Annamalai : ದಕ್ಷಿಣಕನ್ನಡದಲ್ಲಿ ಕ್ಯಾಪ್ಟನ್ ದಿನೇಶ್ ಚೌಟ ಪರ ಅಣ್ಣಾಮಲೈ ಬಿರುಸಿನ ಪ್ರಚಾರ ; ಮತದಾನದ ಬಗ್ಗೆ ಜಾಗೃತಿ
Apr 24, 2024 06:01 PM IST
ಬಿರುಸಿನ ಸ್ಪರ್ಧಾಕಣವಾಗಿ ಗುರುತಿಸಲ್ಪಟ್ಟಿರುವ ದಕ್ಷಿಣಕನ್ನಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ನ ಪದ್ಮರಾಜ್ ಹಾಗೂ ಬಿಜೆಪಿಯ ದಿನೇಶ್ ಚೌಟ ಕೊನೆಯ ಕ್ಷಣದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇನ್ನು ಪುತ್ತೂರಿಗೆ ಆಗಮಿಸಿದ್ದ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಪುತ್ತೂರಿನಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಅಣ್ಣಾಮಲೈ ತಪ್ಪದೆ ಓಟ್ ಮಾಡುವಂತೆ ಜಾಗೃತಿ ಮೂಡಿಸಿದರು.