ಕನ್ನಡ ಸುದ್ದಿ  /  Entertainment  /  With Whom Ramya Acting In Uttarakaanda Movie

Shivarajkumr in Uttarakaanda: 'ಉತ್ತರಕಾಂಡ'ಕ್ಕೆ ಶಿವಣ್ಣ ಎಂಟ್ರಿ... ರಮ್ಯಾ ಜೋಡಿ ಆಗ್ತಿರೋದು ಯಾರಿಗೆ , ಶಿವರಾಜ್‌ಕುಮಾರ್‌ ಅಥವಾ ಡಾಲಿ?

'ಉತ್ತರಕಾಂಡ' ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸಲಿದ್ದಾರೆ ಎಂಬ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಮ್ಯಾ, ಶಿವಣ್ಣಗೆ ಜೋಡಿಯಾಗಲಿದ್ದಾರಾ ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೋಡಿ ಆಗ್ತಿರೋದು ಧನಂಜಯ್‌ ಅಥವಾ ಶಿವರಾಜ್‌ ಕುಮಾರ್‌ ಅವರಿಗಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿರುವ ಧನಂಜಯ್
'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿರುವ ಧನಂಜಯ್

ಸ್ಯಾಂಡಲ್‌ವುಡ್‌ ಮೋಹಕತಾರೆ ರಮ್ಯಾ ಆಕ್ಟಿಂಗ್‌ಗೆ ಕಮ್‌ ಬ್ಯಾಕ್‌ ಮಾಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಾರಿ ಅವರು ನಿರ್ಮಾಪಕಿಯಾಗಿ ಕೂಡಾ ವಾಪಸಾಗಿರೋದು ವಿಶೇಷ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿ ನಟಿಸಬೇಕಿದ್ದ ರಮ್ಯಾ ನಂತರ 'ಉತ್ತರಕಾಂಡ' ಸಿನಿಮಾ ತಂಡ ಸೇರಿಕೊಂಡರು. ಮತ್ತೆ ರಮ್ಯಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ್‌ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಕೂಡಾ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಚಿತ್ರದ ಮುಹೂರ್ತ ನೆರವೇರಿದ್ದು ಶೂಟಿಂಗ್‌ ಕೂಡಾ ಆರಂಭವಾಗುತ್ತಿದೆ. ಕಾರ್ತಿಕ್‌ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸುತ್ತಿರುವ ವಿಚಾರವನ್ನು ಚಿತ್ರದ ನಿರ್ದೇಶಕ ರೋಹಿತ್‌ ಪದಕಿ ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ರಮ್ಯಾ ಜೋಡಿ ಆಗ್ತಿರೋದು ಯಾರಿಗೆ ಎಂಬ ಅನುಮಾನ ಶುರುವಾಗಿದೆ.

ರಮ್ಯಾ ಹಾಗೂ ಶಿವರಾಜ್‌ಕುಮಾರ್‌ 'ಆರ್ಯನ್‌' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ 2014ರಲ್ಲಿ ತೆರೆ ಕಂಡಿತ್ತು. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಆರ್ಯನ್‌ ಆಗಿ, ಅವರ ಪ್ರೇಮಿ ಶ್ವೇತಾ ಆಗಿ ರಮ್ಯ ನಟಿಸಿದ್ದರು. ಡ್ರೀಮ್‌ ವೀವರ್‌ ಬ್ಯಾನರ್‌ ಅಡಿಯಲ್ಲಿ ರಾಜೇಂದ್ರ ಬಾಬು ಹಾಗೂ ಚಿ ಗುರುದತ್‌ ಜೊತೆ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ನಂತರ ಮತ್ತೆ ಶಿವಣ್ಣ ಹಾಗೂ ರಮ್ಯಾ ಜೊತೆಯಾಗಿ ನಟಿಸಿರಲಿಲ್ಲ. ಇದೀಗ 'ಉತ್ತರಕಾಂಡ' ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸಲಿದ್ದಾರೆ ಎಂಬ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಮ್ಯಾ, ಶಿವಣ್ಣಗೆ ಜೋಡಿಯಾಗಲಿದ್ದಾರಾ ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೋಡಿ ಆಗ್ತಿರೋದು ಧನಂಜಯ್‌ ಅಥವಾ ಶಿವರಾಜ್‌ ಕುಮಾರ್‌ ಅವರಿಗಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಹೊಸ ಚಿತ್ರದಲ್ಲಿ ರಮ್ಯಾ-ಡಾಲಿ ಜೋಡಿ?

'ಉತ್ತರಕಾಂಡ' ಚಿತ್ರದಲ್ಲಿ ರಮ್ಯಾ ಹಾಗೂ ಡಾಲಿ ಜೋಡಿಯಾಗಿ ನಟಿಸುತ್ತಿದ್ದಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಈ ನಡುವೆ, ಮತ್ತೊಂದು ಹೊಸ ಚಿತ್ರದಲ್ಲಿ ಅವರು ಜೊತೆಯಾಗಿ ನಟಿಸುತ್ತಿದ್ಧಾರೆ ಎಂಬ ಮಾತು ಕೇಳಿಬಂದಿದೆ. ಕೆಲವು ದಿನಗಳ ಹಿಂದೆ ನಟ ಧನಂಜಯ್‌ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೈತ ಹೋರಾಟಗಾರ, ಪ್ರೊಫೆಸರ್‌ ಎಂ.ಡಿ. ನಂಜುಂಡಸ್ವಾಮಿ ಅವರ ಬಯೋಪಿಕ್‌ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಅವರ ಜೀವನ ಚರಿತ್ರೆ ಸಿನಿಮಾ ತೆರೆಗೆ ಬರುತ್ತಿದೆ ಎನ್ನಲಾಗಿದೆ. ಎಂ.ಡಿ. ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಯೋಪಿಕ್‌ ಬಗ್ಗೆ ಮಾಹಿತಿ ನೀಡಿದ್ದು, ನಟ ಧನಂಜಯ್‌ ಈ ವಿಚಾರವಾಗಿ ತಮ್ಮೊಂದಿಗೆ ಮಾತನಾಡಿದ್ದಾರೆ ಎಂದಿದ್ದಾರೆ. ಪ್ರೊ ಎಂ.ಡಿ. ನಂಜುಂಡಸ್ವಾಮಿ ಅವರ ಕುರಿತಾದ ಸಿನಿಮಾ ಮಾಡುವ ಸುದ್ದಿ ಬಹಳ ದಿನಗಳ ಹಿಂದೆಯೇ ಕೇಳಿಬಂದಿತ್ತು. ಈ ಪಾತ್ರಕ್ಕಾಗಿ ಸ್ಯಾಂಡಲ್‌ವುಡ್‌ನಲ್ಲಿ ವಿವಿಧ ನಟರ ಹೆಸರು ಕೂಡಾ ಕೇಳಿಬಂದಿತ್ತು. ಆದರೆ ಇದೀಗ ಧನಂಜಯ್‌ ಹೆಸರು ಫೈನಲ್‌ ಆಗಿದೆ ಎನ್ನಲಾಗಿದೆ.

ಚಿತ್ರದಲ್ಲಿ ಧನಂಜಯ್‌, ಪ್ರೊಫೆಸರ್‌ ಎಂ.ಡಿ. ನಂಜುಂಡಸ್ವಾಮಿ ಅವರ ಪಾತ್ರದಲ್ಲಿ ನಟಿಸುತ್ತಿದ್ದರೆ, ಅವರ ಪತ್ನಿ ಪ್ರತಿಮಾ ನಂಜುಂಡಸ್ವಾಮಿ ಪಾತ್ರದಲ್ಲಿ ರಮ್ಯಾ, ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ತೆರೆಗೆ ತರುವ ಸಾಧ್ಯತೆ ಇದೆಯಂತೆ. ಹರಿವು, ನಾತಿಚರಾಮಿ, ಆಕ್ಟ್‌ 1978 ಸಿನಿಮಾಗಳು ನಿರ್ದೇಶಕ ಮಂಸೋರೆ, ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರೊಫೆಸರ್‌ ಎಂ.ಡಿ. ನಂಜುಂಡಸ್ವಾಮಿ ಬಯೋಪಿಕ್‌ ವಿಚಾರವಾಗಿ ಧನಂಜಯ್‌, ರಮ್ಯಾ ಅಥವಾ ಮಂಸೋರೆ ಆಗಲೀ ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

IPL_Entry_Point