logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಮಾಡಿದ ತಪ್ಪಿನಿಂದ ಸರ್ಫರಾಜ್ ಖಾನ್ ರನೌಟ್ ಆದರು; ಬಹಿರಂಗವಾಗಿ ಕ್ಷಮೆಕೋರಿದ ರವೀಂದ್ರ ಜಡೇಜಾ

ನಾನು ಮಾಡಿದ ತಪ್ಪಿನಿಂದ ಸರ್ಫರಾಜ್ ಖಾನ್ ರನೌಟ್ ಆದರು; ಬಹಿರಂಗವಾಗಿ ಕ್ಷಮೆಕೋರಿದ ರವೀಂದ್ರ ಜಡೇಜಾ

Prasanna Kumar P N HT Kannada

Feb 15, 2024 09:22 PM IST

ನಾನು ಮಾಡಿದ ತಪ್ಪಿನಿಂದ ಸರ್ಫರಾಜ್ ಖಾನ್ ರನೌಟ್ ಆದರು; ಬಹಿರಂಗವಾಗಿ ಕ್ಷಮೆಕೋರಿದ ರವೀಂದ್ರ ಜಡೇಜಾ

    • Sarfaraz Khan Run Out : ಸರ್ಫರಾಜ್ ಖಾನ್ ಅವರನ್ನು ರನೌಟ್​ ಮಾಡಿದ್ದಕ್ಕೆ ಆಲ್​ರೌಂಡರ್​ ರವೀಂದ್ರ ಜಡೇಜಾ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಜಡೇಜಾ ಈ ಪೋಸ್ಟ್​ ಅನ್ನು ಮಾಡಿದ್ದಾರೆ.
ನಾನು ಮಾಡಿದ ತಪ್ಪಿನಿಂದ ಸರ್ಫರಾಜ್ ಖಾನ್ ರನೌಟ್ ಆದರು; ಬಹಿರಂಗವಾಗಿ ಕ್ಷಮೆಕೋರಿದ ರವೀಂದ್ರ ಜಡೇಜಾ
ನಾನು ಮಾಡಿದ ತಪ್ಪಿನಿಂದ ಸರ್ಫರಾಜ್ ಖಾನ್ ರನೌಟ್ ಆದರು; ಬಹಿರಂಗವಾಗಿ ಕ್ಷಮೆಕೋರಿದ ರವೀಂದ್ರ ಜಡೇಜಾ

ರಾಜ್‌ಕೋಟ್​​ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಬಲಗೈ ಬ್ಯಾಟರ್​​ ಸರ್ಫರಾಜ್ ಖಾನ್ ಅವರನ್ನು ರನೌಟ್​ ಮಾಡಿದ್ದಕ್ಕೆ ಆಲ್​ರೌಂಡರ್​ ರವೀಂದ್ರ ಜಡೇಜಾ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಜಡೇಜಾ ಈ ಪೋಸ್ಟ್​ ಅನ್ನು ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

99 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ರವೀಂದ್ರ ಜಡೇಜಾ, 81ನೇ ಓವರ್​ನ 5ನೇ ಎಸೆತದಲ್ಲಿ ಮಿಡ್​ಆನ್​​ಗೆ ಚೆಂಡನ್ನು ತಳ್ಳಿದರು. ಈ ವೇಳೆ ಜಡೇಜಾ ಸಿಂಗಲ್ ತೆಗೆದುಕೊಳ್ಳಲು ಸರ್ಫರಾಜ್​ಗೆ ಸೂಚಿಸಿದರು. ಚೆಂಡು ಫೀಲ್ಡರ್​ ಕೈ ಸೇರುತ್ತಿದ್ದಂತೆ ವಾಪಸ್ ಹೋಗುವಂತೆ ಜಡ್ಡು, ಸರ್ಫರಾಜ್​ಗೆ ಸೂಚಿಸಿದರು. ಆದರೆ ಮುಂಬೈ ಆಟಗಾರ ಅದಾಗಲೇ ಪಿಚ್​​​ನ ಅರ್ಧಕ್ಕೆ ಬಂದಿದ್ದರು. ಅವರು ಹಿಂದಕ್ಕೆ ಮರಳುವಷ್ಟರಲ್ಲಿ ಮಾರ್ಕ್​ವುಡ್ ವಿಕೆಟ್ಸ್​ಗೆ ಡೈರೆಕ್ಟ್​ ಹಿಟ್ ಮಾಡಿದರು.

ಕಣಕ್ಕಿಳಿದ 75 ನಿಮಿಷಗಳಲ್ಲಿ ಭರ್ಜರಿ ಹಾಫ್ ಸೆಂಚುರಿ ಸಿಡಿಸಿದ ಸರ್ಫರಾಜ್, ತಂಡದ ಮೊತ್ತ 300ರ ಗಡಿ ದಾಟಿಸಲು ನೆರವಾದರು. 66 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ ಚಚ್ಚಿದರು. ರೋಹಿತ್​ ಔಟಾದ ನಂತರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಂಬೈಕರ್​, ಸ್ಫೋಟಕ ಆಟವನ್ನಾಡಿದರು. ಟೀಮ್ ಮ್ಯಾನೇಜ್​ಮೆಂಟ್ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು.

ಕ್ಷಮೆ ಕೋರಿದ ಜಡೇಜಾ

ಸೋಷಿಯಲ್ ಮೀಡಿಯಾದಲ್ಲಿ ಜಡೇಜಾ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲ್‌ರೌಂಡರ್ ಈಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನನ್ನಿಂದ ಸರ್ಫರಾಜ್​ ಔಟ್ ಆದರು ಎಂದಿರುವ ಜಡೇಜಾ, ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು ಎಂದು ಹೊಗಳಿದ್ದಾರೆ. ಸರ್ಫರಾಜ್ ಖಾನ್‌ ರನೌಟ್​ ಆಗಿದ್ದು ಬೇಸರವಾಗಿದೆ. ಇದು ನನ್ನ ತಪ್ಪು ಕರೆ. ಚೆನ್ನಾಗಿ ಆಡಿದರು ಎಂದು ಜಡೇಜಾ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್​​ನಲ್ಲಿ ರನ್ ಮಳೆ ಹರಿಸಿದ್ದ ಸರ್ಫರಾಜ್ ಖಾನ್ (Sarfaraz Khan) ಕೊನೆಗೂ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ರಾಜ್​ಕೋಟ್​​ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್​​ನಲ್ಲಿ ಕಣಕ್ಕಿಳಿದ ಸರ್ಫರಾಜ್ ತನ್ನ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು.

ಸರ್ಫರಾಜ್ ರನೌಟ್​ ಆಗುತ್ತಿದ್ದಂತೆ ಜಡೇಜಾ ಕೂಡ ಬೇಸರಕ್ಕೆ ಒಳಗಾದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಮಿಂಚುತ್ತಿದ್ದ ಸರ್ಫರಾಜ್ ಸಹ ಬೇಸರದೊಂದಿಗೆ ಡ್ರೆಸ್ಸಿಂಗ್​ ರೂಮ್​ಗೆ ಹೆಜ್ಜೆ ಹಾಕಿದರು. ಅದ್ಭುತವಾಗಿ ಆಡುತ್ತಿದ್ದ ಸರ್ಫರಾಜ್ ದುರದೃಷ್ಟಕರ ರನೌಟ್​ ಆದ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ನಾಯಕ ರೋಹಿತ್​​ ಶರ್ಮಾ ಕೋಪಗೊಂಡರು. ಹತಾಶೆಯನ್ನು ಹೊರಹಾಕಿ ತನ್ನ ಟೋಪಿಯನ್ನು ಎಸೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಡೇಜಾರನ್ನು ದೂಷಿಸಿದ ರೋಹಿತ್

ಸರ್ಫರಾಜ್ ಔಟಾದ ಮರು ಎಸೆತದಲ್ಲೇ ಟೆಸ್ಟ್​ ಕ್ರಿಕೆಟ್​ನ 4ನೇ ಶತಕ ಪೂರೈಸಿದ ಜಡೇಜಾ ವಿರುದ್ಧ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಉದಾಹರಣೆಗಳ ಸಮೇತ ಜಡ್ಡುರನ್ನು ಸ್ವಾರ್ಥಿ ಎಂದು ಜರಿದಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಹಾರ್ದಿಕ್​ರನ್ನು ರನೌಟ್ ಮಾಡಿದ್ದರು. 2021ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರನೌಟ್ ಮಾಡಿದ್ದರು. ಇದೀಗ ಅರ್ಧಶತಕ ಸಿಡಿಸಿದ್ದ ಸರ್ಫರಾಜ್​ರನ್ನು ರನೌಟ್ ಮಾಡಿದ್ದಾರೆ. ಎಲ್ಲಾ ದಾಖಲೆಗಾಗಿ ಎಂದು ನೆಟ್ಟಿಗರು ಸಿಡಿದೆದ್ದಿದ್ದಾರೆ.

ರನೌಟ್‌ನಿಂದ ರೋಹಿತ್ ಅಸಮಾಧಾನಗೊಂಡರು. ಅಭಿಮಾನಿಗಳು ನಿರಾಶೆಗೊಂಡರು. ರಾಜ್‌ಕೋಟ್‌ನಲ್ಲಿ ಸರ್ಫರಾಜ್​ ರನೌಟ್​ಗೆ ಜಡೇಜಾ ಕಾರಣ ಎನ್ನುತ್ತಿದ್ದಾರೆ. ಮಗನ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದ ತಂದೆ ನಿರಾಸೆಗೊಂಡರು. ಸರ್ಫರಾಜ್ ಕ್ರೀಸ್‌ಗೆ ಕಾಲಿಟ್ಟಾಗ ಜಡೇಜಾ 84 ರನ್ ಗಳಿಸಿದ್ದರು. ಆದರೆ ಆಲ್‌ರೌಂಡರ್ ತನ್ನ ಶತಕ ತಲುಪುವ ಮೊದಲು ಯುವ ಬ್ಯಾಟರ್ 62 ರನ್‌ಗಳ ಅಬ್ಬರದ ಹಾದಿಯಲ್ಲಿ ಸಾಗಿದರು.

ಇಂಗ್ಲೆಂಡ್ ಸ್ಪಿನ್ನರ್‌ಗಳಾದ ಜೋ ರೂಟ್, ಟಾಮ್ ಹಾರ್ಟ್ಲಿ ಮತ್ತು ರೆಹಾನ್ ಅಹ್ಮದ್ ಅವರನ್ನು ಸಮರ್ಥವಾಗಿ ನಿಭಾಯಿಸಿದ ಸರ್ಫರಾಜ್, ವೇಗದ ಅರ್ಧಶತಕ ಸಿಡಿಸಿದರು. ಪ್ರಮುಖ ಬೌಲರ್​​ಗಳಿಗೆ ಬೆಂಡೆತ್ತಿದ ಮುಂಬೈಕರ್​ 48 ಎಸೆತಗಳಲ್ಲಿ ಅರ್ಧಶತಕದ ಗಡಿಯನ್ನು ದಾಟಿದರು. ಚೊಚ್ಚಲ ಪಂದ್ಯದಲ್ಲೇ ವೇಗದ ಅರ್ಧಶತಕ ಸಿಡಿಸಿದ ಭಾರತದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆ ಬರೆದಿದ್ದಾರೆ. 2017ರಲ್ಲಿ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧ ಈ ದಾಖಲೆ ನಿರ್ಮಿಸಿದ್ದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ