logo
ಕನ್ನಡ ಸುದ್ದಿ  /  ಮನರಂಜನೆ  /  Aishwarya Rajinikanth: ಕಳ್ಳತನ ಮಾಡಲು ಐಶ್ವರ್ಯ ಅವರೇ ಕಾರಣ.. ವಿಚಾರಣೆ ವೇಳೆ ಶಾಕಿಂಗ್‌ ಹೇಳಿಕೆ ನೀಡಿದ ಮನೆ ಕೆಲಸದಾಕೆ!

Aishwarya Rajinikanth: ಕಳ್ಳತನ ಮಾಡಲು ಐಶ್ವರ್ಯ ಅವರೇ ಕಾರಣ.. ವಿಚಾರಣೆ ವೇಳೆ ಶಾಕಿಂಗ್‌ ಹೇಳಿಕೆ ನೀಡಿದ ಮನೆ ಕೆಲಸದಾಕೆ!

HT Kannada Desk HT Kannada

Mar 30, 2023 05:29 PM IST

ಐಶ್ವರ್ಯ ನನಗೆ ಕಡಿಮೆ ಸಂಬಳ ನೀಡುತ್ತಿದ್ದೇ ಕಳ್ಳತನ ಮಾಡಲು ಕಾರಣ ಎಂದ ಮನೆ ಕೆಲಸದಾಕೆ

  • 4 ವರ್ಷಗಳಿಂದ ಚಿನ್ನಾಭರಣ ಕಳುವು ಆಗಿದ್ದರೂ ನಿಮ್ಮ ಗಮನಕ್ಕೆ ಬಂದಿಲ್ಲ ಎಂದರೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಆದರೆ ಈ ಚಿತ್ರಕ್ಕೆ ನೀವೇ ಬಂಡವಾಳ ಹೂಡಿ ನಿರ್ದೇಶನ ಕೂಡಾ ಮಾಡಬಹುದು ಎಂದು ಐಶ್ವರ್ಯ ಅವರನ್ನು ತಮಾಷೆ ಮಾಡುತ್ತಿದ್ದಾರೆ.

ಐಶ್ವರ್ಯ ನನಗೆ ಕಡಿಮೆ ಸಂಬಳ ನೀಡುತ್ತಿದ್ದೇ ಕಳ್ಳತನ ಮಾಡಲು ಕಾರಣ ಎಂದ ಮನೆ ಕೆಲಸದಾಕೆ
ಐಶ್ವರ್ಯ ನನಗೆ ಕಡಿಮೆ ಸಂಬಳ ನೀಡುತ್ತಿದ್ದೇ ಕಳ್ಳತನ ಮಾಡಲು ಕಾರಣ ಎಂದ ಮನೆ ಕೆಲಸದಾಕೆ

ಮನೆಯಲ್ಲಿ ಕಳ್ಳತನವಾಗಿದೆ, ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳ್ಳತನವಾಗಿದೆ ಎಂದು ಇತ್ತೀಚೆಗೆ ತಮಿಳು ಖ್ಯಾತ ನಟ ರಜನಿಕಾಂತ್‌ ಪುತ್ರಿ ಐಶ್ವರ್ಯ ರಜನಿಕಾಂತ್‌ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೂಡಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಳ್ಳಿಯನ್ನು ಬಂಧಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

Sathyam: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ‘ಗಣಪ’ನ ಸಿನಿಮಾ

Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್‌ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ

ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌

ಐಶ್ವರ್ಯ ರಜನಿಕಾಂತ್‌ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈಶ್ವರಿ ಎಂಬ ಕೆಲಸದಾಕೆಯೇ ಈ ಕಳ್ಳತನ ಮಾಡಿ ಕದ್ದ ಒಡವೆ ಮಾರಿ, ಬಂದ ಹಣದಿಂದ ಮನೆ ಖರೀದಿಸಿದ್ದರು. ಆದರೆ ಈಶ್ವರಿ ವಿಚಾರಣೆ ವೇಳೆ ಮತ್ತೊಂದು ವಿಚಾರವನ್ನು ಬಾಯ್ಬಿಟ್ಟಿದ್ಧಾಳೆ. ನಾನು ಕಳ್ಳತನ ಮಾಡಲು ಐಶ್ವರ್ಯ ರಜನಿಕಾಂತ್‌ ಅವರೇ ಕಾರಣ ಎಂಬ ಶಾಕಿಂಗ್‌ ಹೇಳಿಕೆ ನೀಡಿದ್ದಾಳೆ. ನಾನು ಎಷ್ಟು ಕಷ್ಟಪಟ್ಟು ದುಡಿದರೂ ನನಗೆ ಕಡಿಮೆ ಸಂಬಳ ನೀಡುತ್ತಿದ್ದರು. ಆದ್ದರಿಂದ ಈ ಕೆಲಸ ಮಾಡಿದೆ ಎಂದು ಹೇಳಿದ್ದಾಳೆ. ನಿಮಗೆ ಎಷ್ಟು ಸಂಬಳ ನೀಡುತ್ತಿದ್ದರು ಎಂದು ಪೊಲೀಸರು ಕೇಳಿದಾಗ ಆಕೆ ನೀಡಿದ ಉತ್ತರ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಐಶ್ವರ್ಯ ರಜನಿಕಾಂತ್‌, ಈಶ್ವರಿಗೆ 30 ಸಾವಿರ ಸಂಬಳ ನೀಡುತ್ತಿದ್ದರಂತೆ. ಇಷ್ಟಾದರೂ ಅಷ್ಟು ಹಣ ಆಕೆಗೆ ಸಾಲದೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕಾರು ಚಾಲಕನ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಆಭರಣ ಕದಿಯುತ್ತಿದ್ದೆ. ಚಿನ್ನಾಭರಣ ಮಾರಿ ಬಂದ ಹಣದಿಂದ ಮನೆ ಖರೀದಿಸಿದ್ದೆ. ನಾನು ಬಹಳ ಹಿಂದಿನಿಂದ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರು ಕೀ ಎಲ್ಲಿ ಇಡುತ್ತಿದ್ದರು ಎಂಬುದನ್ನು ತಿಳಿದುಕೊಂಡಿದ್ದೆ ಎಂದು ಈಶ್ವರಿ ಬಾಯಿ ಬಿಟ್ಟಿದ್ಧಾಳೆ. ಪೊಲೀಸರು ಐಶ್ವರ್ಯ ಮನೆ ಕೆಲಸದಾಕೆಯ ಹೇಳಿಕೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈಶ್ವರಿ ಹೇಳಿಕೆ ಕೇಳಿದ ನೆಟಿಜನ್‌ಗಳು ಇದೊಂಥರಾ ಕಥೆ ಇಂಟ್ರೆಸ್ಟಿಂಗ್‌ ಆಗಿದೆ. ಇದನ್ನು ಸಿನಿಮಾ ಮಾಡಬಹುದು. 4 ವರ್ಷಗಳಿಂದ ಚಿನ್ನಾಭರಣ ಕಳುವು ಆಗಿದ್ದರೂ ನಿಮ್ಮ ಗಮನಕ್ಕೆ ಬಂದಿಲ್ಲ ಎಂದರೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಆದರೆ ಈ ಚಿತ್ರಕ್ಕೆ ನೀವೇ ಬಂಡವಾಳ ಹೂಡಿ ನಿರ್ದೇಶನ ಕೂಡಾ ಮಾಡಬಹುದು ಎಂದು ಐಶ್ವರ್ಯ ಅವರನ್ನು ತಮಾಷೆ ಮಾಡುತ್ತಿದ್ದಾರೆ.

ಲಾಕರ್‌ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳು, ವಜ್ರ, ಚಿನ್ನದ ಆಭರಣ, ಹಣ ಕಳ್ಳತನವಾಗಿದೆ. ಹಾಗೇ ತಾವು ಲಾಕರ್‌ನಲ್ಲಿ ಇಷ್ಟು ಸಾಮಗ್ರಿಗಳನ್ನು ಇಟ್ಟಿದ್ದ ವಿಚಾರ ಮನೆ ಕೆಲಸದವರಿಗೆ ಮಾತ್ರ ಗೊತ್ತಿತ್ತು. ನಾನು ಬಹಳ ದಿನಗಳಿಂದ ಲಾಕರ್‌ನತ್ತ ಗಮನ ಹರಿಸಿದಲಿಲ್ಲ. ಆದರೆ ಈಗ ನೋಡಿದರೆ ಅಲ್ಲಿ ಇಟ್ಟಿದ್ದೆಲ್ಲಾ ನಾಪತ್ತೆಯಾಗಿದೆ ಎಂದು ಐಶ್ವರ್ಯ ದೂರಿನಲ್ಲಿ ಉಲ್ಲೇಖಿಸಿದ್ದರು.

ಐಶ್ವರ್ಯ ತಮಿಳು ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಲಾಲ್‌ ಸಲಾಮ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ 5 ರಂದು'ಲಾಲ್‌ ಸಲಾಮ್‌' ಚಿತ್ರದ ಮುಹೂರ್ತ ನೆರವೇರಿದ್ದು ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. 'ಲಾಲ್‌ ಸಲಾಮ್‌', ಕ್ರಿಕೆಟ್‌ ಹಿನ್ನೆಲೆ ಇರುವ ಕಥೆಯನ್ನೊಂದಿದ್ದು ತಮಿಳಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌, ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ವಿಶಾಲ್‌ ಹಾಗೂ ವಿಕ್ರಾಂತ್‌ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್‌ ಕೂಡಾ ಮಗಳು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು