logo
ಕನ್ನಡ ಸುದ್ದಿ  /  ಮನರಂಜನೆ  /  Hushar Movie Song Release: ‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ..’; ಪತಿ ಉಪೇಂದ್ರ ಹಾಡಿದ ಹಾಡನ್ನು ಬಿಡುಗಡೆ ಮಾಡಿದ ಪತ್ನಿ ಪ್ರಿಯಾಂಕಾ

Hushar Movie song release: ‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ..’; ಪತಿ ಉಪೇಂದ್ರ ಹಾಡಿದ ಹಾಡನ್ನು ಬಿಡುಗಡೆ ಮಾಡಿದ ಪತ್ನಿ ಪ್ರಿಯಾಂಕಾ

HT Kannada Desk HT Kannada

Nov 12, 2022 04:58 PM IST

‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ..’; ಪತಿ ಉಪೇಂದ್ರ ಹಾಡಿದ ಹಾಡನ್ನು ಬಿಡುಗಡೆ ಮಾಡಿದ ಪತ್ನಿ ಪ್ರಿಯಾಂಕಾ

    • "ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ" ಎಂಬ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು.
‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ..’; ಪತಿ ಉಪೇಂದ್ರ ಹಾಡಿದ ಹಾಡನ್ನು ಬಿಡುಗಡೆ ಮಾಡಿದ ಪತ್ನಿ ಪ್ರಿಯಾಂಕಾ
‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ..’; ಪತಿ ಉಪೇಂದ್ರ ಹಾಡಿದ ಹಾಡನ್ನು ಬಿಡುಗಡೆ ಮಾಡಿದ ಪತ್ನಿ ಪ್ರಿಯಾಂಕಾ

ಸತೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿರುವ "ಹುಷಾರ್" ಚಿತ್ರದ "ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ" ಎಂಬ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು. ಚಿತ್ರದ ಟ್ರೇಲರ್ ನಿರ್ಮಾಪಕ ಎನ್.ಎಂ.ಸುರೇಶ್ ಅವರಿಂದ ಬಿಡುಗಡೆಯಾಯಿತು.

ಟ್ರೆಂಡಿಂಗ್​ ಸುದ್ದಿ

‘ಗೀತಾಳ ಗಂಡನಾಗಿ ಕೇಳ್ತಿದ್ದೇನೆ, ಇಷ್ಟು ದಿನ ನೀವೇನು ಕಿಸಿದಿದ್ದೀರಿ ಹೇಳಿ?’ ಕುಮಾರ ಬಂಗಾರಪ್ಪಗೆ ಮಾತಲ್ಲೆ ಟಾಂಗ್‌ ಕೊಟ್ಟ ಶಿವರಾಜ್‌ಕುಮಾರ್

Brundavana Serial: ಗೆದ್ದು ಬಿಟ್ಟೆ ಎಂದು ಬೀಗುತ್ತಿರುವ ಭಾರ್ಗವಿ, ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ

Bhagyalakshmi Serial: ತಾಂಡವ್‌ ಪರ ನಿಂತ ಸುನಂದಾ, ಸೊಸೆ ಭಾಗ್ಯಾಗಾಗಿ ಕೆಲಸಕ್ಕೆ ಸೇರಲು ನಿರ್ಧರಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

‘ನಿರ್ಮಾಪಕರಿಗೆ ನನ್ನ ಎದೆ ಸೀಳು ಕಾಣಬೇಕಿತ್ತು, ಸ್ಲಿಮ್‌ ಇದ್ದ ನನಗೆ ದಪ್ಪ ಮಾಡಲು ಸಿಕ್ಕಿದ್ದನ್ನೆಲ್ಲ ತಿನಿಸುತ್ತಿದ್ರು !’ ಸೋನಾಲಿ ಬೇಂದ್ರೆ

"ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಉಪೇಂದ್ರ ಅವರು ಹಾಡಿರುವುದು. ಈ ಹಾಡು H2o ಚಿತ್ರದ "ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ" ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ. ಹಾರರ್ ಜಾನರ್ ನ ಈ ಸಿನಿಮಾ ಎಲ್ಲರ ಮನ ಗೆಲ್ಲಲಿ" ಎಂದು ಪ್ರಿಯಾಂಕ ಉಪೇಂದ್ರ ಶುಭ ಹಾರೈಸಿದರು. ‌

"ನಾನು ಡಾ.ರಾಜ್ ಅವರ ಅಭಿಮಾನಿ. ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ರಂಗಭೂಮಿ ನಂಟು ಇದೆ. ಲಾಕ್ ಡೌನ್ ಸಮಯದಲ್ಲಿ ‘ಹುಷಾರ್’ ಪೆನ್ ಡ್ರೈವ್ ಎಂಬ ಕಥೆ ಬರೆದೆ. ಈ ಕಥೆ ಪುಸ್ತಕ ರೂಪದಲ್ಲಿ ಎಲ್ಲೆಡೆ ಲಭ್ಯವಿವೆ. ಆನಂತರ ಇದನ್ನು ಸಿನಿಮಾ‌ ಮಾಡೋಣ ಎಂದು ಚಿತ್ರೀಕರಣ ಆರಂಭಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಚಿತ್ರ ಬಿಡುಗಡೆ ಹಂತ ತಲುಪಿದೆ. ಉಪೇಂದ್ರ ಅವರು ನಮ್ಮ ಸಿನಿಮಾದ ಹಾಡೊಂದು ಹಾಡಿರುವುದು ನಮ್ಮ ಹೆಮ್ಮೆ. ಆ ಹಾಡನ್ನು ಬಿಡುಗಡೆ ಮಾಡಿದ ಪ್ರಿಯಾಂಕ ಉಪೇಂದ್ರ ಅವರಿಗೆ ಧನ್ಯವಾದ" ಎಂದರು ನಿರ್ಮಾಪಕ- ನಿರ್ದೇಶಕ ಸತೀಶ್ ರಾಜ್. ‌

ನಾಯಕ ಸಿದ್ದೇಶ್, ನಾಯಕಿ ಆದ್ಯಪ್ರಿಯ, ನಟಿ ಪುಷ್ಪಸ್ವಾಮಿ, ನಟರಾದ ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ನಟಿ ರಚನಾ ಮಲ್ನಾಡ್ ಮುಂತಾದ ಕಲಾವಿದರು ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಅಶ್ವಿನಿ ಅರುಣ್ ಕೃಷ್ಣನ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆರ್ಥಿಕ ಸಲಹೆಗಾರರಾದ ಇಂದು ಶೇಖರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು