ಕನ್ನಡ ಸುದ್ದಿ  /  ಮನರಂಜನೆ  /  Chaya Singh: ಅಮೃತಧಾರೆ ಮೂಲಕ ಮತ್ತೆ ಕನ್ನಡಕ್ಕೆ ಬಂದ ಛಾಯಾಸಿಂಗ್‌; ರಾಜೇಶ್‌ ನಟರಂಗ ಜೊತೆ ಜಗಳಕ್ಕೆ ನಿಂತ ತುಂಟಾಟ ಸಿನಿಮಾ ನಟಿ

Chaya Singh: ಅಮೃತಧಾರೆ ಮೂಲಕ ಮತ್ತೆ ಕನ್ನಡಕ್ಕೆ ಬಂದ ಛಾಯಾಸಿಂಗ್‌; ರಾಜೇಶ್‌ ನಟರಂಗ ಜೊತೆ ಜಗಳಕ್ಕೆ ನಿಂತ ತುಂಟಾಟ ಸಿನಿಮಾ ನಟಿ

ಈಗಾಗಲೇ ಅಮೃತಧಾರೆ ಹೆಸರಿನ ಧಾರಾವಾಹಿ ಪ್ರಸಾರವಾಗಿ ಫೇಮಸ್‌ ಆಗಿದೆ. ಇದೀಗ ಅದೇ ಹೆಸರಿನಲ್ಲಿ ಮತ್ತೆ ಜೀ ಕನ್ನಡದಲ್ಲಿ ಹೊಸ ಸೀರಿಯಲ್‌ ಪ್ರಸಾರವಾಗುತ್ತಿದೆ. ವಾಹಿನಿ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಂಡಿದ್ದು ಛಾಯಾಸಿಂಗ್‌ - ರಾಜೇಶ್‌ ಜಗಳದ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ.

ಜೀ ಕನ್ನಡದ ಹೊಸ ಧಾರಾವಾಹಿ ಪ್ರೋಮೋ
ಜೀ ಕನ್ನಡದ ಹೊಸ ಧಾರಾವಾಹಿ ಪ್ರೋಮೋ (PC: Zee Kannada)

ಬಹಳ ದಿನಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಪ್ರತಿಭಾನ್ವಿತ ನಟಿ ಛಾಯಾಸಿಂಗ್‌ ಇದೀಗ ಮತ್ತೆ ವಾಪಸ್‌ ಬಂದಿದ್ದಾರೆ. ಈ ಬಾರಿ ಅವರು 'ಅಮೃತಧಾರೆ'ಯಾಗಿ ಮತ್ತೊಂದು ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ. ಛಾಯಾಸಿಂಗ್‌ ಕಿರುತೆರೆ ಮೂಲಕ ಮತ್ತೆ ಕನ್ನಡಕ್ಕೆ ವಾಪಸ್‌ ಬಂದಿದ್ದಾರೆ. ಅಮೃತಧಾರೆ ಎಂಬ ಹೊಸ ಧಾರಾವಾಹಿಯಲ್ಲಿ ಛಾಯಾ ನಟಿಸುತ್ತಿದ್ದಾರೆ.

ರಜಪೂತ್‌ ಕುಟುಂಬಕ್ಕೆ ಸೇರಿದ ಛಾಯಾಸಿಂಗ್‌ ಹುಟ್ಟಿ ಬೆಳೆದ್ದು ಬೆಂಗಳೂರಿನಲ್ಲಿ. 2000ರಲ್ಲಿ ತೆರೆ ಕಂಡ ಮುನ್ನುಡಿ ಚಿತ್ರದ ಉನ್ನಿಸಾ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಛಾಯಾಸಿಂಗ್‌ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಹೆಸರಾದರು. ಚಿಟ್ಟೆ, ರಾಷ್ಟ್ರಗೀತೆ, ತುಂಟಾಟ ಕನ್ನಡ ಸಿನಿಮಾಗಳಲ್ಲಿ ನಟಿಸಿದ ನಂತರ ತಿರುಡ ತಿರುಡಿ ಚಿತ್ರದ ಮೂಲಕ ತಮಿಳು ಸಿನಿಮಾಗೆ ಹೋದರು. ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಛಾಯಾ ನಟಿಸಿದ್ದಾರೆ. ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗದಿಂದ ದೂರಾದ ಛಾಯಾ ಸಿಂಗ್‌, ಗ್ಯಾಪ್‌ ನಂತರ ಖಾಕಿ ಸಿನಿಮಾದಲ್ಲಿ ನಟಿಸಿದರು. ನಂತರ ನಂದಿನಿ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ಇದೀಗ ಮತ್ತೆ ಅವರು 'ಅಮೃತಧಾರೆ' ಧಾರಾವಾಹಿ ಮೂಲಕ ವಾಪಸ್‌ ಬಂದಿದ್ದಾರೆ. ಈ ಧಾರಾವಾಹಿಯಲ್ಲಿ ರಾಜೇಶ್‌ ನಟರಂಗ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಅಮೃತಧಾರೆ ಹೆಸರಿನ ಧಾರಾವಾಹಿ ಪ್ರಸಾರವಾಗಿ ಫೇಮಸ್‌ ಆಗಿದೆ. ಇದೀಗ ಅದೇ ಹೆಸರಿನಲ್ಲಿ ಮತ್ತೆ ಜೀ ಕನ್ನಡದಲ್ಲಿ ಹೊಸ ಸೀರಿಯಲ್‌ ಪ್ರಸಾರವಾಗುತ್ತಿದೆ. ವಾಹಿನಿ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಂಡಿದ್ದು ಛಾಯಾಸಿಂಗ್‌ - ರಾಜೇಶ್‌ ಜಗಳದ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ. ಶೀಘ್ರದಲ್ಲೇ ವಾಹಿನಿ ಧಾರಾವಾಹಿ ಪ್ರಸಾರವಾಗುವ ದಿನಾಂಕ ಘೋಷಿಸಲಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ

ನೀಳ ಕೇಶರಾಶಿಗೆ ಕತ್ತರಿ ಹಾಕಿದ ಪುಟ್ಟಗೌರಿ ಸಾನ್ಯಾ ಅಯ್ಯರ್‌; ಹೊಸ ಹೇರ್‌ಸ್ಟೈಲ್‌ ಚೆನ್ನಾಗಿಲ್ಲ ಎಂದು ಬೇಸರಗೊಂಡ ಹುಡುಗರು

ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್‌ ಬಿಗ್‌ಬಾಸ್‌ನಿಂದ ಹೊರಗೆ ಬಂದಾಗಿನಿಂದ ಸಾಕಷ್ಟು ಜನರ ಪ್ರೀತಿ, ಅಭಿಮಾನ ಗಳಿಸಿದ್ಧಾರೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಸಾನ್ಯಾ ಹಂಚಿಕೊಂಡಿರುವ ವಿಡಿಯೋ ನೋಡಿ ಅವರ ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದಾರೆ. ಸಾನ್ಯಾ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಯೂಟ್ಯೂಬರ್‌ಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಆರಾಧ್ಯಗೆ ಜಯ; ವಿಡಿಯೋಗಳನ್ನು ತೆಗೆಯುವಂತೆ ಕೋರ್ಟ್‌ ಸೂಚನೆ

ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ದೆಹಲಿ ಕೋರ್ಟ್‌ ಮೆಟ್ಟಿಲೇರಿದ್ದ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಪುತ್ರಿ ಆರಾಧ್ಯ ರೈ ಬಚ್ಚನ್‌ಗೆ ಗೆಲುವು ದೊರೆತಿದೆ. ಆರಾಧ್ಯ ಆರೋಗ್ಯ ಕುರಿತು ಸುಳ್ಳು ಮಾಹಿತಿ ಪ್ರಕಟಿಸದಂತೆ ಹೈ ಕೋರ್ಟ್‌ ಯೂಟ್ಯೂಬ್‌ ಚಾನೆಲ್‌ಗಳಿಗೆ ಎಚ್ಚರಿಸಿದೆ. ಪೂರ್ತಿ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

 

IPL_Entry_Point