logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Phaluguna Amavasya 2023: ಮಂಗಳವಾರ ಬಂದಿದೆ ಅಮಾವಾಸ್ಯೆ; ತುಲಾ, ವೃಶ್ಚಿಕ, ಮಕರ, ಕುಂಭ, ಮೀನ ರಾಶಿಗಳ ಮಹಾ ಸಂಯೋಗದಲ್ಲಿ ಶನಿಯ ಅಶುಭ ಪರಿಣಾಮ

Phaluguna Amavasya 2023: ಮಂಗಳವಾರ ಬಂದಿದೆ ಅಮಾವಾಸ್ಯೆ; ತುಲಾ, ವೃಶ್ಚಿಕ, ಮಕರ, ಕುಂಭ, ಮೀನ ರಾಶಿಗಳ ಮಹಾ ಸಂಯೋಗದಲ್ಲಿ ಶನಿಯ ಅಶುಭ ಪರಿಣಾಮ

HT Kannada Desk HT Kannada

Mar 21, 2023 08:41 AM IST

ಆಂಜನೇಯ ಸ್ವಾಮಿ

  • Phaluguna Amavasya 2023: ಯುಗಾದಿ ಅಮಾವಾಸ್ಯೆ ಈ ಸಲ ಮಂಗಳವಾರ ಬಂದಿದೆ. ತುಲಾ, ವೃಶ್ಚಿಕ, ಮಕರ, ಕುಂಭ, ಮೀನ ರಾಶಿಗಳ ಮಹಾ ಸಂಯೋಗದಲ್ಲಿ ಶನಿಯ ಅಶುಭ ಪರಿಣಾಮಗಳು ಗೋಚರಿಸಬಹುದು. ಹನುಮಂತನ ಪೂಜೆಗೆ ವಿಶೇಷ ಮಹತ್ವ ಇದೆಯಂತೆ.

ಆಂಜನೇಯ ಸ್ವಾಮಿ
ಆಂಜನೇಯ ಸ್ವಾಮಿ (unsplash)

ಹಿಂದು ಧರ್ಮದಲ್ಲಿ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಈ ಬಾರಿಯ ಚೈತ್ರ ಅಮಾವಾಸ್ಯೆ ಮಂಗಳವಾರ ಬಂದಿದೆ. ಈ ಅಮಾವಾಸ್ಯೆಗೆ ಯುಗಾದಿ ಅಮಾವಾಸ್ಯೆ, ಫಾಲ್ಗುಣ ಅಮಾವಾಸ್ಯೆ, ಭೌಮಾವತಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಇದು ಮಂಗಳವಾರ ಬಂದಿರುವ ಕಾರಣ ತುಲಾ, ವೃಶ್ಚಿಕ, ಮಕರ, ಕುಂಭ, ಮೀನ ರಾಶಿಗಳ ಮಹಾ ಸಂಯೋಗದಲ್ಲಿ ಶನಿಯ ಅಶುಭ ಪರಿಣಾಮಗಳು ಗೋಚರಿಸಬಹುದು. ಮಂಗಳವಾರ ಆದ ಕಾರಣ ಹನುಮಂತನನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದು ಮುಖ್ಯ.

ತಾಜಾ ಫೋಟೊಗಳು

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಈ ದಿನ ಆಂಜನೇಯನನ್ನು ಶಾಸ್ತ್ರೋಕ್ತವಾಗಿ, ವ್ರತ ನಿಷ್ಠರಾಗಿ ಪೂಜಿಸುವುದರಿಂದ ವಿಶೇಷ ಫಲವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ದಿನ ಶನಿಯ ಅಶುಭ ಪ್ರಭಾವ ಹೆಚ್ಚಾಗಿರುತ್ತದೆ.

ಈ ಅವಧಿಯಲ್ಲಿ, ತುಲಾ, ವೃಶ್ಚಿಕ ಮತ್ತು ಮಕರ ರಾಶಿಯ ಮೇಲೆ ಶನಿಯ ಹಾಸಿಗೆ, ಕುಂಭ ಮತ್ತು ಮೀನ ರಾಶಿಯಲ್ಲಿ ಸಾಡೇ ಸಾತಿ ಶನಿಯ ಪ್ರಭಾವ ನಡೆಯುತ್ತಿರುತ್ತದೆ. ಶನಿಯ ಸಾಡೇ ಸತಿ ಮತ್ತು ಧೈಯ ದಿಂದಾಗಿ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ಏನು ಅಂತ ಕೇಳಿದರೆ, ಇಂದು ಮಂಗಳವಾರ ಆದ ಕಾರಣ ಆಂಜನೇಯ ಸ್ವಾಮಿಯನ್ನು ಆರಾಧಿಸುವುದೇ ಪರಿಹಾರ. ಹನುಮಂತನ ಕೃಪೆಯಿಂದ ಶನಿಪೀಡೆಯಿಂದ ಮುಕ್ತಿ ದೊರೆಯುತ್ತದೆ.

ಶನಿಯ ಅಶುಭ ಪರಿಣಾಮವು ಹನುಮಾನ್ ಭಕ್ತರ ಮೇಲೆ ಬೀಳುವುದಿಲ್ಲ. ಶನಿಯ ಸಾಡೇ ಸಾತಿ ಮತ್ತು ಧೈಯಾ ಸಂದರ್ಭದಲ್ಲಿ ಇದರಿಂದ ಪೀಡಿತರಾದವರು ಹನುಮಾನ್ ಆರಾಧನೆ ನಡೆಸುವಂತಹ ಅಗತ್ಯವಿದೆ. ಹನುಮಂತನ ಕೃಪೆಯಿಂದ ಮನುಷ್ಯ ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾನೆ. ಆಂಜನೇಯನು ಭಕ್ತರ ವ್ಯಕ್ತಿಗತ ಆಸೆಗಳನ್ನು ಪೂರೈಸುತ್ತಾನೆ ಎಂಬುದು ನಂಬಿಕೆ. ಹನುಮಂತನನ್ನು ಒಲಿಸಿಕೊಳ್ಳಲು ಈ ದಿನ ಏನು ಮಾಡಬೇಕು?

ಹನುಮಾನ್ ಚಾಲೀಸಾ ಪಠಿಸುವುದು ಅಗತ್ಯ

ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಲು, ಹನುಮಾನ್‌ ಚಾಲೀಸಾ ಪಠಿಸಬೇಕು. ಈ ರೀತಿ ಮಾಡುವುದರಿಂದ ಭಗವಾನ್‌ ಹನುಮಂತನ ವಿಶೇಷ ಆಶೀರ್ವಾದ ಪಡೆಯಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮಾನ್ ಚಾಲೀಸಾವನ್ನು ಪಠಿಸಿದರೆ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ.

ಇದಲ್ಲದೇ, ರಾಮಾಯಣದ ಸುಂದರಕಾಂಡದ ಪಾರಾಯಣ ಮಾಡಿದರೆ ಕೂಡ ಆಂಜನೇಯ ದೇವರ ಒಲವುಗಳಿಸಬಹುದು. ಆಶೀರ್ವಾದವನ್ನು ಪಡೆಯಬಹುದು. ಬದುಕಿನಲ್ಲಿ ಎದುರಾಗಿರುವ ಮತ್ತು ಎದುರಾಗುವ ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಸುಂದರಕಾಂಡವನ್ನು ಪಠಿಸುವ ಮೂಲಕ ಬದುಕನ್ನು ಸುಂದರಗೊಳಿಸುವುದು ಸಾಧ್ಯವಿದೆ ಎನ್ನುತ್ತಾರೆ ಆಸ್ತಿಕರು.

ರಾಮಜಪ ಮಾಡಿದರೂ ಸಾಕು…

ಭಗವಾನ್‌ ಶ್ರೀರಾಮಚಂದ್ರನ ಪರಮ ಭಕ್ತ ಆಂಜನೇಯ. ಆದ್ದರಿಂದ ಹನುಮಾನ್ ದೇವರನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಭಗವಾನ್ ಶ್ರೀ ರಾಮನ ಹೆಸರನ್ನು ಪಠಿಸುವುದು.

ಧಾರ್ಮಿಕ ನಂಬಿಕೆಗಳ ಪ್ರಕಾರ ರಾಮ ನಾಮಸ್ಮರಣೆ ಮಾಡುವ ವ್ಯಕ್ತಿ ಭಗವಾನ್‌ ಹನುಮಂತನ ವಿಶೇಷ ಆಶೀರ್ವಾದಕ್ಕೆ ಸುಲಭವಾಗಿ ಪಾತ್ರನಾಗುತ್ತಾನೆ. ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್, ಸಿಯಾ ರಾಮ್ ಜೈ ರಾಮ್ ಜೈ ಜೈ ರಾಮ್ ಎಂದು ರಾಮನಾಮ ಪಠಿಸಬಹುದು. ಅಥವಾ ರಾಮ, ರಾಮ, ರಾಮ ಎಂದು ರಾಮಜಪವನ್ನಾದರೂ ಮಾಡಬಹುದು. ಹರೇರಾಮ ಹರೇ ರಾಮ ರಾಮ ರಾಮ ಹರೇಹರೇ ಎಂದಾದರೂ ಜಪಿಸಬಹುದು. ಶ್ರೀ ರಾಮನ ನಾಮಸ್ಮರಣೆಯಲ್ಲಿ ವಿಶೇಷ ನಿಯಮವಿಲ್ಲ. ನೀವು ಎಲ್ಲಿ ಬೇಕಾದರೂ ರಾಮನ ಹೆಸರನ್ನು ಪಠಿಸಬಹುದು.

ಹನುಮಾನ್ ಜಿಯನ್ನು ಮೆಚ್ಚಿಸಲು, ನಿಮ್ಮ ಭಕ್ತಿ- ಶಕ್ತಿಗೆ ಅನುಗುಣವಾಗಿ ಪೂಜೆ, ಪುನಸ್ಕಾರ, ನೈವೇದ್ಯಗಳನ್ನು ಅರ್ಪಿಸಬಹುದು. ಆಂಜನೇಯನ, ಶ್ರೀರಾಮನ ಆರಾಧನೆ ಸಾತ್ತ್ವಿಕವಾಗಿರಬೇಕಾದ್ದು ಅವಶ್ಯ.

    ಹಂಚಿಕೊಳ್ಳಲು ಲೇಖನಗಳು