Bengaluru police harassment case: ಬೆಂಗಳೂರು ಪೊಲೀಸರಿಂದ ಕಿರುಕುಳ, ಲಂಚದ ಬೇಡಿಕೆ - ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್
Nov 17, 2022 05:14 PM IST
ರೆಡ್ಡಿಟ್ನಲ್ಲಿರುವ ಮೂಲ ಪೋಸ್ಟ್
Bengaluru police harassment case: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಕಿರುಕುಳ ಮತ್ತು ಲಂಚದ ಬೇಡಿಕೆ ವಿಚಾರದ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ರೆಡ್ಡಿಟ್ನಲ್ಲಿರುವ ವಿವರವಾದ ಪೋಸ್ಟ್ ಇದಾಗಿದ್ದು, ಗಮನಸೆಳೆದಿದೆ.
ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಕಿರುಕುಳ, ಲಂಚದ ಬೇಡಿಕೆ ಕುರಿತಾದ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಈಗ ಭಾರಿ ಸದ್ದುಮಾಡಿದೆ. ಇದು ರೆಡ್ಡಿಟ್ನಲ್ಲಿ ಆಗಿರುವ ಪೋಸ್ಟ್ ಆದರೂ, ಟ್ವಿಟರ್ನಲ್ಲಿ ಇದು ಮಂಗಳವಾರ ಶೇರ್ ಆಗಿದೆ.
ʻPaid 1L to Bangalore police to let us goʼ ಎಂಬ ಶೀರ್ಷಿಕೆಯ ಪೋಸ್ಟ್ ರೆಡ್ಡಿಟ್ನಲ್ಲಿ ಪೋಸ್ಟ್ ಆಗಿತ್ತು. ಘಟನೆಯ ವಿವರವನ್ನು ಒಳಗೊಂಡ ಪೋಸ್ಟ್ ಇದಾಗಿದ್ದು, ಅನಾಮಿಕನೊಬ್ಬನ ವಿವರಣೆಯಂತೆ ಇದೆ. ಇಂದಿರಾನಗರದಲ್ಲಿ ಇ-ಸಿಗಾರ್ ಬಳಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕು, ಅವರಿಂದ ಬಿಡಿಸಿಕೊಂಡು ಹೊರಬಂದದ್ದು ಹೇಗೆ ಎಂಬ ವಿವರಣೆ ಇದೆ. ಇ-ಸಿಗಾರ್ ದೇಶದಲ್ಲಿ ನಿಷೇಧಿಸಲ್ಪಟ್ಟಿದೆ.
ಬೆಂಗಳೂರು ಪೊಲೀಸರು 1,00,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು. ಕೊಡದೇ ಇದ್ದರೆ, ಒಂದು ವರ್ಷ ಜೈಲಿನಲ್ಲಿ ಕೂರಿಸುವುದಾಗಿ ಬೆದರಿಕೆ ಹಾಕಿದರು. ಇ-ಸಿಗರೇಟ್ ಬಳಸಿದ ವ್ಯಕ್ತಿ ಮತ್ತು ಆತನ ಸ್ನೇಹಿತರು ನಗದು ರೂಪದಲ್ಲಿ ಒಂದು ಲಕ್ಷ ರೂಪಾಯಿ ಪಾವತಿಸಿ ಹೊರಬಂದಿರುವುದಾಗಿ ವಿವರಣೆ ನೀಡಲಾಗಿದೆ.
ಆ ಪೋಸ್ಟ್ ಇಲ್ಲಿದೆ ನೋಡಿ.
“ನನ್ನ ಹಣವನ್ನು ಮರಳಿ ಪಡೆಯಲು ನಾನು ಇಲ್ಲಿ ಇದನ್ನು ಪ್ರಸ್ತಾಪಿಸುತ್ತಿಲ್ಲ. ಘಟನೆಯ ನಂತರ ನಾನು ಈಗಾಗಲೇ 3-4 ಕ್ರಿಮಿನಲ್ ವಕೀಲರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ ಮತ್ತು ಚರ್ಚಿಸಿದ್ದೇನೆ. ಹಣವನ್ನು ಹಿಂತಿರುಗಿಸುವ ಸಾಧ್ಯತೆಯಿಲ್ಲ ಎಂಬುದು ನನಗೆ ತಿಳಿದಿದೆ. ಆದ್ದರಿಂದ ನನ್ನ ಅನುಭವವನ್ನು ಇಲ್ಲಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ” ಎಂದೂ ಪೋಸ್ಟ್ನಲ್ಲಿದೆ.
"ಇದು ಭಯಾನಕ ಪರಿಸ್ಥಿತಿ. ಸ್ಥಳೀಯ ಭಾಷೆ ತಿಳಿಯದಿರುವುದು ಅದನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ ಹೌದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಕ್ರಿಮಿನಲ್ ವಕೀಲರನ್ನು ಸ್ಪೀಡ್ ಡಯಲ್ನಲ್ಲಿ ಇರಿಸಿಕೊಳ್ಳಬೇಕು lol. ನಮಗೆ ಫೋನ್ ಕರೆ ಮಾಡಲು ಸಹ ಅನುಮತಿಸದ ಕಾರಣ ಮೂಲಭೂತ ಹಕ್ಕುಗಳು ಕಿಟಕಿಯಿಂದ ಹೊರಗಿದ್ದವು. ಕುಳಿತುಕೊಳ್ಳಲು ಸಹ ಅನುಮತಿಸುವುದಿಲ್ಲ, ”ಎಂದು ಅವರು ಕಾಮೆಂಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಟ್ವಿಟರ್ನಲ್ಲಿ ಮತ್ತೆ ಶೇರ್ ಆಗಿರುವ ಪೋಸ್ಟಿಗೆ ಇನ್ನಷ್ಟು ಪ್ರತಿಕ್ರಿಯೆ ಲಭಿಸಿದೆ. ಕೆಲವರು ತಮ್ಮ ಅನುಭವಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಅಂತಹ ಒಂದು ಅನುಭವ ಇಲ್ಲಿದೆ ನೋಡಿ.
“IO ಲಂಚಕ್ಕೆ ಬೇಡಿಕೆ ಇಟ್ಟ ಕಾರಣ ಅವರ ವೈಯಕ್ತಿಕ ಇಮೇಲ್ ಐಡಿ ಮೂಲಕ ನಮ್ಮನ್ನು ತಲುಪಲು ಪ್ರಯತ್ನಿಸಿದ್ದರಿಂದ, ನಾವು ಒದಗಿಸಿದ ಪುರಾವೆಗಳನ್ನು ನಾವು ಉಳಿಸಿದ್ದೇವೆ. ಪಿಐ ಆಗಿ ಬಡ್ತಿ ಪಡೆದ ಐಒಗೆ ಹಿಂತಿರುಗಿ ಬಂದು ಅವರನ್ನು ಹುಡುಕುವಂತೆ ನೋಟಿಸ್ ನೀಡಲಾಯಿತು. ಎಲ್ಲದಕ್ಕೂ WA ಸಂಭಾಷಣೆಗಳು ದಾಖಲೆಯಾಗಿ ಜತೆಗಿವೆ” ಎಂದು ಎರಡನೇ ಟ್ವೀಟ್ ಹೇಳಿದೆ.
ಹಿಂದೂಸ್ತಾನ್ ಟೈಮ್ಸ್ ಈ ವಿಚಾರವಾಗಿ ಉನ್ನತ ಪೊಲೀಸ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಪ್ರವೀಣ್ ಸೂದ್ ಮತ್ತು ಅಲೋಕ್ ಕುಮಾರ್ ಅವರನ್ನು ಪದೇಪದೆ ಸಂಪರ್ಕಿಸಿದರೂ ಪ್ರತಿಕ್ರಿಯಿಸಲಿಲ್ಲ.