Darshan Birthday: ಬರ್ತ್ಡೇಗೆ ಶುಭ ಕೋರಿ ಕಿವಿಮಾತು ಹೇಳಿದ ಪ್ರಥಮ್... ಅವರಿಗೆ ಬುದ್ಧಿ ಹೇಳುವಷ್ಟು ನೀವು ದೊಡ್ಡವರಲ್ಲ ಎಂದ ಫ್ಯಾನ್ಸ್
ನೀವು ಅವರಿಗೆ ಸಲಹೆ ಕೊಡುವಷ್ಟು ದೊಡ್ಡವರಲ್ಲ ಪ್ರಥಮ್ , ಸರಿ ತಪ್ಪು ಯಾವುದು ಅಂತ ದರ್ಶನ್ ಅವರಿಗೆ ಚನ್ನಾಗಿ ಗೊತ್ತಿದೆ ಎಂದು ಒಬ್ಬರು ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರಥಮ್ ಅವರೇ, ನೀವು ಇಲ್ಲಿ ಕೆಲವೊಂದು ವಿಚಾರದ ಬಗ್ಗೆ ಗೊತ್ತಿಲ್ಲದೆ ಮಾತನಾಡಲು ಬರಬೇಡಿ, ತಿಳಿಯದೆ ಒಳ್ಳೆಯವರಾಗಲು ಟಿಆರ್ಪಿ ಬೇಕು ಅ೦ದರೆ ಹೇಳಿ, ಎಂದು ಕಮೆಂಟ್ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳು ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟರುವ ದರ್ಶನ್ಗೆ ಅಭಿಮಾನಿಗಳು, ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ದರ್ಶನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಈ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಥಮ್ ಕೂಡಾ ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಆದರೆ ಅವರ್ ವಿಶ್ ಮಾಡಿರುವ ರೀತಿಗೆ ದಚ್ಚು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ಜೊತೆಗಿನ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಥಮ್, ''ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ ಸರ್, ಎರಡು ಮಾತು ಹೇಳ್ತೀನಿ, ದಯವಿಟ್ಟು ಸ್ವೀಕರಿಸಿ, 1. ಅಂಬರೀಶ್ ಅವರ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಮಾಸ್ ಹೀರೋ ನೀವು, ಭಗವಂತ ನಿಮಗೆ ಎಲ್ಲಾ ಕೊಟ್ಟಿದ್ದಾನೆ, ಎಷ್ಟು ಅಭಿಮಾನಿಗಳು ಇದಾರೆ ನೋಡಿ, ಇಷ್ಟಿದ್ದ ಮೇಲೆ ನೀವು ಕೂಲ್ ಆಗಿರಿ, ಆರಾಮ್ ಆಗಿರಿ. 2. ನಿಮ್ಮ ಹಾಗೂ ಮಾಧ್ಯಮದ ನಡುವಿನ ಮುನಿಸು ನಿಲ್ಲಲ್ಲಿ. ನೀವು- ಮೀಡಿಯಾ ಒಂದಾಗಲೇ ಅನ್ನೋದೇ ಪ್ರಾಮಾಣಿಕ ಆಸೆ, ಇಂದು ಅಂಬರೀಶ್ ಸರ್ ಇದ್ದಿದ್ರೆ ನಿಮ್ಮ ಹಾಗೂ ಮಾಧ್ಯಮದ ನಡುವಿನ ಬಿರುಕು ಬೆಳೆಯೋಕೆ ಬಿಡುತ್ತಿರಲಿಲ್ಲ. ನಿಮ್ಮ ಹಿತ ಬಯಸುವವರು ಪ್ರಾಮಾಣಿಕವಾಗಿ ಸಂಧಾನ ಮಾಡಿ, ನೀವು ಮಾಧ್ಯಮ ಒಂದಾಗಲಿ ಅದೇ ನಿಮ್ಮ ಅಭಿಮಾನಿಗಳಿಗೆ ಬರ್ತ್ಡೇ ಗಿಫ್ಟ್ ಆಗಲಿ ಎಂಬುದೇ ನನ್ನಾಸೆ'' ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
ಪ್ರಥಮ್ ಅವರ ಈ ಪೋಸ್ಟ್ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಪ್ರಥಮ್ ಇದಕ್ಕೂ ಮುನ್ನ ಅನೇಕ ಬಾರಿ ಹಿಂದು ಮುಂದು ಯೋಚಿಸದೆ ಮಾತನಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ದರ್ಶನ್ಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಅವರಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ದಚ್ಚು ಅಭಿಮಾನಿಗಳು ಕೋಪ ವ್ಯಕ್ತಪಡಿಸಿದ್ದಾರೆ. ''ನೀವು ಅವರಿಗೆ ಸಲಹೆ ಕೊಡುವಷ್ಟು ದೊಡ್ಡವರಲ್ಲ ಪ್ರಥಮ್ , ಸರಿ ತಪ್ಪು ಯಾವುದು ಅಂತ ದರ್ಶನ್ ಅವರಿಗೆ ಚನ್ನಾಗಿ ಗೊತ್ತಿದೆ ಎಂದು ಒಬ್ಬರು ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರಥಮ್ ಅವರೇ, ನೀವು ಇಲ್ಲಿ ಕೆಲವೊಂದು ವಿಚಾರದ ಬಗ್ಗೆ ಗೊತ್ತಿಲ್ಲದೆ ಮಾತನಾಡಲು ಬರಬೇಡಿ, ತಿಳಿಯದೆ ಒಳ್ಳೆಯವರಾಗಲು ಟಿಆರ್ಪಿ ಬೇಕು ಅ೦ದರೆ ಹೇಳಿ, ಎಂದು ಕಮೆಂಟ್ ಮಾಡಿದ್ದಾರೆ. ಬಹುತೇಕ ಎಲ್ಲರೂ ಪ್ರಥಮ್ ಪೋಸ್ಟ್ ವಿರುದ್ಧ ಕಮೆಂಟ್ ಮಾಡಿದ್ದಾರೆ. ಆದರೆ ಪ್ರಥಮ್ ಮಾತ್ರ ತನ್ನ ವಿರುದ್ಧ ಕಮೆಂಟ್ ಮಾಡಿದವರಿಗೆ ರಿಪ್ಲೇ ಮಾಡಿ ಮತ್ತೆ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ದರ್ಶನ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
ದರ್ಶನ್ ಹೊಸ ಸಿನಿಮಾ ವಿಚಾರವಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕುತೂಹಲಕ್ಕೆ ನಿನ್ನೆ (ಫೆ.15) ಮಧ್ಯರಾತ್ರಿ 12ಕ್ಕೆ ಉತ್ತರ ಸಿಕ್ಕಿದೆ. ಅಂದರೆ ರಾಬರ್ಟ್ ಬಳಿಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ D56 ಚಿತ್ರಕ್ಕೆ ಶೀರ್ಷಿಕೆ ಘೋಷಣೆ ಆಗಿದೆ. ಹೊಸ ಚಿತ್ರಕ್ಕೆ 'ಕಾಟೇರ' ಎಂಬ ಟೈಟಲ್ ಅಧಿಕೃತವಾಗಿದೆ. ಕೇವಲ ಶೀರ್ಷಿಕೆ ಮಾತ್ರವಲ್ಲದೆ, ಕಿರು ಟೀಸರ್ ಕೂಡಾ ರಿಲೀಸ್ ಮಾಡಿದ್ದು, ಅಷ್ಟೇ ರಗಡ್ ಆಗಿದೆ. ದರ್ಶನ್, ಖಡಕ್ ಅವತಾರದಲ್ಲಿ ಎದುರಾಗಿದ್ದಾರೆ.
ರಾಕ್ಲೈನ್ ವೆಂಕಟೇಶ್ ಅವರ ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಕಾಟೇರ' ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. 1974ರಲ್ಲಿ ನಡೆದ ನೈಜ ಘಟನೆಯೇ ಚಿತ್ರದ ಕಥಾವಸ್ತು. ಸುಮಾರು 49 ವರ್ಷಗಳ ಹಿಂದಿನ ಘಟನೆಯನ್ನು ನಿರ್ದೇಶಕ ತರುಣ್ ಸುಧೀರ್, ಸಿನಿಮಾ ರೂಪದಲ್ಲಿ ತೆರೆ ಮೇಲೆ ತರುತ್ತಿದ್ದಾರೆ. ಪೋಸ್ಟರ್ನಲ್ಲಿ ಪಾರ್ಲಿಮೆಂಟ್ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹವೂ ಕಾಣಿಸುತ್ತಿದೆ. ಒಟ್ಟಿನಲ್ಲಿ ಈ ಹೊಸ ಸಿನಿಮಾ ಬಹಳ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದು ಅಭಿಮಾನಿಗಳು ಮುಂದಿನ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ.