ಕನ್ನಡ ಸುದ್ದಿ  /  Karnataka  /  Karnataka Election Special: Bs Yediyurappa Takes A Ride In His First Ever Car At Shikaripura News In Kannada Uks Watch

BS Yediyurappa takes a ride: ಗಮನಸೆಳೆಯಿತು ಯಡಿಯೂರಪ್ಪ ಕಾರ್‌ ರೈಡ್;‌ ಸೆಂಟಿಮೆಂಟ್‌ ಪ್ರದರ್ಶಿಸಿದ ಮಾಜಿ ಸಿಎಂ

BS Yediyurappa takes a ride: ಬಿ.ವೈ.ವಿಜಯೇಂದ್ರ (BS Vijayendra) ಶಿಕಾರಿಪುರ ಕ್ಷೇತ್ರ (Shikaripura constituency) ದಿಂದ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ʻಕಾರ್‌ ರೈಡ್‌ʼ ಗಮನಸೆಳೆಯಿತು.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಅವರ ಮೊದ ಮೊದಲ ಕಾರು
ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಅವರ ಮೊದ ಮೊದಲ ಕಾರು

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಅನೇಕ ಹೊಸತನಗಳಿಗೆ, ವಿಶೇಷಗಳಿಗೆ ವೇದಿಕೆ ಒದಗಿಸುತ್ತ ಸಾಗುತ್ತಿದೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ (BJP) ಯ ಪ್ರಭಾವಿ ನಾಯಕ, ಮುತ್ಸದ್ದಿ ಬಿ.ಎಸ್.ಯಡಿಯೂರಪ್ಪ (BS Yediyurappa)ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅವರು ಚುನಾವಣಾ ರಾಜಕಾರಣದಿಂದ ನಿವೃತ್ತರಾಗಿದ್ದಾರೆ. ಆದರೆ, ಪಕ್ಷದ ಪರ ಪ್ರಚಾರ ಮುಂದುವರಿಸಿದ್ದಾರೆ. ಅವರ ಪ್ರತಿ ನಡೆಯೂ ಈಗ ಸುದ್ದಿಯ ಕೇಂದ್ರ ಬಿಂದುವಾಗಿ ಉಳಿದಿದೆ.

ಹೌದು, ಅವರ ಇಚ್ಛೆಯಂತೆಯೇ ಪುತ್ರ ಬಿ.ವೈ.ವಿಜಯೇಂದ್ರ (BS Vijayendra) ಗೆ ಪಕ್ಷ ಶಿಕಾರಿಪುರ ಕ್ಷೇತ್ರ (Shikaripura constituency) ದಿಂದ ಸ್ಪರ್ಧಿಸಲು ಟಿಕೆಟ್‌ ನೀಡಿದೆ. ಅವರು ಬುಧವಾರ (ಏ.19) ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಬಿಎಸ್‌ ಯಡಿಯೂರಪ್ಪ ಅವರು ಮತ್ತೆ ತಮ್ಮ ಮೊದ ಮೊದಲ ಅಂಬಾಸಡರ್‌ ಕಾರನ್ನು (old and vintage Ambassador car) ಬಳಸಿ ಗಮನಸೆಳೆದಿದ್ದಾರೆ. ಪಕ್ಷ ಸಂಘಟನೆ ಆರಂಭಿಸುವ ಕಾಲಘಟ್ಟದಲ್ಲಿ ರಾಜ್ಯಾದ್ಯಂತ ಪ್ರಯಾಣಕ್ಕೆಂದು ಖರೀದಿಸಿದ ಕಾರು ಅದು.

ಬಿಎಸ್‌ ಯಡಿಯೂರಪ್ಪ ಅವರು ಇತ್ತೀಚೆಗೆ ನ್ಯೂಸ್‌ ಫಸ್ಟ್‌ ಕನ್ನಡ ಸುದ್ದಿವಾಹಿನಿಯಲ್ಲಿ ಟಿಎನ್‌ ಸೀತಾರಾಮ್‌ ಅವರು ನಡೆಸಿ ಕೊಟ್ಟ ನಾನು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಈ ಕಾರಿನ ಬಗ್ಗೆ ಪ್ರಸ್ತಾಪಿಸಿದ್ದರು. ಡ್ರೈವಿಂಗ್‌ ಮಾಡಿರುವ ಬಗ್ಗೆಯೂ ಹೇಳಿಕೊಂಡಿದ್ದರು.

ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪ, ಬಿಎಸ್ ವಿಜಯೇಂದ್ರ ಅವರು 50 ಸಾವಿರ ಮತಗಳ ಬಹುಮತದಿಂದ ಗೆಲ್ಲುತ್ತಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಪಕ್ಷ ಮತ್ತು ಪ್ರಧಾನಿ ಮೋದಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳು ನಮಗೆ ಗೆಲುವು ತಂದುಕೊಡುತ್ತವೆ. ಶಿಕಾರಿಪುರದ ಮಟ್ಟಿಗೆ ಜನ ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡುತ್ತಿದ್ದು, 50 ಸಾವಿರ ಮತಗಳ ಬಹುಮತದಿಂದ ಗೆಲ್ಲಿಸುತ್ತಿದ್ದಾರೆ ಎಂದು ಅವರು ವಿ‍ಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, ಹೈಕಮಾಂಡ್ ತನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ನಾನು ಕರ್ನಾಟಕದ ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ. ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ನಾಮಪತ್ರ ಸಲ್ಲಿಸುವ ವೇಳೆ ಅವರು ಹೇಳಿದರು.

ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

IPL_Entry_Point