logo
ಕನ್ನಡ ಸುದ್ದಿ  /  ಮನರಂಜನೆ  /  Meena: ‘ನನ್ನ ಸುಖಕ್ಕಿಂತ, ಆ ಆದ್ಯತೆಯೇ ನನಗೆ ಮುಖ್ಯ’; ಎರಡನೇ ಮದುವೆ ಬಗ್ಗೆ ಕೊನೆಗೂ ಮಾತನಾಡಿದ ಮೀನಾ

Meena: ‘ನನ್ನ ಸುಖಕ್ಕಿಂತ, ಆ ಆದ್ಯತೆಯೇ ನನಗೆ ಮುಖ್ಯ’; ಎರಡನೇ ಮದುವೆ ಬಗ್ಗೆ ಕೊನೆಗೂ ಮಾತನಾಡಿದ ಮೀನಾ

Dec 29, 2023 06:27 PM IST

Meena: ‘ನನ್ನ ಸುಖಕ್ಕಿಂತ, ಆ ಆದ್ಯತೆಯೇ ನನಗೆ ಮುಖ್ಯ’; ಎರಡನೇ ಮದುವೆ ಬಗ್ಗೆ ಕೊನೆಗೂ ಮಾತನಾಡಿದ ಮೀನಾ!

    • Meena about her Second Marriage Rumours: ಬಹುಭಾಷಾ ನಟಿ ಮೀನಾ ಕೊನೆಗೂ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇಸರದಲ್ಲಿಯೇ ಉತ್ತರಿಸಿದ್ದಾರೆ.
Meena: ‘ನನ್ನ ಸುಖಕ್ಕಿಂತ, ಆ ಆದ್ಯತೆಯೇ ನನಗೆ ಮುಖ್ಯ’; ಎರಡನೇ ಮದುವೆ ಬಗ್ಗೆ ಕೊನೆಗೂ ಮಾತನಾಡಿದ ಮೀನಾ!
Meena: ‘ನನ್ನ ಸುಖಕ್ಕಿಂತ, ಆ ಆದ್ಯತೆಯೇ ನನಗೆ ಮುಖ್ಯ’; ಎರಡನೇ ಮದುವೆ ಬಗ್ಗೆ ಕೊನೆಗೂ ಮಾತನಾಡಿದ ಮೀನಾ!

Meena about her Second Marriage: ಬಾಲ ನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಬಲಗಾಲಿಟ್ಟು ಬಂದ ಮುದ್ದು ಮುಖದ ಮೀನಾ, ಅದಾದ ಮೇಲೆ ನಾಯಕಿಯಾಗಿ ಸೌತ್‌ ಸಿನಿ ದುನಿಯಾವನ್ನೇ ಆಳಿದರು. ಸ್ಟಾರ್‌ ನಟರಿಗೆ ನಾಯಕಿಯಾಗಿ ನಟಿಸಿ ಎಲ್ಲ ಭಾಷೆಗಳಲ್ಲೂ ಸೈ ಎನಿಸಿಕೊಂಡರು. ಇಂದಿಗೂ ಪೋಷಕ ಪಾತ್ರಗಳಲ್ಲಿ ಮೀನಾ ನಟನೆ ಮುಂದುವರಿಸಿದ್ದಾರೆ. ಈ ನಡುವೆ ಇದೇ ಮೀನಾಗೆ ಕೆಲ ಬೇಡದ ಪ್ರಶ್ನೆಗಳೂ ಎದುರಾಗಿವೆ. ಅದೇ ಎರಡನೇ ಮದುವೆ ವಿಚಾರ!

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಕಳೆದ ವರ್ಷದ ಜೂನ್‌ನಲ್ಲಿ ಮೀನಾ ಪತಿ ವಿದ್ಯಾ ಸಾಗರ್‌ ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದರು. ವಿದ್ಯಾಸಾಗರ್‌ ನಿಧನಕ್ಕೆ ಸೌತ್‌ನ ಸಿನಿ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಅದಾದ ಕೆಲವೇ ತಿಂಗಳ ಬಳಿಕ ಮೀನಾ ಎರಡನೇ ಮದುವೆ ಆಗಲಿದ್ದಾರೆ, ತಮಿಳು ನಟ ಧನುಷ್ ಜತೆಗೆ ಕೈ ಜೋಡಿಸಲಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿದ್ದವು. ಆದರೆ, ಆ ಬಗ್ಗೆ ಓಪನ್‌ ಆಗಿ ಮೀನಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.

ಪತಿ ವಿದ್ಯಾಸಾಗರ ಕಳೆದುಕೊಂಡು ನೋವಿನಲ್ಲಿಯೇ ಮಗಳ ಜತೆಗೆ ಸಿಂಗಲ್‌ ಪೇರೆಂಟ್‌ ಆಗಿ ಜೀವನ ಸಾಗಿಸುತ್ತಿರುವ 47ರ ಹರೆಯದ ಮೀನಾ, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾತುಗಳಿಗೆ ಬೇಸರಿಸಿಕೊಂಡಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದಾರೆ. ಧನುಷ್‌ ಮಾತ್ರವಲ್ಲದೆ, ಖ್ಯಾತ ಉದ್ಯಮಿ, ಹಿರಿಯ ಸ್ಟಾರ್‌ ನಟನೊಬ್ಬರ ಜತೆಗೆ ಮೀನಾ ಮದುವೆ ಆಗಲಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಇದೀಗ ಅದೆಲ್ಲದರ ಬಗ್ಗೆ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಹೈಪ್‌ ಕ್ರಿಯೆಟ್‌ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಈ ರೀತಿ ಸುದ್ದಿಗಳನ್ನು ಬರೆದರೆ, ನನ್ನ ಕುಟುಂಬಕ್ಕೆ ಏನಾಗುತ್ತದೆ ಎಂದು ಯಾರಾದರೂ ಊಹಿಸಿದ್ದಾರಾ? ನಾನು ಧನುಷ್ ಮದುವೆ ಆಗುತ್ತೇವೆ ಎಂದೆಲ್ಲ ಸುದ್ದಿ ಬಿತ್ತರಿಸಿದರು. ಮತ್ತೆ ಪ್ರೀತಿಯಲ್ಲಿ ಬಿದ್ದರು ಎಂದೂ ಪುಕಾರು ಹಬ್ಬಿಸಿದ್ದರು. ನಾವು ಸಾರ್ವಜನಿಕ ವಲಯದಲ್ಲಿ ಇರುತ್ತೇವೆ ಎಂದ ಮಾತ್ರಕ್ಕೆ ನಮ್ಮನ್ನು ಕೇಳದೇ ಅನಿಸಿದ್ದನ್ನು ಪೋಸ್ಟ್‌ ಮಾಡುವುದು ಎಷ್ಟು ಸರಿ" ಎಂದಿದ್ದಾರೆ.

ಮುಂದುವರಿದು ಒಬ್ಬ ಸೂಪರ್‌ಸ್ಟಾರ್‌ ಆಗಿ, ಚೆಂದದ ನಟಿಯಾಗಿ, ಸಿನಿಮಾ ಅನುಭವಸ್ಥೆಯಾಗಿ, ಒಂಟಿಯಾಗಿ ಜೀವನವನ್ನು ಸಾಗಿಸಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮೀನಾ, "ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲ ಎಂದು ಹಲವು ಬಾರಿ ಪುನರುಚ್ಚರಿಸಿದ್ದಾರೆ. "ನಾಳೆ ಏನಾಗುತ್ತದೋ ಎಂಬುದು ನನಗೆ ಗೊತ್ತಿಲ್ಲ, ಮುಂದಿನ ಎರಡು ವರ್ಷದಲ್ಲಿ ಏನೆಲ್ಲ ಆಗಬಹುದು ಎಂಬುದೂ ನನಗೆ ತಿಳಿದಿಲ್ಲ. ಹಾಗಾಗಿ ಸದ್ಯಕ್ಕೆ ಮಗಳೇ ನನಗೆ ಎಲ್ಲ" ಎಂದಿದ್ದಾರೆ.

"ಮತ್ತೊಂದು ಮದುವೆ ಎಂಬುದು ಇದು ಸಣ್ಣ ನಿರ್ಧಾರವಲ್ಲ. ನನ್ನ ಜತೆಗೆ ಮಗಳಿದ್ದಾಳೆ. ಅವಳ ಬಗ್ಗೆಯೂ ನಾನು ವಿಚಾರಿಸಬೇಕು. ಏಕೆಂದರೆ ನನ್ನ ಮೊದಲ ಆದ್ಯತೆಯೇ ನನ್ನ ಮಗಳು. ಹಾಗಾಗಿ ನನ್ನ ಕಂಫರ್ಟ್‌ಗಾಗಿ, ನನ್ನ‌ ಸುಖಕ್ಕಾಗಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮುಂದೆ ಹೇಗೆ ಬರುತ್ತೋ ಹಾಗೇ ಹೋಗಬೇಕು. ಕಾಲ ನಮ್ಮ ಕೈಯಲ್ಲಿಲ್ಲ ಎನ್ನುವ ಮೂಲಕ" ಹರಿದಾಡುತ್ತಿದ್ದ ವದಂತಿಗಳಿಗೆ ಬ್ರೇಕ್‌ ಹಾಕಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ