logo
ಕನ್ನಡ ಸುದ್ದಿ  /  Photo Gallery  /  Sitharaman's Budget Special Saree Is From Karnataka's Dharwad

Sitharaman's Budget Saree: ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಬಜೆಟ್​ ಮಂಡನೆ..

Feb 01, 2023 05:32 PM IST

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಲೋಕಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ (ಮರೂನ್​ ಕಲರ್​​) ಇಳಕಲ್​ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಸಂಸತ್ತಿಗೆ ಬಂದು ಬಜೆಟ್​ ಮಂಡಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಮೊದಲು ಕರ್ನಾಟಕದ ಜನತೆಯನ್ನು ಆಕರ್ಷಿಸಿದ್ದಾರೆ.

  • ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಲೋಕಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ (ಮರೂನ್​ ಕಲರ್​​) ಇಳಕಲ್​ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಸಂಸತ್ತಿಗೆ ಬಂದು ಬಜೆಟ್​ ಮಂಡಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಮೊದಲು ಕರ್ನಾಟಕದ ಜನತೆಯನ್ನು ಆಕರ್ಷಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಇಳಕಲ್​ ಸೀರೆಯುಟ್ಟು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿಗೆ ಆಗಮಿಸಿ ಬಜೆಟ್​ ಮಂಡಿಸಿದ್ದಾರೆ.   
(1 / 5)
ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಇಳಕಲ್​ ಸೀರೆಯುಟ್ಟು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿಗೆ ಆಗಮಿಸಿ ಬಜೆಟ್​ ಮಂಡಿಸಿದ್ದಾರೆ.   
ಧಾರವಾಡದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ನ ಮಹಿಳೆಯರು ಈ ಸೀರೆಗೆ ಕಸೂತಿ ಹಾಕಿ ತಯಾರಿಸಿದ್ದಾರೆ.   
(2 / 5)
ಧಾರವಾಡದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ನ ಮಹಿಳೆಯರು ಈ ಸೀರೆಗೆ ಕಸೂತಿ ಹಾಕಿ ತಯಾರಿಸಿದ್ದಾರೆ.   
ಕೇಂದ್ರ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಸಂಸದರೂ ಆಗಿರುವ ಪ್ರಲ್ಹಾದ್​ ಜೋಶಿ ಅವರು ನವಲಗುಂದ ಕಸೂತಿ ಕಲೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯಿಂದ ಉಡುಗೊರೆಯಾಗಿ ನೀಡಿದ್ದರು. ಇವುಗಳಲ್ಲಿ ಒಂದು ಸೀರೆಯನ್ನು ಉಟ್ಟು ಸೀತಾರಾಮನ್​ ಇಂದು ಬಜೆಟ್​ ಮಂಡಿಸಿದ್ದು ವಿಶೇಷವಾಗಿತ್ತು. 
(3 / 5)
ಕೇಂದ್ರ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಸಂಸದರೂ ಆಗಿರುವ ಪ್ರಲ್ಹಾದ್​ ಜೋಶಿ ಅವರು ನವಲಗುಂದ ಕಸೂತಿ ಕಲೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯಿಂದ ಉಡುಗೊರೆಯಾಗಿ ನೀಡಿದ್ದರು. ಇವುಗಳಲ್ಲಿ ಒಂದು ಸೀರೆಯನ್ನು ಉಟ್ಟು ಸೀತಾರಾಮನ್​ ಇಂದು ಬಜೆಟ್​ ಮಂಡಿಸಿದ್ದು ವಿಶೇಷವಾಗಿತ್ತು. 
ಈ ಬಗ್ಗೆ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, "ನಮ್ಮ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು  ಬಂದು ಅತ್ಯಂತ ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಿದ್ದು ನಮಗೇಲ್ಲರಿಗೂ ಹೆಮ್ಮೆಯ ವಿಷಯ" ಎಂದು ಹೇಳಿದ್ದಾರೆ. 
(4 / 5)
ಈ ಬಗ್ಗೆ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, "ನಮ್ಮ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು  ಬಂದು ಅತ್ಯಂತ ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಿದ್ದು ನಮಗೇಲ್ಲರಿಗೂ ಹೆಮ್ಮೆಯ ವಿಷಯ" ಎಂದು ಹೇಳಿದ್ದಾರೆ. 
2020 ರಲ್ಲಿ, ಬಜೆಟ್ ದಿನ ನಿರ್ಮಲಾ ಸೀತಾರಾಮನ್ ನೀಲಿ ಬಣ್ಣದ ಅಂಚು ಹೊಂದಿರುವ ಹಳದಿ ರೇಷ್ಮೆ ಸೀರೆ ಉಟ್ಟಿದ್ದರು. 2021 ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಪೊಚಂಪಲ್ಲಿ ಸೀರೆಯನ್ನು ಧರಿಸಿದ್ದರು.   
(5 / 5)
2020 ರಲ್ಲಿ, ಬಜೆಟ್ ದಿನ ನಿರ್ಮಲಾ ಸೀತಾರಾಮನ್ ನೀಲಿ ಬಣ್ಣದ ಅಂಚು ಹೊಂದಿರುವ ಹಳದಿ ರೇಷ್ಮೆ ಸೀರೆ ಉಟ್ಟಿದ್ದರು. 2021 ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಪೊಚಂಪಲ್ಲಿ ಸೀರೆಯನ್ನು ಧರಿಸಿದ್ದರು.   

    ಹಂಚಿಕೊಳ್ಳಲು ಲೇಖನಗಳು