ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆಗೆ ನಾಳೆ ಮತದಾನ; ಬೆಂಗಳೂರು, ಮೈಸೂರು, ಮಂಗಳೂರಲ್ಲಿ ಹಿರಿಯ ನಾಗರಿಕರು, ಅಂಗವಿಕಲ ಮತದಾರರಿಗೆ ರಾಪಿಡೋ ಉಚಿತ ಸವಾರಿ

ಲೋಕಸಭಾ ಚುನಾವಣೆಗೆ ನಾಳೆ ಮತದಾನ; ಬೆಂಗಳೂರು, ಮೈಸೂರು, ಮಂಗಳೂರಲ್ಲಿ ಹಿರಿಯ ನಾಗರಿಕರು, ಅಂಗವಿಕಲ ಮತದಾರರಿಗೆ ರಾಪಿಡೋ ಉಚಿತ ಸವಾರಿ

Umesh Kumar S HT Kannada

Apr 25, 2024 01:22 PM IST

ಬೆಂಗಳೂರಿನ ಹಿರಿಯನಾಗರಿಕರು, ಅಂಗವಿಕಲರು ಏಪ್ರಿಲ್ 26 ರಂದು ಮತದಾನ ಕೇಂದ್ರಗಳಿಗೆ ಮತ್ತು ವಾಪಸ್ ಮನೆಗೆ ತೆರಳಲು ರಾಪಿಡೋ ಉಚಿತ ಸವಾರಿ ಬಳಸಬಹುದು. (ಸಾಂಕೇತಿಕ ಚಿತ್ರ)

  • ಕರ್ನಾಟಕದಲ್ಲಿ ನಾಳೆ (ಏಪ್ರಿಲ್ 26) ಮೊದಲ ಹಂತದ ಮತದಾನ ನಡೆಯಲಿದೆ. ಎಲ್ಲರೂ ಮತದಾನ ಮಾಡಬೇಕು ಎಂಬ ಜಾಗೃತಿ ಅಭಿಯಾನಕ್ಕೆ ಪೂರಕವಾಗಿ ರಾಪಿಡೋ, ಬೆಂಗಳೂರು, ಮೈಸೂರು ಮತ್ತು ಮಂಗಳೂರುಗಳಲ್ಲಿ ಹಿರಿಯ ನಾಗರಿಕರು, ಅಂಗವಿಕಲ ಮತದಾರರಿಗೆ ರಾಪಿಡೋ ಉಚಿತ ಸವಾರಿ ಘೋಷಿಸಿದೆ. ಮತಗಟ್ಟೆ ಮತ್ತು ಮತಗಟ್ಟೆಯಿಂದ ಮನೆಗೆ ಈ ಉಚಿತ ಸವಾರಿ ಸಿಗಲಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರಿನ ಹಿರಿಯನಾಗರಿಕರು, ಅಂಗವಿಕಲರು ಏಪ್ರಿಲ್ 26 ರಂದು ಮತದಾನ ಕೇಂದ್ರಗಳಿಗೆ ಮತ್ತು ವಾಪಸ್ ಮನೆಗೆ ತೆರಳಲು ರಾಪಿಡೋ ಉಚಿತ ಸವಾರಿ ಬಳಸಬಹುದು. (ಸಾಂಕೇತಿಕ ಚಿತ್ರ)
ಬೆಂಗಳೂರಿನ ಹಿರಿಯನಾಗರಿಕರು, ಅಂಗವಿಕಲರು ಏಪ್ರಿಲ್ 26 ರಂದು ಮತದಾನ ಕೇಂದ್ರಗಳಿಗೆ ಮತ್ತು ವಾಪಸ್ ಮನೆಗೆ ತೆರಳಲು ರಾಪಿಡೋ ಉಚಿತ ಸವಾರಿ ಬಳಸಬಹುದು. (ಸಾಂಕೇತಿಕ ಚಿತ್ರ) (Representational Photo/HT)

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ (ಏಪ್ರಿಲ್ 26) ನಡೆಯಲಿದ್ದು, ಪ್ರಯಾಣಿಕ ಸೇವೆ ಒದಗಿಸುವ ರಾಪಿಡೋ ತನ್ನ “ಸವಾರಿ ಜಿಮ್ಮೇದಾರಿ ಕೀ” (ಹೊಣೆಗಾರಿಕೆಯ ಸವಾರಿ) ಅಭಿಯಾನವನ್ನು ಕರ್ನಾಟಕದಲ್ಲೂ ನಡೆಸಲಿದೆ. ಕರ್ನಾಟಕದಲ್ಲಿ ನಾಳೆ (ಏಪ್ರಿಲ್ 26) ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಅಂಗವೈಕಲ್ಯ ಹೊಂದಿರುವಂಥವರು ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಉಚಿತವಾಗಿ ಕರೆದೊಯ್ದು ವಾಪಸ್ ಮನೆಗೆ ಬಿಡುವುದಾಗಿ ರಾಪಿಡೋ ಬುಧವಾರ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

Viral Video: ಕುದುರೆ ಬದಲು ಏಥರ್ ರಿಝ್ತಾ ಮೇಲೇರಿ ಬಂದ ಬೆಂಗಳೂರು ಮದುಮಗನ ವರಯಾತ್ರೆ ಸಂಭ್ರಮ, ಫೋಟೋ ವಿಡಿಯೋ ವೈರಲ್‌

ಕರ್ನಾಟಕ ಹವಾಮಾನ ಮೇ 15; ಬಾಗಲಕೋಟೆ, ಬೀದರ್ ಸೇರಿ 6 ಜಿಲ್ಲೆ ಬಿಟ್ಟು ಉಳಿದ ಜಿಲ್ಲೆಗಳ ಕೆಲವೆಡೆ ಮಳೆ ನಿರೀಕ್ಷೆ, ಉಳಿದಂತೆ ಒಣಹವೆ

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ

ಇದಕ್ಕಾಗಿ ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರು ತಮ್ಮ ಮೊಬೈಲ್‌ನಲ್ಲಿ ರಾಪಿಡೋ ಆಪ್ ಡೌನ್‌ಲೋಡ್ ಮಾಡಿಕೊಂಡು “VOTE NOW” ಕೋಡ್ ಅನ್ನು ಸವಾರಿಗಾಗಿ ಬಳಸಬೇಕು ಎಂದು ರಾಪಿಡೋ ಹೇಳಿದೆ.

ವೋಟ್ ನೌ ಕೋಡ್ ಬಳಸಿ ರಾಪಿಡೋ ಉಚಿತ ಸವಾರಿ ಆನಂದಿಸಿ, ಮತದಾನ ಮಾಡೋದನ್ನು ಮರೆಯಬೇಡಿ

ಭಾರತದ ಚುನಾವಣಾ ಆಯೋಗ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆಗೆ ಸಹಭಾಗಿತ್ವದಲ್ಲಿ ರಾಪಿಡೋ, ಈ ಸಾರ್ವತ್ರಿಕ ಚುನಾವಣೆ (ಲೋಕಸಭಾ ಚುನಾವಣೆ 2024)ಯ ಮತದಾನದಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಮುಂದಾಗಿದೆ. ಮತದಾನ ಮಾಡಲು ಮತ್ತು ಮತದಾನ ಮಾಡಿದ ಬಳಿಕ ಮನೆಗೆ ವಾಪಸ್ ಹೋಗಲು ಬೆಂಗಳೂರಿನಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸವಾರಿಗಳನ್ನು ಒದಗಿಸುವ ಮೂಲಕ ನಾಗರಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮುಂದಾಗಿದೆ. ಈ ಐತಿಹಾಸಿಕ ಪ್ರಯತ್ನದ ಭಾಗವಾಗಿ, ರಾಪಿಡೊ 2024 ರ ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ಮತದಾರರಿಗೆ ಉಚಿತ ಸವಾರಿಗಳನ್ನು ಒದಗಿಸುವ ತೀರ್ಮಾನ ತೆಗೆದುಕೊಂಡಿದೆ ಎಂದು ರಾಪಿಡೋ ಹೇಳಿದೆ.

ಬೆಂಗಳೂರು, ಮೈಸೂರು, ಮಂಗಳೂರಲ್ಲಿ ರಾಪಿಡೋ ಉಚಿತ ಸವಾರಿ

ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಪ್ರತಿಯೊಬ್ಬ ಮತದಾರರು ಭಾರತೀಯ ಸಾರ್ವತ್ರಿಕ ಚುನಾವಣೆ 2024 ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ನಾಗರಿಕ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಬಹುದೆಂದು ಖಚಿತಪಡಿಸಿಕೊಳ್ಳಲು ನಾವು ಈ ಉಪಕ್ರಮವನ್ನು ಕೈಗೊಳ್ಳುತ್ತಿದ್ದೇವೆ ಎಂದು ರಾಪಿಡೋ ಕಂಪನಿಯ ಸಹ ಸಂಸ್ಥಾಪಕ ಪವನ್ ಗುಂಟುಪಳ್ಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮತದಾರರನ್ನು ಖಚಿತಪಡಿಸಿಕೊಳ್ಳಲು ನಾವು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನಮಗೆ ನಿಯೋಜಿಸಿದ್ದೇವೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಮತದಾನದ ಹಕ್ಕನ್ನು ಚಲಾಯಿಸುವ ಸಮಾನಾ ಅವಕಾಶವನ್ನು ಪಡೆದಿದ್ದಾರೆ. ಇದನ್ನು ನಾವು ನಿರ್ದಿಷ್ಟವಾಗಿ ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಉಚಿತ ಆಟೋ ಮತ್ತು ಕ್ಯಾಬ್ ಸವಾರಿಗಳನ್ನು ಅವರಿಗೆ ಒದಗಿಸುವ ಮೂಲಕ, ನಾವು ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿಗೆ ನಮ್ಮ ಬದ್ಧತೆಯನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ಪವನ್ ಗುಂಟುಪಳ್ಳಿ ವಿವರಿಸಿದ್ದಾರೆ.

“ಈ ಉಚಿತ ಸವಾರಿಗಳನ್ನು ಒದಗಿಸುವ ಮೂಲಕ, ನಾವು ನಮ್ಮ ಕ್ರಿಯೆಯ ಮೂಲಕ ಪ್ರಜಾಪ್ರಭುತ್ವದ ಕೆಲಸವನ್ನು ಸುಗಮಗೊಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ರಾಪಿಡೋ ಕ್ಯಾಪ್ಟನ್‌ಗಳು ಚಾಲಕರಿಗಿಂತ ಹೆಚ್ಚು ಹೊಣೆಗಾರಿಕೆ ಇರುವಂಥವರು. ಅವರು ನಾಗರಿಕ ಪ್ರಕ್ರಿಯೆಯ ರಾಯಭಾರಿಗಳಾಗಿದ್ದಾರೆ. ಹೆಚ್ಚಿನ ಮತದಾರರ ಮತದಾನದ ಕೆಲಸವನ್ನು ಹಗುರಗೊಳಿಸುತ್ತಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ" ಎಂದು ಪವನ್‌ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ