ಕನ್ನಡ ಸುದ್ದಿ  /  ಮನರಂಜನೆ  /  Kannada Tv News: ಬೃಂದಾವನ ಧಾರಾವಾಹಿಗಾಗಿ ಗೀತಾ ತ್ಯಾಗ: ಅಕ್ಟೋಬರ್‌ 23ರಿಂದ ಕಲರ್ಸ್‌ ಕನ್ನಡದಲ್ಲಿ ಹೊಸ ಸೀರಿಯಲ್‌ ಆರಂಭ

Kannada TV News: ಬೃಂದಾವನ ಧಾರಾವಾಹಿಗಾಗಿ ಗೀತಾ ತ್ಯಾಗ: ಅಕ್ಟೋಬರ್‌ 23ರಿಂದ ಕಲರ್ಸ್‌ ಕನ್ನಡದಲ್ಲಿ ಹೊಸ ಸೀರಿಯಲ್‌ ಆರಂಭ

Geetha Serial wind Up: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಮುಕ್ತಾಯವಾಗುತ್ತಿದ್ದು ಅಕ್ಟೋಬರ್‌ 23 ರಿಂದ ಹೊಸ ಧಾರಾವಾಹಿ ಬೃಂದಾವನ ಆರಂಭವಾಗುತ್ತಿದೆ.

ಅಕ್ಟೋಬರ್‌ 23 ರಿಂದ ಕಲರ್ಸ್‌ ಕನ್ನಡದಲ್ಲಿ 'ಬೃಂದಾವನ' ಧಾರಾವಾಹಿ ಆರಂಭ, ಗೀತಾ ಅಂತ್ಯ
ಅಕ್ಟೋಬರ್‌ 23 ರಿಂದ ಕಲರ್ಸ್‌ ಕನ್ನಡದಲ್ಲಿ 'ಬೃಂದಾವನ' ಧಾರಾವಾಹಿ ಆರಂಭ, ಗೀತಾ ಅಂತ್ಯ (PC: Colors Kannada)

Geetha Serial wind Up: ಬಿಗ್‌ ಬಾಸ್‌ ಆರಂಭವಾಗುತ್ತಿದ್ದಂತೆ ಕಲರ್ಸ್‌ ಕನ್ನಡ ವಾಹಿನಿ ಕೆಲವೊಂದು ಧಾರಾವಾಹಿಗಳ ಪ್ರಸಾರ ನಿಲ್ಲಿಸಲಾಗಿತ್ತು. ತ್ರಿಪುರ ಸುಂದರಿ, ಪುಣ್ಯವತಿ, ಲಕ್ಷಣ ಧಾರಾವಾಹಿಗಳು ಮುಕ್ತಾಯಗೊಂಡಿದ್ದವು. ಇದೀಗ 'ಗೀತಾ', ಧಾರಾವಾಹಿ ಕೂಡಾ ಮುಕ್ತಾಯದ ಹಂತದಲ್ಲಿದ್ದು ಹೊಸ ಧಾರಾವಾಹಿಗಾಗಿ ಗೀತಾ ದಾರಿ ಮಾಡಿಕೊಡಲು ಮುಂದಾಗಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

2020ರಲ್ಲಿ ಆರಂಭವಾದ ಗೀತಾ

'ಗೀತಾ' ಧಾರಾವಾಹಿ 2020 ಜನವರಿಯಲ್ಲಿ ಪ್ರಸಾರ ಆರಂಭಿಸಿತ್ತು. ಸತತ 3 ವರ್ಷಗಳ ಪ್ರಸಾರದ ನಂತರ ಗೀತಾ ಧಾರಾವಾಹಿ 'ಬೃಂದಾವನ' ಧಾರಾವಾಹಿಗಾಗಿ ಅಂತ್ಯ ಕಾಣುತ್ತಿದೆ. ಪ್ರತಿ ದಿನ ರಾತ್ರಿ 8 ಗಂಟೆಗೆ ಗೀತಾ ಪ್ರಸಾರವಾಗುತ್ತಿತ್ತು. ಇದೀಗ ಅದೇ ಸಮಯಕ್ಕೆ ಬೃಂದಾವನ ಧಾರಾವಾಹಿ ಪ್ರಸಾರ ಆರಂಭಿಸುತ್ತಿದೆ. ಗೀತಾ ಧಾರಾವಾಹಿಗೆ ಹೆಚ್ಚಿನ ವೀಕ್ಷಕರಿದ್ದರು. ಇದೀಗ ಆ ಸೀರಿಯಲ್‌ ಮುಗಿಯುತ್ತಿದೆ ಎಂದು ತಿಳಿದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮನೆಯ ಸದಸ್ಯರನ್ನು ಕಳೆದುಕೊಳ್ಳುತ್ತಿದ್ದೇವೇನೋ ಎನ್ನುವಷ್ಟರ ಮಟ್ಟಿಗೆ ಫೀಲ್ ಆಗುತ್ತಿದ್ದಾರೆ.

ರಾಮ್‌ ಜಿ ನಿರ್ದೇಶನದ ಹೊಸ ಧಾರಾವಾಹಿ

'ಗೀತಾ' ಧಾರಾವಾಹಿಯನ್ನು ರಾಮ್‌ ಜಿ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಆರಂಭವಾಗುತ್ತಿರುವ ಹೊಸ ಧಾರಾವಾಹಿಯನ್ನು ಕೂಡಾ ರಾಮ್‌ ಜಿ ಅವರೇ ನಿರ್ದೇಶನ ಮಾಡುತ್ತಿದ್ಧಾರೆ. ಒಬ್ಬರನೊಬ್ಬರು ಕಂಡರೆ ಆಗದ ಗೀತಾ ಹಾಗೂ ವಿಜಿ ಪ್ರೀತಿಸುತ್ತಾರೆ. ಇವರ ಮದುವೆಗೆ ನೂರೆಂಟು ವಿಘ್ನಗಳಾದರೂ ಕೊನೆಗೆ ಮದುವೆ ಆಗುತ್ತಾರೆ. ವಿಜಿ ಚಿಕ್ಕಮ್ಮ ಭಾನುಮತಿ, ಆಸ್ತಿ ಆಸೆಗೆ ಅಣ್ಣನ ಜೊತೆ ಸೇರಿ ಕೈ ಹಿಡಿದ ಗಂಡನನ್ನೇ ಕೊಲೆ ಮಾಡುತ್ತಾಳೆ. ವಿಜಯ್‌ ಹೆತ್ತ ಅಮ್ಮ, ಗೀತಾ ತಂದೆಯನ್ನೂ ಕೊಲೆ ಮಾಡುವ ಯತ್ನ ಮಾಡುತ್ತಾಳೆ. ಆರಂಭದಲ್ಲಿ ವಿಜಯ್‌ ತನ್ನ ಚಿಕ್ಕಮ್ಮನನ್ನು ದೇವರು ಎಂದು ನಂಬುತ್ತಾನೆ. ಆದರೆ ಈಗ ಅವನಿಗೆ ಎಲ್ಲವೂ ಗೊತ್ತಾಗಿದೆ. ಭಾನುಮತಿ ಹಾಗೂ ಅವಳ ಅಣ್ಣ ಸಿತಾರಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಸ್ಥಿತಿ ಬಂದಿದೆ.

ಅಕ್ಟೋಬರ್‌ 23ರಿಂದ ಬೃಂದಾವನ ಆರಂಭ

ಇನ್ನು ಅಕ್ಟೋಬರ್‌ 23 ರಿಂದ ಆರಂಭವಾಗುತ್ತಿರುವ ಹೊಸ ಧಾರಾವಾಹಿ 'ಬೃಂದಾವನ' ಕೂಡಾ ಸಾಕಷ್ಟು ಕುತೂಹಲ ಮೂಡಿಸಿದೆ. ವಾಹಿನಿಯು ಹಂಚಿಕೊಂಡಿರುವ ಪ್ರೋಮೋದಲ್ಲಿ 36 ಸದಸ್ಯರು ವಾಸಿಸುವ ತುಂಬು ಕುಟುಂಬದ ಕಥೆ ಹೊಂದಿದೆ. ಮನೆ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡುವಾಗ ಏನೋ ತಪ್ಪು ನಡೆಯುತ್ತದೆ ಎಂಬುದನ್ನು ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ನೋಡಬಹುದು. ಹೊಸ ಧಾರಾವಾಹಿಯಲ್ಲಿ ಕನ್ನಡತಿ ಖ್ಯಾತಿಯ ಚಿತ್ಕಳಾ ಬಿರಾದಾರ್‌ ಮನೆಯ ಹಿರಿಯಜ್ಜಿ ಪಾತ್ರದಲ್ಲಿ ನಟಿಸಿದ್ದಾರೆ. ಹೊಸ ಧಾರಾವಾಹಿ ನೋಡಲು ವೀಕ್ಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

IPL_Entry_Point