logo
ಕನ್ನಡ ಸುದ್ದಿ  /  Entertainment  /  Dont Imagine Anything My Focus Is On My Daughter Meena Bursts Out About Marriage With Dhanush

Meena on Wedding Rumour: ‘ಏನೆನೋ ಕಲ್ಪಿಸಿಕೊಳ್ಳಬೇಡಿ.. ನನ್ನ ಗಮನವೀಗ ಮಗಳ ಮೇಲಿದೆ..’; ಧನುಷ್‌ ಜತೆಗಿನ ಮದುವೆ ಬಗ್ಗೆ ಮೀನಾ ಸಿಡಿಮಿಡಿ!

HT Kannada Desk HT Kannada

Mar 26, 2023 08:42 AM IST

‘ಏನೆನೋ ಕಲ್ಪಿಸಿಕೊಳ್ಳಬೇಡಿ.. ನನ್ನ ಗಮನವೀಗ ಮಗಳ ಮೇಲಿದೆ..’; ಧನುಷ್‌ ಜತೆಗಿನ ಮದುವೆ ಬಗ್ಗೆ ಮೀನಾ ಸಿಡಿಮಿಡಿ!

  • ಇನ್ನೇನು ಧನುಷ್‌- ಮೀನಾ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ವದಂತಿಗೆ ಗುನ್ನ ಕೊಟ್ಟಿದ್ದಾರೆ ನಟಿ ಮೀನಾ. 

‘ಏನೆನೋ ಕಲ್ಪಿಸಿಕೊಳ್ಳಬೇಡಿ.. ನನ್ನ ಗಮನವೀಗ ಮಗಳ ಮೇಲಿದೆ..’; ಧನುಷ್‌ ಜತೆಗಿನ ಮದುವೆ ಬಗ್ಗೆ ಮೀನಾ ಸಿಡಿಮಿಡಿ!
‘ಏನೆನೋ ಕಲ್ಪಿಸಿಕೊಳ್ಳಬೇಡಿ.. ನನ್ನ ಗಮನವೀಗ ಮಗಳ ಮೇಲಿದೆ..’; ಧನುಷ್‌ ಜತೆಗಿನ ಮದುವೆ ಬಗ್ಗೆ ಮೀನಾ ಸಿಡಿಮಿಡಿ!

Meena on Wedding Rumour: ಬಹುಭಾಷಾ ನಟಿ ಮೀನಾ ಕಳೆದ ಕೆಲ ದಿನಗಳಿಂದ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಪತಿಯ ನಿಧನವಾಗಿ ಕೆಲ ತಿಂಗಳ ಬಳಿಕ ಮದುವೆ ವಿಚಾರವೇ ಸದ್ದು ಮಾಡಿತ್ತು. ಇದೀಗ ಅದ್ಯಾವ ಮಟ್ಟಿಗೆ ಎಂದರೆ, 46ರ ಪ್ರಾಯದ ಮೀನಾ, 39 ವಯಸ್ಸಿನ ತಮಿಳಿನ ಸ್ಟಾರ್‌ ನಟ ಧನುಷ್‌ ಅವರನ್ನು ಇನ್ನೇನು ಮದುವೆ ಆಗಲಿದ್ದಾರೆ ಎಂಬ ಗುಲ್ಲು ಕಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿತ್ತು. ಈಗ ಇದೆಲ್ಲದಕ್ಕೂ ಉತ್ತರ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

Seetha Rama Serial: ಮಾವಯ್ಯನ ಬಾಯಿಂದ ಬಂತು ಆ ಮಾತು; ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾಳೆ ಭಾರ್ಗವಿ

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

ಮನೆ ಇಎಂಐ ಕಟ್ಟಲು ಹೆಣಗಾಡುತ್ತಿರುವ ಭಾಗ್ಯಾಗೆ ಮತ್ತೊಂದು ಹೊರೆ, ಸಾಲದ ಹಣ ವಾಪಸ್‌ ಕೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO

ತಮಿಳಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಬೈಲ್ವಾನ್‌ ರಂಗನಾಥ್‌ ಈ ಜೋಡಿಯ ಮದುವೆ ಗಾಸಿಪ್‌ ಬಗ್ಗೆ ಹೇಳಿಕೊಂಡಿದ್ದರು. ಇನ್ನೇನು ಈ ಜೋಡಿ ಮದುವೆ ಆಗಲಿದೆ. ಜೂನ್‌ ಅಥವಾ ಜುಲೈನಲ್ಲಿ ಕಲ್ಯಾನ ಜರುಗಲಿದೆ. ಒಂದು ವೇಳೆ ಮದುವೆ ಆಗದಿದ್ದರೆ ಈ ಜೋಡಿ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇರಲಿದೆ ಎಂಬ ಹೇಳಿಕೆ ನೀಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಇದೀಗ ಈ ಸುಳ್ಳು ಸುದ್ದಿಗೆ ನಟಿ ಮೀನಾ ಗುನ್ನ ಕೊಟ್ಟಿದ್ದಾರೆ. ಮಾತಿನ ಮೂಲಕ ಚಾಟಿ ಬೀಸಿ ಬಿಸಿ ಮುಟ್ಟಿಸಿದ್ದಾರೆ.

ಮೀನಾ ಹೇಳಿದ್ದೇನು?

ಸಂದರ್ಧನವೊಂದರಲ್ಲಿ ಮಾತನಾಡಿರುವ ಮೀನಾ, 'ಪತಿ ವಿದ್ಯಾಸಾಗರ್ ಅಗಲಿದ್ದಾರೆ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ಆ ನೋವಿನಿಂದ ನಾನಿನ್ನೂ ಹೊರಬಂದಿಲ್ಲ. ಹೀಗಿರುವಾಗ ಈ ರೀತಿಯ ಎರಡನೇ ಮದುವೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ಈ ರೀತಿಯ ವದಂತಿಯಿಂದ ಮತ್ತಷ್ಟು ನೋಯಿಸಬೇಡಿ. ಈಗ ನನ್ನ ಇಡೀ ಗಮನ ಮಗಳು ನೈನಾಕಾ ಭವಿಷ್ಯದತ್ತ ಇದೆ. ಅದೇ ರೀತಿ ನಾನು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲ ಸ್ಕ್ರಿಪ್ಟ್‌ಗಳನ್ನೂ ಕೇಳುತ್ತಿದ್ದೇನೆ.' ಎಂದು ಮೀನಾ ಹೇಳಿದ್ದಾರೆ.

ಮೀನಾ ಪತಿ ವಿದ್ಯಾಸಾಗರ್ ನಿಧನ

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ ಕಳೆದ ವರ್ಷದ ಜೂನ್‌ 28ರಂದು ನಿಧನರಾಗಿದ್ದರು. 2022ರ ಆರಂಭದಲ್ಲಿ ಮೀನಾ ಅವರ ಇಡೀ ಕುಟುಂಬಕ್ಕೆ ಕೋವಿಡ್‌ ಸೋಂಕು ತಗುಲಿತ್ತು. ಎಲ್ಲರೂ ಚೇತರಿಸಿಕೊಂಡರೆ, ವಿದ್ಯಾಸಾಗರ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿರಲಿಲ್ಲ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Prakash Raj: ‌ರಾಜ್ಯದ ಐದು ಜಿಲ್ಲೆಗಳಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್; ‘ಇದು ನನ್ನ ಮತ್ತು ಯಶ್‌ ರಾಜಕಾರಣ!’ ಎಂದ ಪ್ರಕಾಶ್‌ ರಾಜ್

Appu Express Ambulance: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮ ನಡುವೆ ಇಲ್ಲ. ಆದರೆ, ಅವರು ಬಿಟ್ಟು ಹೋದ ಮಾನವೀಯ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಟ ಪ್ರಕಾಶ್‌ ರಾಜ್‌, ಹೊಸ ಕಾರ್ಯಕ್ಕೆ ಕಳೆದ ವರ್ಷ ಮುನ್ನುಡಿ ಬರೆದಿದ್ದರು. ಅದುವೇ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್.‌ ಕಳೆದ ವರ್ಷದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ಮೊದಲ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್ ವಾಹನ ರಸ್ತೆಗಿಳಿದಿತ್ತು. ಇದೀಗ ಒಂದಲ್ಲ ಎರಡಲ್ಲ ಐದು ಆಂಬುಲೆನ್ಸ್‌ಗಳು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಲು ಸಜ್ಜಾಗಿವೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು