ಕನ್ನಡ ಸುದ್ದಿ  /  ಮನರಂಜನೆ  /  Rakshit Shetty: ಮತ ಚಲಾವಣೆ ಕರ್ತವ್ಯ ಮುಗಿಸಿ ಸಿನಿಮಾ ಸ್ಕ್ರಿಪ್ಟ್‌ ಬರೆಯೋಕೆ ಅಮೆರಿಕ ಫ್ಲೈಟ್‌ ಹತ್ತಲು ಸಜ್ಜಾದ ನಟ ರಕ್ಷಿತ್‌ ಶೆಟ್ಟಿ

Rakshit Shetty: ಮತ ಚಲಾವಣೆ ಕರ್ತವ್ಯ ಮುಗಿಸಿ ಸಿನಿಮಾ ಸ್ಕ್ರಿಪ್ಟ್‌ ಬರೆಯೋಕೆ ಅಮೆರಿಕ ಫ್ಲೈಟ್‌ ಹತ್ತಲು ಸಜ್ಜಾದ ನಟ ರಕ್ಷಿತ್‌ ಶೆಟ್ಟಿ

ಸ್ಕಿಪ್ಟ್‌ ಕೆಲಸ ಇನ್ನು ಸ್ವಲ್ಪವಷ್ಟೇ ಬಾಕಿ ಉಳಿದಿದೆಯಂತೆ. ಅಮೆರಿಕದಲ್ಲಿ ಹಗಲು ಇದ್ದರೆ ಭಾರತದಲ್ಲಿ ರಾತ್ರಿ, ಇಲ್ಲಿ ರಾತ್ರಿಯಾಗಿದ್ದರೆ ಅಮೆರಿಕದಲ್ಲಿ ಹಗಲು ಇರುತ್ತದೆ. ಸ್ಕ್ರಿಪ್ಟ್‌ ಬರೆಯಲು ಯಾವ ಡಿಸ್ಟರ್ಬೆನ್ಸ್‌ ಇರುವುದಿಲ್ಲ, ಯಾವ ಫೋನ್‌ ತೊಂದರೆಯೂ ಇರುವುದಿಲ್ಲ ಎಂಬ ಕಾರಣಕ್ಕೆ ರಕ್ಷಿತ್‌ ಶೆಟ್ಟಿ ಅಮೆರಿಕಾ ತೆರಳುತ್ತಿದ್ದಾರಂತೆ.

ರಕ್ಷಿತ್‌ ಶೆಟ್ಟಿ
ರಕ್ಷಿತ್‌ ಶೆಟ್ಟಿ

ನಮ್‌ ಏರಿಯಾಲ್‌ ಒಂದ್‌ ದಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಈಗ ಕನ್ನಡ ಚಿತ್ರರಂಗದ ಸ್ಟಾರ್‌ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ಎರಡು ಸಿನಿಮಾಗಳಿವೆ. ಬೆಳಗ್ಗೆಯಷ್ಟೇ ತಮ್ಮ ಹುಟ್ಟೂರಿನಲ್ಲಿ ಮತದಾನ ಮಾಡಿದ ರಕ್ಷಿತ್‌ ಶೆಟ್ಟಿ ಸಂಜೆ ಅಮೆರಿಕಾಗೆ ಹೊರಡಲು ಸಿದ್ಧರಾಗಿದ್ದಾರೆ.

ಇಂದು ಮತ ಚಲಾಯಿಸಲು ಕಾಯುತ್ತಿದ್ದ ರಕ್ಷಿತ್‌ ಶೆಟ್ಟಿ ಸಂಜೆ ಅಮೆರಿಕಾಗೆ ತೆರಳಲು ರೆಡಿಯಾಗುತ್ತಿದ್ದಾರಂತೆ. ಅದೂ ಕೂಡಾ ಸ್ಕ್ರಿಪ್ಟ್‌ ಬರೆಯಲು. 777 ಚಾರ್ಲಿ ಸಿನಿಮಾ ನಂತರ ವಸಂತ ಮುಲ್ಲೈ ಎಂಬ ತಮಿಳು-ಕನ್ನಡ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಕಾಡಿತ್ತು. ಸದ್ಯಕ್ಕೆ ರಕ್ಷಿತ್‌ ಶೆಟ್ಟಿ ರಿಚರ್ಡ್‌ ಆಂಟೋನಿ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್‌ ಬರೆಯಲು ನಾನು ಅಮೆರಿಕ ತೆರಳುತ್ತಿದ್ದೇನೆ ಎಂದು ಸ್ವತ: ರಕ್ಷಿತ್‌ ಶೆಟ್ಟಿ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.

ರಕ್ಷಿತ್‌ ಶೆಟ್ಟಿ ಈಗಾಗಲೇ ರಿಚರ್ಡ್‌ ಆಂಟೋನಿ ಸಿನಿಮಾ ಸ್ಕ್ರಿಪ್ಟ್‌ ಬರೆಯಲು ಆರಂಭಿಸಿದ್ದಾರೆ. ಸ್ಕಿಪ್ಟ್‌ ಕೆಲಸ ಇನ್ನು ಸ್ವಲ್ಪವಷ್ಟೇ ಬಾಕಿ ಉಳಿದಿದೆಯಂತೆ. ಅಮೆರಿಕದಲ್ಲಿ ಹಗಲು ಇದ್ದರೆ ಭಾರತದಲ್ಲಿ ರಾತ್ರಿ, ಇಲ್ಲಿ ರಾತ್ರಿಯಾಗಿದ್ದರೆ ಅಮೆರಿಕದಲ್ಲಿ ಹಗಲು ಇರುತ್ತದೆ. ಸ್ಕ್ರಿಪ್ಟ್‌ ಬರೆಯಲು ಯಾವ ಡಿಸ್ಟರ್ಬೆನ್ಸ್‌ ಇರುವುದಿಲ್ಲ, ಯಾವ ಫೋನ್‌ ತೊಂದರೆಯೂ ಇರುವುದಿಲ್ಲ ಎಂಬ ಕಾರಣಕ್ಕೆ ರಕ್ಷಿತ್‌ ಶೆಟ್ಟಿ ಅಮೆರಿಕಾ ತೆರಳುತ್ತಿದ್ದಾರಂತೆ.

ರಿಚರ್ಡ್‌ ಆಂಟನಿ ಸಿನಿಮಾವನ್ನು ಸ್ವತ: ರಕ್ಷಿತ್‌ ಶೆಟ್ಟಿ ನಿರ್ದೇಶಿಸುತ್ತಿದ್ದು ನಾಯಕನಾಗಿ ನಟಿಸುತ್ತಿದ್ದಾರೆ. ಇದು 2013ರಲ್ಲಿ ತೆರೆ ಕಂಡ ಉಳಿದವರು ಕಂಡಂತೆ ಸಿನಿಮಾ ಪ್ರೀಕ್ವೆಲ್‌ ಎನ್ನಲಾಗಿದೆ. ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ಅಭಿನಯ ಮತ್ತೊಂದು ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್‌ ಮುಗಿದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ರಿಚರ್ಡ್‌ ಆಂಟನಿ ಚಿತ್ರೀಕರಣ ಆರಂಭವಾಗಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

ತಮ್ಮ ಬಾಯಿಂದ ಸಿಗರೇಟ್‌ ತೆಗೆದು ವಿಷ್ಣುವರ್ಧನ್‌ ಬಾಯಿಗೆ ಇಟ್ಟ ರಜನಿಕಾಂತ್‌; ಅಪರೂಪದ ವಿಡಿಯೋ ವೈರಲ್‌

ಭಗವಂತ ಮುತ್ಯಾಲಪ್ಪ ಎಂಬ ವಿಷ್ಣುವರ್ಧನ್‌ ಅಭಿಮಾನಿ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ವಿಷ್ಣು ಹಾಗೂ ರಜನಿಕಾಂತ್‌ ಸ್ನೇಹದ ಬಗ್ಗೆ ಕೇಳಿದ್ದೆವು. ಆದರೆ ಈ ವಿಡಿಯೋ ನೋಡಿದ ನಂತರ ಅವರು ಎಷ್ಟು ಆತ್ಮೀಯರಾಗಿದ್ದರು ಎಂಬುದು ತಿಳಿಯುತ್ತಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಕೀರ್ತಿ ಸುರೇಶ್‌ ನಟನೆಯ ಮಹಾನಟಿ ಚಿತ್ರಕ್ಕೆ 5ರ ಸಂಭ್ರಮ; ಯಾರಿಂದಲೂ ಮರೆಯಲು ಸಾಧ್ಯವಿಲ್ಲ 2 ಹನಿ ಕಣ್ಣೀರಿನ ದೃಶ್ಯ

ಮಹಾನಟಿ ಚಿತ್ರದ ಅನೇಕ ದೃಶ್ಯಗಳು ಪ್ರೇಕ್ಷಕರ ಕಣ್ಣಿನಲ್ಲಿ ಇನ್ನೂ ಹಸಿರಾಗಿದೆ. ಅದರಲ್ಲೂ 2 ಹನಿ ಕಣ್ಣೀರಿನ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗಂತೂ ಅನೇಕ ಕಲಾವಿದರು ಎಮೋಷನಲ್‌ ದೃಶ್ಯಕ್ಕೆ ಗ್ಲಿಸರಿನ್‌ ಬಳಸುತ್ತಾರೆ. ಆದರೆ ಕೆಲವೇ ಕೆಲವು ನಟ-ನಟಿಯರು ನೈಸರ್ಗಿಕವಾಗಿ ಅಭಿನಯಿಸುತ್ತಾರೆ. ನಟಿ ಸಾವಿತ್ರಿ ಕೂಡಾ ಸಿನಿಮಾವೊಂದರ ಭಾವುಕ ದೃಶ್ಯದಲ್ಲಿ ನೈಜವಾಗಿ ಅಭಿನಯಿಸಿದ್ದರು. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ

IPL_Entry_Point