ಕನ್ನಡ ಸುದ್ದಿ  /  ಮನರಂಜನೆ  /  Vishnuvardhan: ತಮ್ಮ ಬಾಯಿಂದ ಸಿಗರೇಟ್‌ ತೆಗೆದು ವಿಷ್ಣುವರ್ಧನ್‌ ಬಾಯಿಗೆ ಇಟ್ಟ ರಜನಿಕಾಂತ್‌; ಅಪರೂಪದ ವಿಡಿಯೋ ವೈರಲ್‌

Vishnuvardhan: ತಮ್ಮ ಬಾಯಿಂದ ಸಿಗರೇಟ್‌ ತೆಗೆದು ವಿಷ್ಣುವರ್ಧನ್‌ ಬಾಯಿಗೆ ಇಟ್ಟ ರಜನಿಕಾಂತ್‌; ಅಪರೂಪದ ವಿಡಿಯೋ ವೈರಲ್‌

ತೆರೆ ಹಿಂದೆ ಕೂಡಾ ರಜನಿ ಹಾಗೂ ವಿಷ್ಣು ಬಹಳ ಆಪ್ತರು. ಅನೇಕ ಇಂಟರ್‌ವ್ಯೂಗಳಲ್ಲಿ ರಜನಿಕಾಂತ್‌ ತಮ್ಮ ಹಾಗೂ ವಿಷ್ಣು ಅವರ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ. ಒಮ್ಮೆ ರಜನಿಕಾಂತ್‌, ಕಮಲ್‌ ಹಾಸನ್‌ಗೆ ನೀಡಿದ ಫೋಟೋ ಗಿಫ್ಟ್‌ವೊಂದರಲ್ಲಿ ವಿಷ್ಣು ಅವರ ಫೋಟೋವನ್ನು ಕೂಡಾ ಸೇರಿಸಿಕೊಂಡಿದ್ದರು.

ರಜನಿಕಾಂತ್‌ ವಿಷ್ಣುವರ್ಧನ್‌ ಅಪರೂಪದ ವಿಡಿಯೋ
ರಜನಿಕಾಂತ್‌ ವಿಷ್ಣುವರ್ಧನ್‌ ಅಪರೂಪದ ವಿಡಿಯೋ (PC: Bhagavantha Muthyalappa Facebook)

ಸಾಹಸಿಂಹ ಡಾ ವಿಷ್ಣುವರ್ಧನ್‌ ಇನ್ನು ನಮ್ಮೊಂದಿಗೆ ಇಲ್ಲ. ಅಭಿನಯ ಭಾರ್ಗವ, ಹೃದಯವಂತನನ್ನು ಅಭಿಮಾನಿಗಳು ಸದಾ ತಮ್ಮ ಹೃದಯ ಸಿಂಹಾಸನದಲ್ಲಿ ಇಟ್ಟು ಆರಾಧಿಸುತ್ತಿದ್ದಾರೆ. ಹಾಗೇ ತಮಿಳುನಾಡಿನಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌, ಅಭಿಮಾನಿಗಳ ಪ್ರೀತಿಯ ತಲೈವಾ ಆಗಿ ಮೆರೆಯುತ್ತಿದ್ದಾರೆ. ಇವರಿಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ನೋಡುವ ಅವಕಾಶ ದೊರೆತರೆ ಅದು ಅಭಿಮಾನಿಗಳ ಪಾಲಿನ ಹಬ್ಬವೇ ಸರಿ.

ಟ್ರೆಂಡಿಂಗ್​ ಸುದ್ದಿ

ಇದನ್ನೂ ಓದಿ: ದರ್ಶನ್‌ ಫೋಟೋ ಮೇಲೆ ಲವ್‌ ಯೂ ಎಂದು ಆಟೋಗ್ರಾಫ್‌ ಬರೆದ ಸುದೀಪ್‌; ಇದು ಕನಸೋ ನನಸೋ ಗೊತ್ತಾಗ್ತಿಲ್ಲ ಎಂದ ಅಭಿಮಾನಿಗಳು

ವಿಷ್ಣುವರ್ಧನ್‌ ಹಾಗೂ ರಜನಿಕಾಂತ್‌ ಸಹೋದರರ ಸವಾಲ್‌, ಕಿಲಾಡಿ ಕಿಟ್ಟು ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡಾ ರಜನಿ ಹಾಗೂ ವಿಷ್ಣು ಬಹಳ ಆಪ್ತರು. ಅನೇಕ ಇಂಟರ್‌ವ್ಯೂಗಳಲ್ಲಿ ರಜನಿಕಾಂತ್‌ ತಮ್ಮ ಹಾಗೂ ವಿಷ್ಣು ಅವರ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ. ಒಮ್ಮೆ ರಜನಿಕಾಂತ್‌, ಕಮಲ ಹಾಸನ್‌ಗೆ ನೀಡಿದ ಫೋಟೋ ಗಿಫ್ಟ್‌ವೊಂದರಲ್ಲಿ ವಿಷ್ಣು ಅವರ ಫೋಟೋವನ್ನು ಕೂಡಾ ಸೇರಿಸಿಕೊಂಡಿದ್ದರು. ತಮಿಳಿನಲ್ಲಿ ನನಗೆ ಸಿನಿಮಾ ಅವಕಾಶಕ್ಕಾಗಿ ಟ್ರೈ ಮಾಡುವಂತೆ ಪ್ರೇರಿಪಿಸಿದವರಲ್ಲಿ ವಿಷ್ಣುವರ್ಧನ್‌ ಮೊದಲಿಗರು. ಇಂದು ನಾನು ಸ್ಟಾರ್‌ ನಟ ಎನಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ವಿಷ್ಣು ಅವರೇ ಕಾರಣ ಎಂದು ರಜನಿಕಾಂತ್‌ ಹೇಳಿಕೊಂಡಿದ್ದರಿ. ಇದೀಗ ಇವರಿಬ್ಬರೂ ಒಟ್ಟಿಗೆ ಇರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋ ಬಹುಶ: 1990ರ ದಶಕದಲ್ಲಿ ತೆಗೆಯಲಾದ ವಿಡಿಯೋ ಇರಬಹುದು. ಇದರಲ್ಲಿ ರಜನಿಕಾಂತ್‌ ತಮ್ಮ ಬಾಯಲ್ಲಿ ಸಿಗರೇಟ್‌ ಇಟ್ಟು ಲೈಟರ್‌ ಸಹಾಯದಿಂದ ಫೈರ್‌ ಮಾಡುತ್ತಾರೆ. ನಂತರ ವಿಷ್ಣು ನನಗೂ ಬೇಕು ಎಂದು ಸನ್ನೆ ಮಾಡಿ ತೋರಿಸುತ್ತಾರೆ. ಆಗ ರಜನಿಕಾಂತ್‌ ತಮ್ಮ ಬಾಯಲ್ಲಿದ್ದ ಸಿಗರೇಟ್‌ ತೆಗೆದು ವಿಷ್ಣು ಬಾಯಿಯಲ್ಲಿ ಇಡುತ್ತಾರೆ. ವಿಷ್ಣುವರ್ಧನ್‌ ಸ್ಟೈಲ್‌ ಆಗಿ ಸಿಗರೇಟ್‌ ಹಿಡಿದು ಹೊಗೆ ಬಿಡುತ್ತಾರೆ. ಒಬ್ಬರಿಗೊಬ್ಬರು ನೋಡಿಕೊಂಡು ಸ್ಮೈಲ್‌ ಮಾಡುತ್ತಾರೆ. ಆಗ ರಜನಿಕಾಂತ್‌ ವಿಷ್ಣು ಭುಜ ಹಿಡಿದು ಏನೋ ಹೇಳುತ್ತಾರೆ.

ಮದುವೆ ಆಗಲೆಂದೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೀರ ಎಂದವರಿಗೆ ಕಾನೂನು ಪಾಠ ಮಾಡಿದ ಖುಷ್ಬೂ ಸುಂದರ್‌

ಈ ವಿಡಿಯೋ ಅಪರೂಪದಲ್ಲಿ ಅಪರೂಪದ ವಿಡಿಯೋ. ಭಗವಂತ ಮುತ್ಯಾಲಪ್ಪ ಎಂಬ ವಿಷ್ಣುವರ್ಧನ್‌ ಅಭಿಮಾನಿ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ವಿಷ್ಣು ಹಾಗೂ ರಜನಿಕಾಂತ್‌ ಸ್ನೇಹದ ಬಗ್ಗೆ ಕೇಳಿದ್ದೆವು. ಆದರೆ ಈ ವಿಡಿಯೋ ನೋಡಿದ ನಂತರ ಅವರು ಎಷ್ಟು ಆತ್ಮೀಯರಾಗಿದ್ದರು ಎಂಬುದು ತಿಳಿಯುತ್ತಿದೆ. ಈ ವಿಡಿಯೋದಲ್ಲಿ ಇಬ್ಬರ ಸ್ಮೈಲ್‌ ನಮ್ಮನ್ನು ಸೆಳೆಯುತ್ತಿದೆ. ನೋಡಿದರೆ ಮತ್ತಷ್ಟು ನೋಡಬೇಕು ಎನಿಸುತ್ತದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

IPL_Entry_Point