ಕನ್ನಡ ಸುದ್ದಿ  /  Entertainment  /  Bollywood News Instead Of Ranbir Kapoor Ayushmann Khurrana May Play Cricketer Sourav Ganguly Role In Biopic Rsm

Sourav Ganguly: ಕ್ರಿಕೆಟಿಗ ಸೌರವ್‌ ಗಂಗೂಲಿ ಬಯೋಪಿಕ್‌; ರಣಬೀರ್‌ ಕಪೂರ್‌ ಬದಲಿಗೆ ಬಾಲಿವುಡ್‌ ಮತ್ತೊಬ್ಬ ನಟ ಫಿಕ್ಸ್‌, ನಿರ್ದೇಶನ ಯಾರದ್ದು?

ಬಂಗಾಳದ ಹುಲಿ ಸೌರವ್‌ ಗಂಗೂಲಿ ಕುರಿತಾದ ಸಿನಿಮಾ ಬರುತ್ತದೆ ಎಂದು ಬಾಲಿವುಡ್‌ನಿಂದ ಕೆಲವು ದಿನಗಳ ಹಿಂದೆಯೇ ಅಪ್‌ಡೇಟ್‌ ನೀಡಲಾಗಿತ್ತು. ಗಂಗೂಲಿ ಪಾತ್ರದಲ್ಲಿ ರಣಬೀರ್‌ ಕಪೂರ್‌ ನಟಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ರಣಬೀರ್‌ ಸ್ಥಾನಕ್ಕೆ ಬೇರೆ ನಟ ಬರಲಿದ್ದಾರೆ ಎನ್ನಲಾಗುತ್ತಿದೆ.

ರಣಬೀರ್‌ ಕಪೂರ್‌, ಸೌರವ್‌ ಗಂಗೂಲಿ
ರಣಬೀರ್‌ ಕಪೂರ್‌, ಸೌರವ್‌ ಗಂಗೂಲಿ

ಚಿತ್ರರಂಗದಲ್ಲಿ ಖ್ಯಾತನಾಮರ ಅನೇಕ ಸಿನಿಮಾಗಳು ತಯಾರಾಗಿವೆ. ಕ್ರಿಕೆಟ್‌ ತಾರೆಯರ ಬಯೋಪಿಕ್‌ ಕೂಡಾ ಬಾಲಿವುಡ್‌ನಲ್ಲಿ ತಯಾರಾಗಿದೆ. ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಕುರಿತಾದ ಎಂ ಎಸ್‌ ಧೋನಿ: ದಿ ಅನ್‌ ಟೋಲ್ಡ್‌ ಸ್ಟೋರಿ 2016ರಲ್ಲಿ ತೆರೆ ಕಂಡಿತ್ತು. ಕಪಿಲ್‌ ದೇವ್‌ ಕುರಿತಾದ 83 ಸಿನಿಮಾ 2021ರಲ್ಲಿ ತೆರೆ ಕಂಡಿತ್ತು. ಇದೀಗ ಸೌರವ್‌ ಗಂಗೂಲಿ ಬಯೋಪಿಕ್‌ ತಯಾರಾಗಲು ಎಲ್ಲಾ ಸಿದ್ಧತೆ ನಡೆಯುತ್ತಿದೆ.

ಬಂಗಾಳದ ಹುಲಿ ಸೌರವ್‌ ಗಂಗೂಲಿ ಕುರಿತಾದ ಸಿನಿಮಾ ಬರುತ್ತದೆ ಎಂದು ಬಾಲಿವುಡ್‌ನಿಂದ ಕೆಲವು ದಿನಗಳ ಹಿಂದೆಯೇ ಅಪ್‌ಡೇಟ್‌ ನೀಡಲಾಗಿತ್ತು. ಗಂಗೂಲಿ ಪಾತ್ರದಲ್ಲಿ ರಣಬೀರ್‌ ಕಪೂರ್‌ ನಟಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ರಣಬೀರ್‌ ಸ್ಥಾನಕ್ಕೆ ಬೇರೆ ನಟ ಬರಲಿದ್ದಾರೆ ಎನ್ನಲಾಗುತ್ತಿದೆ. ಗಂಗೂಲಿ ಪಾತ್ರದಲ್ಲಿ ನಟಿಸಲು ಆಯುಷ್ಮಾನ್‌ ಖುರಾನಾ ಆಯ್ಕೆ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಅಷ್ಟೇ ಅಲ್ಲ ಈ ಸಿನಿಮಾವನ್ನು ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯ ರಜನಿಕಾಂತ್‌ ನಿರ್ದೇಶಿಸಲಿದ್ದಾರೆ ಎಂಬ ಮಾತು ಕೂಡಾ ಕೇಳಿ ಬಂದಿದೆ ಆದರೆ ಎಲ್ಲವೂ ಅಧಿಕೃತವಾಗಿ ಅನೌನ್ಸ್‌ ಆಗುವವರೆಗೆ ಕಾಯಬೇಕಿದೆ.

ಕ್ರಿಕೆಟ್‌ ಪ್ರೇಮಿಗಳು ಸೌರವ್‌ ಗಂಗೂಲಿ ಅವರನ್ನು ಪ್ರೀತಿಯಿಂದ ಗಾಡ್ ಆಫ್ ಆಫ್ ಸೈಡ್ ಎಂದೇ ಕರೆಯುತ್ತಾರೆ. ಅಭಿಮಾನಿಗಳ ಮೆಚ್ಚಿನ ದಾದಾ 1999ರಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಿಕೊಂಡರು. ಅಂದಿನಿಂದ ಅವರು ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವವರೆಗೂ ತಮ್ಮ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ನಿವೃತ್ತಿ ಬಳಿಕ ಗಂಗೂಲಿ ರಾಜಕೀಯ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ದಾದಾ ಯಾವುದೇ ಸ್ಪಷ್ಟನೆ ನೀಡಿಲ್ಲ. ತಮ್ಮ ಮೆಚ್ಚಿನ ಕ್ರಿಕೆಟಿಗನ ಬಯೋಪಿಕ್‌ ಬರಲಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ನೋವು ಅನುಭವಿಸಿದ ನಂತರ ಅದ್ಭುತ ಜೋಡಿ ಸಿಕ್ಕಿದೆ ಎಂದರೆ ಏಕೆ ಬಿಡಬೇಕು; ಪವಿತ್ರಾ ಲೋಕೇಶ್‌ ನರೇಶ್‌ ವಿಜಯ್‌ ಕೃಷ್ಣ

ಸ್ಯಾಂಡಲ್‌ವುಡ್‌ ನಟಿ ಪವಿತ್ರಾ ಲೋಕೇಶ್‌ ಹಾಗೂ ಟಾಲಿವುಡ್‌ ನಟ ನರೇಶ್‌ ವಿಜಯ್‌ ಕೃಷ್ಣ ತಮ್ಮ ನಡುವಿನ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನಾವಿಬ್ಬರೂ ಫ್ರೆಂಡ್ಸ್‌ ಎಂದು ಹೇಳಿಕೊಂಡು ತಿರುಗುತ್ತಿದ್ದವರು ಈಗ ನಾವಿಬ್ಬರೂ ಇಷ್ಟಪಟ್ಟಿದ್ದೇವೆ, ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಹೊಸ ಲುಕ್‌ನೊಂದಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ತಮಿಳು ನಟ ಧನುಷ್‌ ಪ್ರತ್ಯಕ್ಷ; ಯೋಗ ಗುರು ಬಾಬಾ ರಾಮ್‌ದೇವ್‌ಗೆ ಹೋಲಿಸಿದ ನೆಟಿಜನ್ಸ್

ಸಿನಿಮಾ ತಾರೆಯರು ಆಗ್ಗಾಗ್ಗೆ ಲುಕ್‌ ಬದಲಿಸುವುದು ಸಾಮಾನ್ಯ, ಅದರಲ್ಲೂ ನಾಯಕರು ಉದ್ದವಾದ ಗಡ್ಡ ಕೂದಲು ಬಿಡುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಆ ಲುಕ್‌ ನೋಡಿ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವೊಮ್ಮೆ ಸೆಲೆಬ್ರಿಟಿಗಳ ಲುಕ್‌ ಟ್ರೋಲ್‌ ಆಗುತ್ತದೆ. ಇದೀಗ ತಮಿಳು ನಟ ಧನುಷ್‌ ಕೂಡಾ ತಮ್ಮ ಹೊಸ ಲುಕ್‌ಗಾಗಿ ಟ್ರೋಲ್‌ ಆಗುತ್ತಿದ್ದಾರೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

IPL_Entry_Point