logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nithyanada Kailasa: ಕೈಲಾಸ ಎಲ್ಲಿದೆ? ನಿತ್ಯಾನಂದನ ಕಾಲ್ಪನಿಕ ರಾಷ್ಟ್ರದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಪತ್ರಿಕಾ ಕಾರ್ಯದರ್ಶಿ

Nithyanada Kailasa: ಕೈಲಾಸ ಎಲ್ಲಿದೆ? ನಿತ್ಯಾನಂದನ ಕಾಲ್ಪನಿಕ ರಾಷ್ಟ್ರದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಪತ್ರಿಕಾ ಕಾರ್ಯದರ್ಶಿ

HT Kannada Desk HT Kannada

Mar 19, 2023 02:40 PM IST

Nithyanada Kailasa: ಕೈಲಾಸ ಎಲ್ಲಿದೆ? ನಿತ್ಯಾನಂದನ ಕಾಲ್ಪನಿಕ ರಾಷ್ಟ್ರದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಕೈಲಾಸದ ಪತ್ರಿಕಾ ಕಾರ್ಯದರ್ಶಿ(PTI Photo) (PTI03_02_2023_000322B)

    • ಕೈಲಾಸವನ್ನು ಗಡಿಯಿಲ್ಲದ ಸೇವಾ ಆಧರಿತ ರಾಷ್ಟ್ರ ಎಂದು ಕರೆದಿದ್ದು, ಕೈಲಾಸದ ಅನೇಕ ಘಟಕಗಳು, ಎನ್‌ಜಿಒಗಳು, ದೇವಾಲಯಗಳು ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
Nithyanada Kailasa: ಕೈಲಾಸ ಎಲ್ಲಿದೆ? ನಿತ್ಯಾನಂದನ ಕಾಲ್ಪನಿಕ ರಾಷ್ಟ್ರದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಕೈಲಾಸದ ಪತ್ರಿಕಾ ಕಾರ್ಯದರ್ಶಿ(PTI Photo)   (PTI03_02_2023_000322B)
Nithyanada Kailasa: ಕೈಲಾಸ ಎಲ್ಲಿದೆ? ನಿತ್ಯಾನಂದನ ಕಾಲ್ಪನಿಕ ರಾಷ್ಟ್ರದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಕೈಲಾಸದ ಪತ್ರಿಕಾ ಕಾರ್ಯದರ್ಶಿ(PTI Photo) (PTI03_02_2023_000322B) (PTI)

ನವದೆಹಲಿ: ಸ್ವಯಂಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದನ ಕೈಲಾಸವೆಂಬ ಕಾಲ್ಪನಿಕ ರಾಷ್ಟ್ರದ ಕುರಿತ ಹಲವು ಸಂದೇಹಗಳಿಗೆ ಇಂದು ಕೈಲಾಸದ ಪತ್ರಿಕಾ ಕಾರ್ಯದರ್ಶಿಯು ಉತ್ತರ ನೀಡಿದ್ದಾರೆ. ಅವರು ಕೈಲಾಸವನ್ನು ಗಡಿಯಿಲ್ಲದ ಸೇವಾ ಆಧರಿತ ರಾಷ್ಟ್ರ ಎಂದು ಕರೆದಿದ್ದು, ಕೈಲಾಸದ ಅನೇಕ ಘಟಕಗಳು, ಎನ್‌ಜಿಒಗಳು, ದೇವಾಲಯಗಳು ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

ಪೂರ್ವದವರು ಚೀನೀಯರಂತೆ: ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ವಿವಾದ, ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು

Gold Rate Today: ತಾಪಮಾನ ಏರಿಕೆಯಂತೆ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

ಕೈಲಾಸದ ಕುರಿತು ಪ್ರಶ್ನೆಗಳನ್ನು ಕೇಳಲು ಪ್ರಮುಖ ಮಾಧ್ಯಮ ಮತ್ತು ಸುದ್ದಿಸಂಸ್ಥೆಗಳಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಕೈಲಾಸದ ಪತ್ರಿಕಾ ಪ್ರತಿನಿಧಿಯು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ಸ್ವಯಂ ಘೋಷಿತ ಗುರು ಮತ್ತು "ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ" ನಿತ್ಯಾನಂದ ಪರಮಶಿವಂ ತನ್ನನ್ನು ತಾನು ಕೈಲಾಸದ ಆಡಳಿತಗಾರ ಎಂದು ಹೇಳಿಕೊಳ್ಳುತ್ತಾರೆ. ಅತ್ಯಾಚಾರ ಮತ್ತು ಅಪಹರಣದ ಆರೋಪದ ಮೇಲೆ 2019ರಲ್ಲಿ ಭಾರತದಿಂದ ಓಡಿಹೋದ ನಿತ್ಯಾನಂದನು ಕೈಲಾಸವೆಂಬ ಕಾಲ್ಪನಿಕ ರಾಷ್ಟ್ರವನ್ನು ಸ್ಥಾಪಿಸಿದ್ದನು.

ಈ ರಾಷ್ಟ್ರ ಎಲ್ಲಿದೆ? ಅದರ ಭೌಗೋಳಿಕ ಪ್ರದೇಶ ಯಾವುದು ಎಂಬ ಮಾಹಿತಿ ಇಲ್ಲದೆ ಇದ್ದರೂ ಆ ದೇಶದ ಕುರಿತು ಚಿತ್ರಗಳು, ವಿಡಿಯೋಗಳನ್ನು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗಿಯಾದ ಬಳಿಕ ಈ ದೇಶದ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಕೈಲಾಸದ ಪತ್ರಿಕಾ ಕಾರ್ಯದರ್ಶಿ ನೀಡಿದ ಮಾಹಿತಿಗಳು ಈ ಮುಂದಿನಂತೆ ಇವೆ.

ಪ್ರಶ್ನೆ: ಕೈಲಾಸ ಎಲ್ಲಿದೆ? ಅದರ ಸ್ಥಳ ಮತ್ತು ಜನಸಂಖ್ಯೆ ಕುರಿತು ಮಾಹಿತಿ ನೀಡಿ

ನಾವು ಪ್ರಾಚೀನ ಪ್ರಬುದ್ಧ ಹಿಂದೂ ನಾಗರಿಕತೆಯ ರಾಷ್ಟ್ರದ ಪುನರುಜ್ಜೀವನವಾಗಿದ್ದೇವೆ ಮತ್ತು ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಎನ್‌ಜಿಒಗಳ ಗುಂಪಿನ ಮೂಲಕ ಕಾರ್ಯನಿರ್ವಹಿಸುತ್ತಿದ್ದೇವೆ. ಗಡಿಯಿಲ್ಲದ ಸೇವಾ-ಆಧಾರಿತ ರಾಷ್ಟ್ರವಾದ ಮಾಲ್ಟಾದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಪ್ರಶ್ನೆ: ಜನರು ಕೈಲಾಸ ದೇಶಕ್ಕೆ ಹೇಗೆ ಭೇಟಿ ನೀಡಬಹುದು? ಅದಕ್ಕೆ ಯಾವ ದಾಖಲೆಗಳು ಬೇಕಾಗುತ್ತವೆ?

ಮಾಲ್ಟಾದ ಸಾರ್ವಭೌಮ ಆದೇಶದಂತೆ, ಕೈಲಾಸವು ಅನೇಕ ಘಟಕಗಳು ಮತ್ತು ಅನೇಕ ದೇಶಗಳಲ್ಲಿ ಎನ್‌ಜಿಒಗಳು, ದೇವಾಲಯಗಳು ಮತ್ತು ಮಠಗಳ ಮೂಲಕ ಕಾರ್ಯನಿರ್ವಹಿಸುತ್ತದೆ.

ಪ್ರಶ್ನೆ: ನಿತ್ಯಾನಂದ ಪರಮಶಿವಂ ಮೇಲೆ ಅತ್ಯಾಚಾರ ಮತ್ತು ಹಗರಣದ ಆರೋಪಗಳಿವೆಯಲ್ವ?

ಅಂತಹ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು. ಅನೇಕ ಪ್ರಮುಖ ಮಾನವ ಹಕ್ಕುಗಳ ವಕೀಲರು ಇದನ್ನು ದೃಢೀಕರಿಸುವ ಸ್ವತಂತ್ರ ವರದಿಗಳನ್ನು ಮತ್ತು ಕಾನೂನು ಅಭಿಪ್ರಾಯಗಳನ್ನು ನೀಡಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಇಂಗ್ಲೆಂಡ್‌ನ ಜೆಫ್ರಿ ರಾಬರ್ಟ್‌ಸನ್‌ನ ಕ್ವೀನ್ಸ್ ಕೌನ್ಸಿಲ್‌ನ ಉದಾಹರಣೆಯನ್ನು ಸಹ ಉಲ್ಲೇಖಿಸಿದ್ದಾರೆ. ಕ್ವೀನ್ಸ್‌ ಕೌನ್ಸಿಲ್‌ ವರದಿ ಪ್ರಕಾರ ಅತ್ಯಾಚಾರ ಆರೋಪವು ಮಾಧ್ಯಮ ಮತ್ತು ಸರಕಾರಿ ಅಧಿಕಾರಿಗಳ ರಾಕ್ಷಸೀಕರಣದಿಂದ ಉದ್ಭವಿಸುತ್ತದೆ. 2010 ರಲ್ಲಿ ನಿತ್ಯಾನಂದರ ವಿರುದ್ಧ ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮೊದಲ ಬಾರಿ ಹೊರಿಸಲಾಯಿತು.

ಪ್ರಶ್ನೆ: ವಿಶ್ವಸಂಸ್ಥೆಯ ಸಭೆಗಳಿಗೆ ಹಾಜರಾಗಲು ಹೇಗೆ ಸಾಧ್ಯವಾಯಿತು?

ಫೆಬ್ರವರಿ 22, 2023 ರಂದು ಮಹಿಳೆಯರ ವಿರುದ್ಧ ತಾರತಮ್ಯ ನಿರ್ಮೂಲನೆ ಸಮಿತಿಯ 84 ನೇ ಅಧಿವೇಶನದಲ್ಲಿ (CEDAW) ಮತ್ತು ಫೆಬ್ರವರಿ 24, 2023 ರಂದು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ ಸಾಮಾನ್ಯ ಅಭಿಪ್ರಾಯದ ಕುರಿತು ಚರ್ಚೆಯಲ್ಲಿ, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅಲ್ಲಿ ಕೈಲಾಸದ ಮಹಿಳೆಯರ ನಿಯೋಗವು ಸಮಗ್ರ ವರದಿಯನ್ನು ಪ್ರಸ್ತುತಪಡಿಸಿತು. ಹಿಂದೂ ಮಹಿಳೆಯರ ಜನಾಂಗೀಯ ಹತ್ಯೆ, ಸ್ತ್ರೀ ಸನ್ಯಾಸಿಗಳ ಸಾಂಸ್ಕೃತಿಕ ನರಮೇಧ ಇತ್ಯಾದಿಗಳನ್ನು ತಿಳಿಸಿದೆವು. ನಾವು ಹಿಂದೂ ಶೋಷಣೆಗೆ ಧ್ವನಿಯಾಗಲು ಈ ಅವಕಾಶವನ್ನು ಬಳಸಿದ್ದೇವೆ.

    ಹಂಚಿಕೊಳ್ಳಲು ಲೇಖನಗಳು