logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bharat Jodo Yatra Photos: ನಡಿಗೆ ನಿಲ್ಲಿಸಿದ ರಾಹುಲ್ ಗಾಂಧಿ; ಭದ್ರತಾ ವೈಫಲ್ಯಕ್ಕೆ ಅಸಮಾಧಾನ

Bharat Jodo Yatra photos: ನಡಿಗೆ ನಿಲ್ಲಿಸಿದ ರಾಹುಲ್ ಗಾಂಧಿ; ಭದ್ರತಾ ವೈಫಲ್ಯಕ್ಕೆ ಅಸಮಾಧಾನ

Jan 27, 2023 05:21 PM IST

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಅಂತಿಮ ಹಂತದಲ್ಲಿದೆ. ಶುಕ್ರವಾರ ಬೆಳಗ್ಗೆ ರಾಂಬನ್ ಜಿಲ್ಲೆಯ ಬನಿಹಾಲ್ ರೈಲ್ವೆ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ 44ರಿಂದ ಯಾತ್ರೆ ಪುನರಾರಂಭಗೊಂಡಿತು. 

  • ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಅಂತಿಮ ಹಂತದಲ್ಲಿದೆ. ಶುಕ್ರವಾರ ಬೆಳಗ್ಗೆ ರಾಂಬನ್ ಜಿಲ್ಲೆಯ ಬನಿಹಾಲ್ ರೈಲ್ವೆ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ 44ರಿಂದ ಯಾತ್ರೆ ಪುನರಾರಂಭಗೊಂಡಿತು. 
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಇಂದು ಬನಿಹಾಲ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡರು. ಅದರ ಬೆನ್ನಲ್ಲೇ, ಭದ್ರತಾ ಲೋಪದಿಂದಾಗಿ ಯಾತ್ರೆಯನ್ನು ರದ್ದು ಮಾಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಭದ್ರತಾ ವ್ಯವಸ್ಥೆಯನ್ನು ದೂಷಿಸಿ ಯಾತ್ರೆಯನ್ನು ಮೊಟಕುಗೊಳಿಸುತ್ತಿರುವುದಾಗಿ ಹೇಳಿದ್ದಾರೆ.
(1 / 8)
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಇಂದು ಬನಿಹಾಲ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡರು. ಅದರ ಬೆನ್ನಲ್ಲೇ, ಭದ್ರತಾ ಲೋಪದಿಂದಾಗಿ ಯಾತ್ರೆಯನ್ನು ರದ್ದು ಮಾಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಭದ್ರತಾ ವ್ಯವಸ್ಥೆಯನ್ನು ದೂಷಿಸಿ ಯಾತ್ರೆಯನ್ನು ಮೊಟಕುಗೊಳಿಸುತ್ತಿರುವುದಾಗಿ ಹೇಳಿದ್ದಾರೆ.(AFP)
ಕಾಂಗ್ರೆಸ್ ನಾಯಕರು ಹೆಸರಿಗಾಗಿ ಮೆರವಣಿಗೆ ನಡೆಸುತ್ತಿಲ್ಲ. ಬದಲಿಗೆ ದೇಶದ ಪರಿಸ್ಥಿತಿ ಮತ್ತು ವಾತಾವರಣವನ್ನು ಬದಲಾಯಿಸಲು ಮೆರವಣಿಗೆ ನಡೆಸಲಾಗುತ್ತಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್‌ನ ನಿಲುವನ್ನು ಪರಿಶೀಲಿಸಲು ಬಯಸುವುದಿಲ್ಲ ಎಂದು ಅವರು ಹೇಳಿದರು.
(2 / 8)
ಕಾಂಗ್ರೆಸ್ ನಾಯಕರು ಹೆಸರಿಗಾಗಿ ಮೆರವಣಿಗೆ ನಡೆಸುತ್ತಿಲ್ಲ. ಬದಲಿಗೆ ದೇಶದ ಪರಿಸ್ಥಿತಿ ಮತ್ತು ವಾತಾವರಣವನ್ನು ಬದಲಾಯಿಸಲು ಮೆರವಣಿಗೆ ನಡೆಸಲಾಗುತ್ತಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್‌ನ ನಿಲುವನ್ನು ಪರಿಶೀಲಿಸಲು ಬಯಸುವುದಿಲ್ಲ ಎಂದು ಅವರು ಹೇಳಿದರು.(PTI)
ಶ್ರೀನಗರದಲ್ಲಿ ಮುಂದಿನ ವಾರ ಮುಕ್ತಾಯಗೊಳ್ಳಲಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು, ಭದ್ರತಾ ಲೋಪದಿಂದಾಗಿ ಕಾಶ್ಮೀರ ಕಣಿವೆಯನ್ನು ಪ್ರವೇಶಿಸಿದ ಬೆನ್ನಲ್ಲೇ ಇಂದು  ಸ್ಥಗಿತಗೊಂಡಿದೆ ಎಂದು ಪಕ್ಷ ತಿಳಿಸಿದೆ.
(3 / 8)
ಶ್ರೀನಗರದಲ್ಲಿ ಮುಂದಿನ ವಾರ ಮುಕ್ತಾಯಗೊಳ್ಳಲಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು, ಭದ್ರತಾ ಲೋಪದಿಂದಾಗಿ ಕಾಶ್ಮೀರ ಕಣಿವೆಯನ್ನು ಪ್ರವೇಶಿಸಿದ ಬೆನ್ನಲ್ಲೇ ಇಂದು  ಸ್ಥಗಿತಗೊಂಡಿದೆ ಎಂದು ಪಕ್ಷ ತಿಳಿಸಿದೆ.(AFP)
ಯಾತ್ರೆಯಲ್ಲಿ ನಡಿಗೆ ವೇಳೆ ಇಬ್ಬರು ಕೈ ನಾಯಕರ ಸಂಭಾಷಣೆ
(4 / 8)
ಯಾತ್ರೆಯಲ್ಲಿ ನಡಿಗೆ ವೇಳೆ ಇಬ್ಬರು ಕೈ ನಾಯಕರ ಸಂಭಾಷಣೆ(ANI)
“ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ದುರದೃಷ್ಟವಶಾತ್ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ನಾನು ಯಾತ್ರೆಯಲ್ಲಿ ಮುಂದೆ ನಡೆಯುವಂತೆ ಮಾಡಲು ನನ್ನ ಭದ್ರತಾ ಸಿಬ್ಬಂದಿಗೆ ತುಂಬಾ ಕಷ್ಟವಾಯಿತು. ಆದ್ದರಿಂದ ನಾನು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು. ಇತರ ಪಾದಯಾತ್ರಿಗಳು ನಡಿಗೆ ಮಾಡಿದ್ದಾರೆ," ಎಂದು ಅನಂತನಾಗ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
(5 / 8)
“ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ದುರದೃಷ್ಟವಶಾತ್ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ನಾನು ಯಾತ್ರೆಯಲ್ಲಿ ಮುಂದೆ ನಡೆಯುವಂತೆ ಮಾಡಲು ನನ್ನ ಭದ್ರತಾ ಸಿಬ್ಬಂದಿಗೆ ತುಂಬಾ ಕಷ್ಟವಾಯಿತು. ಆದ್ದರಿಂದ ನಾನು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು. ಇತರ ಪಾದಯಾತ್ರಿಗಳು ನಡಿಗೆ ಮಾಡಿದ್ದಾರೆ," ಎಂದು ಅನಂತನಾಗ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.(PTI)
ಭದ್ರತಾ ವಿಷಯಗಳ ಬಗ್ಗೆ ಮಾತನಾಡಿದ ಗಾಂಧಿ, "ನಾವು ಯಾತ್ರೆಯನ್ನು ಮಾಡಲು ಪೊಲೀಸರು ಜನಸಂದಣಿಯನ್ನು ನಿರ್ವಹಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಭದ್ರತಾ ಸಿಬ್ಬಂದಿ ಶಿಫಾರಸು ಮಾಡುವುದಕ್ಕೆ ವಿರುದ್ಧವಾಗಿ ನಾನು ಹೋಗುವುದು ತುಂಬಾ ಕಷ್ಟ" ಎಂದು ಹೇಳಿದರು.
(6 / 8)
ಭದ್ರತಾ ವಿಷಯಗಳ ಬಗ್ಗೆ ಮಾತನಾಡಿದ ಗಾಂಧಿ, "ನಾವು ಯಾತ್ರೆಯನ್ನು ಮಾಡಲು ಪೊಲೀಸರು ಜನಸಂದಣಿಯನ್ನು ನಿರ್ವಹಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಭದ್ರತಾ ಸಿಬ್ಬಂದಿ ಶಿಫಾರಸು ಮಾಡುವುದಕ್ಕೆ ವಿರುದ್ಧವಾಗಿ ನಾನು ಹೋಗುವುದು ತುಂಬಾ ಕಷ್ಟ" ಎಂದು ಹೇಳಿದರು.(PTI)
"ಇದು ಏಕೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ. ಆದರೆ ನಾಳೆ ಮತ್ತು ನಾಳಿದ್ದು ಮತ್ತೆ ಈ ರೀತಿ ಸಂಭವಿಸಬಾರದು" ಎಂದು ಅವರು ಹೇಳಿದರು.
(7 / 8)
"ಇದು ಏಕೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ. ಆದರೆ ನಾಳೆ ಮತ್ತು ನಾಳಿದ್ದು ಮತ್ತೆ ಈ ರೀತಿ ಸಂಭವಿಸಬಾರದು" ಎಂದು ಅವರು ಹೇಳಿದರು.(ANI)
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾಯಿತು. ದೇಶದ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 3,970 ಕಿಮೀ, ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30ರಂದು ಮುಕ್ತಾಯಗೊಳ್ಳಲಿದೆ.
(8 / 8)
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾಯಿತು. ದೇಶದ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 3,970 ಕಿಮೀ, ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30ರಂದು ಮುಕ್ತಾಯಗೊಳ್ಳಲಿದೆ.(PTI)

    ಹಂಚಿಕೊಳ್ಳಲು ಲೇಖನಗಳು