logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್ ಬೇಡ; ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

ಕೆಎಲ್ ರಾಹುಲ್ ಬೇಡ; ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

Prasanna Kumar P N HT Kannada

Apr 21, 2024 02:54 PM IST

ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

    • Adam Gilchrist : ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್ ಇಂಡಿಯಾ ವಿಕೆಟ್​ ಕೀಪರ್​ ಆಯ್ಕೆಗೆ ಸಂಬಂಧಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್ ಅವರು ಕೆಎಲ್ ರಾಹುಲ್ ಕಡೆಗಣಿಸಿ ಧೋನಿ ರೀತಿಯ ಆಟಗಾರನಿಗೆ ಮಣೆ ಹಾಕಿದ್ದಾರೆ.
ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್
ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

ಜೂನ್ 1ರಿಂದ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಭಾರತ ತಂಡ (Team India) ಪ್ರಕಟಿಸಲು ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಮಾಜಿ ಕ್ರಿಕೆಟರ್​ಗಳು ಯಾವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಚುಟುಕು ವಿಶ್ವಕಪ್​ಗೆ ಯಾರು ಸೂಕ್ತ ಎಂಬ ಸಲಹೆ ನೀಡುತ್ತಿದ್ದಾರೆ. ಅದರಂತೆ ಟೀಮ್ ಇಂಡಿಯಾ ವಿಕೆಟ್​ ಕೀಪರ್​ ಆಯ್ಕೆಗೆ ಸಂಬಂಧಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್ (Adam Gilchrist) ಅವರು ಕೆಎಲ್ ರಾಹುಲ್ (KL Rahul) ಕಡೆಗಣಿಸಿ ಅಚ್ಚರಿ ಆಯ್ಕೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

IPL 2024: ಅತಿ ಹೆಚ್ಚು ಸಿಕ್ಸ್ ಸೇರಿ ಆರ್‌ಸಿಬಿ-ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ ದಾಖಲೆಗಳಿವು

ಗಿಲ್​ಕ್ರಿಸ್ಟ್ ಅವರು ಆಯ್ಕೆ ಮಾಡಿದ ತಂಡದಲ್ಲಿ ಕೆಎಲ್ ರಾಹುಲ್​ ಅವರಿಗೆ ಜಾಗವೇ ಕೊಟ್ಟಿಲ್ಲ. ಬದಲಿಗೆ ಯುವ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅವರಿಗೆ ಅವಕಾಶ ನೀಡಿದ್ದಾರೆ. ಐಪಿಎಲ್-2024ರಲ್ಲಿ ಈ ಇಬ್ಬರು ಸಹ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ 2024ರ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆದುಕೊಳ್ಳಲು ಅವಕಾಶವಿದೆ. ಇದರ ಹೊರತಾಗಿಯೂ ಆರು ವಿಕೆಟ್​ ಕೀಪರ್​ಗಳ ನಡುವೆ ಪೈಪೋಟಿ ಮುಂದುವರೆದಿದೆ.

ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟ್ ಮತ್ತು ಗ್ಲೌಸ್‌ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಶಾನ್ ಕಿಶನ್, ಜಿತೇಶ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರಿಂದ ಹಿಂದೆ ಬಿದ್ದಿಲ್ಲ. ಆದರೆ ಈ ಆರು ವಿಕೆಟ್​ ಕೀಪರ್ಸ್ ಬ್ಯಾಟರ್​ಗಳ ಪೈಕಿ ಇಬ್ಬರು ಕೆರಿಬಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ಟಿಕೆಟ್ ಪಡೆಯುವ ಸಾಧ್ಯತೆಯಿದೆ. ಅದರಲ್ಲೂ ರಿಷಭ್ ಸೆಲೆಕ್ಟರ್​ಗಳ ಮೊದಲ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆ್ಯಡಂ ಗಿಲ್​ಕ್ರಿಸ್ಟ್ ಹೇಳಿದ್ದೇನು?

ಆ್ಯಡಂ ಗಿಲ್​ಕ್ರಿಸ್ಟ್​ ಅವರು ವಿಶ್ವಕಪ್​ಗೆ ಭಾರತದ ತಂಡದಲ್ಲಿ ಮೊದಲ ಆಯ್ಕೆಯ ಕೀಪರ್ ಆಗಲು ರಿಷಭ್ ಅವರನ್ನು ಬೆಂಬಲಿಸಿದ್ದಾರೆ. ಪಂತ್ ಉತ್ತಮ ಲಯದಲ್ಲಿದ್ದಾರೆ. ವಿಕೆಟ್ ಹಿಂದೆ ನಿಂತು ಪ್ರಭಾವ ಬೀರಿದ್ದಾರೆ. ಎಂಎಸ್ ಧೋನಿಯಂತೆ ಚಾಣಾಕ್ಷತೆ ಮತ್ತು ಚುರುಕಿನ ಕೀಪಿಂಗ್​ ಮಾಡುತ್ತಿದ್ದಾರೆ. ಅದಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವೇ ಸಾಕ್ಷಿ. ವಿಕೆಟ್ ಹಿಂದೆ 2 ಕ್ಯಾಚ್, 2 ಸ್ಟಂಪ್ಸ್ ಮಾಡಿದ ಪಂತ್ ಬ್ಯಾಟಿಂಗ್​ನಲ್ಲಿ ಅಜೇಯ 19 ರನ್ ಬಾರಿಸಿದರು. ನನ್ನ ಪ್ರಕಾರ ಸೆಲೆಕ್ಟರ್ಸ್ ಆತನ ಮೇಲೆ ಸಾಕಷ್ಟು ಗಮನ ಹರಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ.

ವರ್ಲ್ಡ್​​​ಕಪ್​ಗೆ ನೀವಿನ್ನೂ (ಬಿಸಿಸಿಐ) ವಿಕೆಟ್ ಕೀಪರ್​ ಸ್ಥಾನಕ್ಕೆ ಆಯ್ಕೆ ಮಾಡದೇ ಇದ್ದರೆ ಆ ಸ್ಥಾನವನ್ನು ರಿಷಭ್​ಗೆ ನೀಡುತ್ತೇನೆ. ಅವರನ್ನು ಮತ್ತೆ ತಂಡದಲ್ಲಿ ನೋಡಲು ಬಯಸುತ್ತೇನೆ. ವಿಕೆಟ್ ಕೀಪಿಂಗ್​ನಲ್ಲಿ ದೈಹಿಕ ಸಾಮರ್ಥ್ಯ ಹೊಂದಿರುವ ಪಂತ್, ಬ್ಯಾಟಿಂಗ್​ನಲ್ಲೂ ಸುಧಾರಿಸಿದ್ದಾರೆ ಎಂದು ಡೆಲ್ಲಿ ನಾಯಕನನ್ನು ಬೆಂಬಲಿಸಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ. ಇದೇ ವೇಳೆ ಬ್ಯಾಕಪ್ ಯಾರಿರಬೇಕೆಂದು ಸೂಚಿಸಿದ್ದಾರೆ.

ಬ್ಯಾಕಪ್​ ಸಂಜು ಇರಲಿ ಎಂದು ಮಾಜಿ ವಿಕೆಟ್ ಕೀಪರ್​

ರಿಷಭ್​ ಪಂತ್​ಗೆ ಬ್ಯಾಕಪ್ ವಿಕೆಟ್ ಕೀಪರ್​ ಆಗಿ ಸಂಜು ಸ್ಯಾಮ್ಸನ್​ ನೇಮಕಗೊಂಡರೆ ಉತ್ತಮ ಎಂದು ಗಿಲ್​ಕ್ರಿಸ್ಟ್ ಹೇಳಿಕೆ ನೀಡಿದ್ದಾರೆ. ನಾಯಕತ್ವದಲ್ಲಿ ಸಾಕಷ್ಟು ಪ್ರಬುದ್ಧತೆ ಸಾಧಿಸಿರುವ ಸ್ಯಾಮ್ಸನ್​ ಅವರನ್ನು ಟಿ20 ವಿಶ್ವಕಪ್​ ತಂಡದಲ್ಲಿ ಮೀಸಲು ಆಟಗಾರನ ಸ್ಥಾನಕ್ಕೆ ಆಯ್ಕೆ ಮಾಡಲು ಇಚ್ಛಿಸುತ್ತೇನೆ. ಬ್ಯಾಟಿಂಗ್​​ನಲ್ಲೂ ಉತ್ತಮ ದಾಳಿ ನಡೆಸುತ್ತಿದ್ದಾರೆ. ಹಾಗಾಗಿ ಆತನಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಆ್ಯಡಂ ಗಿಲ್‌ಕ್ರಿಸ್ಟ್ ತಿಳಿಸಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ