂದಿಗೆ ರಸ್ತೆಬದಿ ಟೀ ಕುಡಿದ ಅಜಿತ್‌..ಫೋಟೋ ವೈರಲ್‌!

Actor Ajith simplicity:ಅಭಿಮಾನಿಯ ಬೈಕ್‌ ರಿಪೇರಿ ಮಾಡಿಕೊಟ್ಟದ್ದೂ ಅಲ್ದೆ, ಅವರೊಂದಿಗೆ ರಸ್ತೆಬದಿ ಟೀ ಕುಡಿದ ಅಜಿತ್‌..ಫೋಟೋ ವೈರಲ್‌!

HT Kannada Desk HT Kannada

Sep 20, 2022 12:55 PM IST

ಅಭಿಮಾನಿಗಳೊಂದಿಗೆ ನಟ ಅಜಿತ್‌ ಕುಮಾರ್

    • ಅಜಿತ್‌ ಜೊತೆ ಫೋಟೋ ತೆಗೆಸಿಕೊಂಡ ಮಂಜು, ಈ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್‌ ಆಗುತ್ತಿದ್ದು ಅಜಿತ್‌ ಅವರ ಸರಳತೆಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಭಿಮಾನಿಗಳೊಂದಿಗೆ ನಟ ಅಜಿತ್‌ ಕುಮಾರ್
ಅಭಿಮಾನಿಗಳೊಂದಿಗೆ ನಟ ಅಜಿತ್‌ ಕುಮಾರ್ (PC: @ajithFC)

ತಮಿಳು ನಟ ವಿಜಯ್‌ ಉತ್ತಮ ನಟ ಮಾತ್ರವಲ್ಲ, ಅವರು ಬೈಕ್‌ ರೇಸರ್‌, ಶೂಟರ್‌ ಎಂಬುದು ಈಗಾಗಲೇ ಸಾಬೀತಾಗಿದೆ. ಅಜಿತ್‌, ಚಿತ್ರೀಕರಣದಿಂದ ಸ್ವಲ್ಪ ಬಿಡುವು ದೊರೆತರೆ ಸಾಕು, ಬೈಕ್‌ ಏರಿ ಸೋಲೋ ಟ್ರಿಪ್‌ ಹೊರಟುಬಿಡುತ್ತಾರೆ. ಬೈಕ್‌ನಲ್ಲೇ ಆಲ್‌ ಇಂಡಿಯಾ ಟೂರ ಮಾಡುವ ಅಜಿತ್‌ ಸರಳತೆ ಎಲ್ಲರಿಗೂ ಬಹಳ ಇಷ್ಟ.

ಟ್ರೆಂಡಿಂಗ್​ ಸುದ್ದಿ

Deepfake: ತಲೆ ಆಲಿಯಾ ಭಟ್‌ರದ್ದು, ದೇಹ ಯಾರದ್ದು? ಆಲಿಯಾ ಭಟ್‌ರ ಮತ್ತೊಂದು ಡೀಫ್‌ಫೇಕ್‌ ವಿಡಿಯೋ ವೈರಲ್‌, ಅಸಲಿ- ನಕಲಿ ವಿಡಿಯೋ ನೋಡಿ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್

ಸಿನಿಮಾ ಸೆಲೆಬ್ರಿಟಿಗಳು ಕಾರಿನಿಂದ ಕೆಳಗೆ ಇಳಿಯುವುದೇ ಕಷ್ಟ. ಅಂತದ್ದರಲ್ಲಿ ಕಳೆದ ಕೆಲವು ವರ್ಷಗಳಿಂದ ಅಜಿತ್‌, ತಮ್ಮ ಫೇವರೆಟ್‌ ಬೈಕ್‌ನಲ್ಲೇ ಆಲ್‌ ಈಂಡಿಯಾ ಟೂರ್‌ ಮಾಡುತ್ತಿದ್ದಾರೆ. ಜೊತೆಗೆ ಯೂರೋಪ್‌ಗೆ ಕೂಡಾ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಅವರು ಲೇಹ್‌, ಲಡಾಕ್‌ಗೆ ಕೂಡಾ ಭೇಟಿ ನೀಡಿದ್ದಾರೆ. ಅಜಿತ್‌ ಅವರ ಸ್ಫೂರ್ತಿಯಿಂದ ಅವರ ಅಭಿಮಾನಿಗಳು ಹಾಗೂ ಕೆಲವು ಸೆಲಬ್ರಿಟಿಗಳು ಕೂಡಾ ಬೈಕ್‌ ಟ್ರಿಪ್‌ ಆರಂಭಿಸಿರುವುದು ವಿಶೇಷವಾಗಿದೆ. ಹೀಗೆ ಟ್ರಾವೆಲ್‌ ಹೋಗುವಾಗ ಅವರಿಗೆ ಅನೇಕ ಅಭಿಮಾನಿಗಳು ಎದುರಾಗುತ್ತಾರೆ. ಅದರಲ್ಲಿ ಮೈಸೂರಿನ ಅಭಿಮಾನಿಯೊಬ್ಬರು ಲೇಹ್‌ ಲಡಾಕ್‌ನಲ್ಲಿ ಅಜಿತ್‌ ಅವರನ್ನು ಭೇಟಿ ಮಾಡಿದ ಕ್ಷಣವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಂಜು ಕಶ್ಯಪ ಕೂಡಾ ತಮ್ಮ ಬೈಕ್‌ನಲ್ಲಿ ಇತ್ತೀಚೆಗೆ ಸ್ನೇಹಿತರೊಂದಿಗೆ ಲಡಾಕ್‌ ತೆರಳಿದ್ದಾರೆ. ಆದರೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಅವರ ಬೈಕ್‌ ಕೆಟ್ಟಿದೆ. ಅದೇ ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಜು ಕಶ್ಯಪ್‌ ಕೈ ಅಡ್ಡ ಇಟ್ಟು ಸಹಾಯ ಕೇಳಿದ್ದಾರೆ. ಆತ ಹೆಲ್ಮೆಟ್‌ ತೆಗೆದಾಗಲೇ ಅವರು ತಮಿಳಿನ ಖ್ಯಾತ ನಟ ಅಜಿತ್‌ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕೂಡಲೇ ಬೈಕ್‌ ನಿಲ್ಲಿಸಿದ ನಟ ಅಜಿತ್‌ ಮಂಜು ಅವರ ಬಳಿ ಬಂದು ಬೈಕ್‌ ರಿಪೇರಿ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಯ ಮನವಿ ಮೇರೆಗೆ ಅವರೊಂದಿಗೆ ಕುಳಿತು ಮಾತನಾಡುತ್ತಾ ಟೀ ಕುಡಿದಿದ್ದಾರೆ.

ಅಜಿತ್‌ ಜೊತೆ ಫೋಟೋ ತೆಗೆಸಿಕೊಂಡ ಮಂಜು, ಈ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್‌ ಆಗುತ್ತಿದ್ದು ಅಜಿತ್‌ ಅವರ ಸರಳತೆಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಚಯವೇ ಇಲ್ಲದ ವ್ಯಕ್ತಿಯ ಬೈಕ್‌ಗೆ ಮೆಕಾನಿಕ್‌ ಆಗಿದ್ದಲ್ಲದೆ, ಅವರೊಂದಿಗೆ ಟೀ ಕುಡಿದು ಸ್ವಲ್ಪ ಸಮಯ ಕಳೆದ ಅವರನ್ನು ನೋಡಿ ಇತರ ಸೆಲೆಬ್ರಿಟಿಗಳು ಕಲಿಯುವುದು ಸಾಕಷ್ಟಿದೆ ಎಂದು ಎಲ್ಲರೂ ಕಮೆಂಟ್‌ ಮಾಡುತ್ತಿದ್ದಾರೆ.

ಇತ್ತೀಚೆಗೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಜಿತ್ ಕುಮಾರ್ ಭಾಗವಹಿಸಿದ್ದರು. ಈ ಕೂಟದಲ್ಲಿ ಅವರು ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಫೆಬ್ರವರಿಯಲ್ಲಿ ಅಜಿತ್‌ ಅಭಿನಯದ ವಲಿಮೈ ತೆರೆ ಕಂಡಿತ್ತು. ಈಗ ಅವರು 62ನೇ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದ್ದು ವಿಘ್ನೇಶ್‌ ಶಿವನ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು